‘ಬಸವಶೈವದಲ್ಲಿ ಹಿಂದುತ್ವ’ ಪುಸ್ತಕ ಬಿಡುಗಡೆ: ಬಸವಣ್ಣ ಹಿಂದೂ, ವಚನ, ವೇದ ಒಂದೇ

ದಾವಣಗೆರೆ ಲೇಖಕ ಡಾ.ಡಿ.ಎ.ಉಪಾಧ್ಯ ರಚಿಸಿದ ‘ಬಸವಶೈವದಲ್ಲಿ ಹಿಂದುತ್ವ’ ಪುಸ್ತಕ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಲೋಕಾರ್ಪಣೆಯಾಯಿತು. ಹರ ಸಾಹಿತ್ಯ ಸಂಕುಲದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿ ‘ಬಸವಣ್ಣನವರನ್ನು ನಾಸ್ತಿಕ ಎಂಬಂತೆ ಬಿಂಬಿಸಲಾಗುತ್ತಿದೆ. ಬಸವತತ್ವ ಪಾಲಿಸುವವರನ್ನು ಆಸ್ತಿಕರನ್ನಾಗಿ ಮಾಡುವ ಬದಲು ನಾಸ್ತಿಕರನ್ನಾಗಿಸಲಾಗುತ್ತಿದೆ. ಬಸವಣ್ಣನವರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ,’ ಎಂದು ಆರೋಪಿಸಿದರು. ‘ಬಸವಣ್ಣ ಪಾಪ–ಪುಣ್ಯ, ಸ್ವರ್ಗ–ನರಕ ಅಲ್ಲಗಳೆದರೆಂದು ನಂಬಿಸಲಾಗುತ್ತಿದೆ. ಕರ್ಮ ಸಿದ್ಧಾಂತ ಟೀಕಿಸಿದ್ದಾರೆಂಬ ತಪ್ಪು ಭಾವನೆ ಮೂಡಿಸಲಾಗುತ್ತಿದೆ. ಬಸವಣ್ಣನವರು ಹೀಗೆ … Continue reading ‘ಬಸವಶೈವದಲ್ಲಿ ಹಿಂದುತ್ವ’ ಪುಸ್ತಕ ಬಿಡುಗಡೆ: ಬಸವಣ್ಣ ಹಿಂದೂ, ವಚನ, ವೇದ ಒಂದೇ