ವಚನಾನಂದ ಸ್ವಾಮಿ ಪೀಠತ್ಯಾಗಕ್ಕೆ ಒತ್ತಡ, ಮಠದ ಲೆಕ್ಕ ಪತ್ರಕ್ಕೆ ಜಟಾಪಟಿ

ಹರಿಹರ ಹರಿಹರ ಪಂಚಮಸಾಲಿ ಪೀಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ದುರುಪಯೋಗ ಮಾಡಿಕೊಂಡ ಅನುಮಾನವಿದೆ ಎಂದು ಲಿಂಗಾಯತ ಪಂಚಮಸಾಲಿ ಗುರುಪೀಠದ ಆಡಳಿತಾಧಿಕಾರಿ ಡಾ.ಎಚ್.ಪಿ. ರಾಜಕುಮಾರ್ ಆರೋಪಿಸಿದ್ದಾರೆ. ನಗರದ ಶಿವಮೊಗ್ಗ ರಸ್ತೆಯ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಹಣ ದುರುಪಯೋಗ ಮಾಡಿಕೊಂಡ ಅನುಮಾನವಿದೆ. ಇವರಿಗೆ ಲೆಕ್ಕಪತ್ರ ಕೇಳಿದಾಗಲೆಲ್ಲ ಗುರುಪೀಠದ ಪೀಠಾಧಿಪತಿ ವಚನಾನಂದ ಶ್ರೀಗಳು ಪೀಠತ್ಯಾಗ ಮಾಡಬೇಕೆಂದು ಒತ್ತಾಯಿಸುತ್ತಾರೆ’ … Continue reading ವಚನಾನಂದ ಸ್ವಾಮಿ ಪೀಠತ್ಯಾಗಕ್ಕೆ ಒತ್ತಡ, ಮಠದ ಲೆಕ್ಕ ಪತ್ರಕ್ಕೆ ಜಟಾಪಟಿ