ಕನ್ನೇರಿ ಸ್ವಾಮಿ ವಿರುದ್ಧ ಪ್ರತಿಭಟನೆಗೆ ಬಸವ ಸಂಘಟನೆಗಳ ಕರೆ

ಬೆಂಗಳೂರು ‘ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ’ದಲ್ಲಿ ಶುಕ್ರವಾರ ಭಾಗವಹಿಸಲು ಬರುತ್ತಿರುವ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಯ ವಿರುದ್ಧ ಪ್ರತಿಭಟಿಸಲು ವಿವಿಧ ಬಸವ ಸಂಘಟನೆಗಳ ಪ್ರತಿನಿಧಿಗಳು ಕರೆ ಕೊಟ್ಟಿದ್ದಾರೆ. ಜೊತೆಗೆ ಕನ್ನೇರಿ ಸ್ವಾಮಿಯನ್ನು ಬೆಂಗಳೂರಿನಿಂದ ನಿರ್ಬಂಧಿಸಲು ಬೆಂಗಳೂರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಉದ್ಯಮ ಸಮ್ಮೇಳನ’ದಲ್ಲಿ ಇಂದು ಮಧ್ಯಾಹ್ನ 12ರಿಂದ 1 ಗಂಟೆಯವರಿಗೆ ಪಾಲ್ಗೊಳ್ಳಲು ಕನ್ನೇರಿ ಸ್ವಾಮಿಗೆ ಆಹ್ವಾನ ನೀಡಲಾಗಿದೆ. “ಬಸವತತ್ವದ ವಿರುದ್ಧವಾಗಿ ನಡೆದುಕೊಳ್ಳುವ ಈ ಸ್ವಾಮಿಯನ್ನು ಕರೆದಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಬೆಂಗಳೂರಿನ … Continue reading ಕನ್ನೇರಿ ಸ್ವಾಮಿ ವಿರುದ್ಧ ಪ್ರತಿಭಟನೆಗೆ ಬಸವ ಸಂಘಟನೆಗಳ ಕರೆ