ಮೈಸೂರು ಪ್ರಾಂತ್ಯ ಬಸವತತ್ವದ ಪುಣ್ಯಭೂಮಿ: ಸಿದ್ದಲಿಂಗ ಸ್ವಾಮೀಜಿ

ಮರಿಯಾಲ ಬಸವಧರ್ಮ ಪರಿಪಾಲನೆ ಮಾಡುವ ಜೊತೆಗೆ ಶ್ರೀಮಠದ ಸೇವೆಯನ್ನು ಈ ಭಾಗದ ಜನರಿಗೆ ನೀಡುತ್ತಿರುವ ಕಾಯಕವನ್ನು ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳು ಸಾಕಾರಗೊಳಿಸುತ್ತಾ ಬಂದಿದ್ದಾರೆ ಎಂದು ತುಮಕೂರು ಸಿದ್ದಗಂಗಾ ಕ್ಷೇತ್ರದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು. ತಾಲೂಕಿನ ಮರಿಯಾಲ ಗ್ರಾಮದಲ್ಲಿರುವ ಶ್ರೀಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನ ಶ್ರೀಮಠದಲ್ಲಿ ನಡೆದ ಎರಡನೇ ದಿನದ ಬಸವೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಮುರುಘರಾಜೇಂದ್ರಸ್ವಾಮೀಜಿ ಅವರ 109 ನೇ ವರ್ಷದ ಸ್ಮರಣೋತ್ಸವ, ಮಹಾಂತ ಮಂಟಪದ ಉದ್ಘಾಟನೆ, ನೂತನ ಬಸವದ್ವಾರ ಹಾಗೂ ಪುತ್ಥಳಿಗಳ ಅನಾವರಣ ಹಾಗೂ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ … Continue reading ಮೈಸೂರು ಪ್ರಾಂತ್ಯ ಬಸವತತ್ವದ ಪುಣ್ಯಭೂಮಿ: ಸಿದ್ದಲಿಂಗ ಸ್ವಾಮೀಜಿ