ಬಸವೋತ್ಸವ: ಶರಣ, ಶರಣೆಯರಿಂದ ಸಾಮೂಹಿಕ ವಚನ ಪಾರಾಯಣ

ಬೀದರ : ನಿಸರ್ಗದ ಮಡಿಲಲ್ಲಿ ಇರುವ ಇಲ್ಲಿಯ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣತಾಯಿ ಅವರ ದ್ವಿತೀಯ ಸ್ಮರಣೋತ್ಸವ ಅಂಗವಾಗಿ ಲಿಂಗಾಯತ ಮಹಾಮಠದಿಂದ ಹಮ್ಮಿಕೊಳ್ಳಲಾದ ಎರಡು ದಿನಗಳ ‘ಬಸವೋತ್ಸವ’ಕ್ಕೆ ಶುಕ್ರವಾರ ವಿಧ್ಯುಕ್ತ ಚಾಲನೆ ದೊರೆಯಿತು. ಮುಂಜಾವಿನ ಆಹ್ಲಾದಕರ ವಾತಾವರಣದಲ್ಲಿ ಶ್ರದ್ಧೆ, ಭಕ್ತಿಯ ಸಾಮೂಹಿಕ ವಚನ ಪಾರಾಯಣದೊಂದಿಗೆ ಬಸವೋತ್ಸವದ ಚಟುವಟಿಕೆಗಳು ಆರಂಭಗೊಂಡವು. ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ವೀರಭದ್ರಪ್ಪ ನಂದ್ಯಾಳ ಷಟ್‍ಸ್ಥಲ ಧ್ವಜಾರೋಹಣಗೈದರು. ನೆರೆದಿದ್ದ ಶರಣ ಶರಣೆಯರು ನೂರೆಂಟು ವಚನಗಳ ಪಾರಾಯಣವನ್ನು ಸುಶ್ರಾವ್ಯವಾಗಿ ಮಾಡಿದರು. ವಚನ ನಾದ ಪರಿಸರದಲ್ಲಿ ಅನುರಣಿಸಿತು. … Continue reading ಬಸವೋತ್ಸವ: ಶರಣ, ಶರಣೆಯರಿಂದ ಸಾಮೂಹಿಕ ವಚನ ಪಾರಾಯಣ