ಒಲ್ಲದ ಮನಸ್ಸಿನಿಂದ ಇಷ್ಟಲಿಂಗ ತೆಗೆದ ಗುಂಡ ಬಸವೇಶ್ವರರು

ಇಷ್ಟಲಿಂಗ ತೆಗೆದ ಶರಣರು

ಲಿಂಗಾಯತ ಧರ್ಮದಲ್ಲಿ ನುಸುಳಿದ ವೈದಿಕತೆ

ನೋವು, ಆಕ್ರೋಶದಿಂದ ಪ್ರತ್ಯೇಕವಾದ ಶರಣರು

ಲಿಂಗಾಯತರಿಂದ ಪ್ರತ್ಯೇಕವಾದ ಆರೂಢರು

ಒಲ್ಲದ ಮನಸ್ಸಿನಿಂದ ಇಷ್ಟಲಿಂಗ ತೆಗೆದ ಗುಂಡ ಬಸವೇಶ್ವರರು

ವಿಭಿನ್ನ ಪರಂಪರೆ ಸೃಷ್ಟಿಸಿದ ಕೊಡೇಕಲ್ ಬಸವಣ್ಣ, ಮಂಟೆ ಸ್ವಾಮಿ

ಬೇರೆಯಾದರೂ ಹತ್ತಿರವೇ ಉಳಿದ ಶರಣ ಸಂಪ್ರದಾಯಗಳು

ಬೇಸರದಿಂದ ಹೊರನಡೆದರೂ ಅನೇಕರಿಗೆ ಲಿಂಗಾಯತದ ಸಂಕೇತವಾದ ಇಷ್ಟಲಿಂಗ ತ್ಯಜಿಸುವುದು ಕಷ್ಟವಾಯಿತು. ಆ ನೋವು, ಅನಿವಾರ್ಯತೆ, ಗೊಂದಲ ಗುಂಡ ಬಸವೇಶ್ವರರ ಜೀವನದಲ್ಲಿ ಕಾಣುತ್ತದೆ.

ನಾಗಾವಿಯಲ್ಲಿ ನೆಲೆಸಿದ್ದ ಗುಂಡ ಬಸವೇಶ್ವರರು ಡಂಗುರದ ಹಾಡುಗಳ ಮೂಲಕ ನೀತಿ ಪ್ರಚಾರ ಮಾಡುತ್ತಿದ್ದರು. ಇವರು ದಿನಕ್ಕೆ 17 ಸಲ ಇಷ್ಟಲಿಂಗ ಮತ್ತು ಪ್ರಾಣಲಿಂಗ ಎರಡೂ ಪೂಜೆಗಳನ್ನು ಮಾಡುತಿದ್ದರು.

ಅವರು ಕರಡಿ ವಾದ್ಯದ ನಾದಕ್ಕೆ ಲಿಂಗಪೂಜೆ ಮಾಡುತ್ತಿದ್ದರು. ಇಷ್ಟಲಿಂಗ ತೆಗೆಯುವಂತೆ ಅವರ ದೈವ ಸಂಗಮೇಶನಿಂದ ಮೂರು ಬಾರಿ ಆಜ್ಞೆಯಾಯಿತು ಎಂದು “ಗುಂಡ ಬಸವೇಶ್ವರ ಚರಿತ್ರೆ” ಹೇಳುತ್ತದೆ.

ಆದರೂ ಒಪ್ಪದೇ ಗುಂಡ ಬಸವೇಶ್ವರರು ಇಷ್ಟಲಿಂಗ ತೆಗೆಯುವಂತೆ ಒಂದು ಬಹಿರಂಗ ಘಟನೆ ಪ್ರೇರೇಪಿಸಲಿ ಎಂದು ಕಾದರು. ಅಷ್ಟರಲ್ಲೇ ಅವರ ಲಿಂಗ ಪೂಜೆಗೆ ಕೆಲವು ಜಂಗಮರಿಂದ ವಿರೋಧ ಬಂದಿತು.

ಲಿಂಗ ಪೂಜೆಗೆ ಕರಡಿ ವಾದ್ಯ ಸೂಕ್ತವಲ್ಲ, ಅದನ್ನು ನಿಲ್ಲಿಸದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂಬ ಬೆದರಿಕೆ ಬಂದಿತು. ಕರಡಿ ವಾದ್ಯವಿಲ್ಲದೆ ಪೂಜೆ ಮಾಡುವುದಿಲ್ಲ ಎಂದು ಅವರು ಇಷ್ಟಲಿಂಗ ಪೂಜೆ ನಿಲ್ಲಿಸಿದರು.

ಸಾಯುವ ಸಮಯದಲ್ಲಿ ತಮ್ಮ ಐದು ಮಕ್ಕಳನ್ನು ಕರೆದು ಇಷ್ಟಲಿಂಗ ಪೂಜೆ ಮಾಡು ಎಂದರೆ ಮಾಡಿ ಬೇಡವೆಂದರೆ ನಿಲ್ಲಿಸಿ ಎಂದರು. ಅಂತ್ಯಕ್ರಿಯೆಯ ಸಮಯದಲ್ಲಿ ಕರಸ್ಥಲದಲ್ಲಿ ಇಷ್ಟಲಿಂಗ ಹಿಡಿದಿದ್ದರು.

(‘ಗುಂಡ ಬಸವೇಶ್ವರನ ಚರಿತ್ರೆ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೫)

Share This Article
Leave a comment

Leave a Reply

Your email address will not be published. Required fields are marked *