ಇಷ್ಟಲಿಂಗ ತೆಗೆದ ಶರಣರು
ಲಿಂಗಾಯತ ಧರ್ಮದಲ್ಲಿ ನುಸುಳಿದ ವೈದಿಕತೆ
ನೋವು, ಆಕ್ರೋಶದಿಂದ ಪ್ರತ್ಯೇಕವಾದ ಶರಣರು
ಲಿಂಗಾಯತರಿಂದ ಪ್ರತ್ಯೇಕವಾದ ಆರೂಢರು
ಒಲ್ಲದ ಮನಸ್ಸಿನಿಂದ ಇಷ್ಟಲಿಂಗ ತೆಗೆದ ಗುಂಡ ಬಸವೇಶ್ವರರು
ವಿಭಿನ್ನ ಪರಂಪರೆ ಸೃಷ್ಟಿಸಿದ ಕೊಡೇಕಲ್ ಬಸವಣ್ಣ, ಮಂಟೆ ಸ್ವಾಮಿ
ಬೇರೆಯಾದರೂ ಹತ್ತಿರವೇ ಉಳಿದ ಶರಣ ಸಂಪ್ರದಾಯಗಳು
ಗುಂಡ ಬಸವೇಶ್ವರರ ನಂತರ ಬಂದ ಕೊಡೇಕಲ್ ಬಸವಣ್ಣ ಆರೂಢರನ್ನು ಸಂಘಟಿಸಿದರು. ಇವರು ಕಲ್ಯಾಣದ ಬಸವಣ್ಣನ ಭಕ್ತರಾಗಿದ್ದರೂ ಇಷ್ಟಲಿಂಗವಿಲ್ಲದ ವಿಭಿನ್ನ ಸಂಪ್ರದಾಯವನ್ನು ಬೆಳಸಿದರು.
ಇವರು ಒಂದು ಕಾಲಿನಲ್ಲಿ ಹಿಂದೂಗಳ ಪಾದರಕ್ಷೆ, ಮತ್ತೊಂದರಲ್ಲಿ ಮುಸುಲ್ಮಾನರ ಬೂಟು ಧರಿಸಿ ಸಂಚರಿಸುತ್ತಾ ಲಿಂಗಾಯತ, ನಾಥ ಮತ್ತು ಮುಸಲ್ಮಾನ ಸಂಸ್ಕೃತಿಗಳ ಸಮನ್ವಯ ಸಾಧಿಸಿದರು.
ಈ ಸಂಪ್ರದಾಯದ ಪೀಠಾಧಿಪತಿಗಳು ಲಿಂಗಾಯತರಾದರೂ ಇಷ್ಟಲಿಂಗ ಧರಿಸುವುದಿಲ್ಲ. ಸತ್ತವರನ್ನು ಮುಸ್ಲಿಮರಂತೆ ದಫನ್ ಮಾಡುತ್ತಾರೆ. ಹಿಂದೂ, ಮುಸ್ಲಿಂ ಗುರುಗಳು ಜಯಘೋಷ ಮತ್ತು ದೀನ್ ಹೇಳುತ್ತಾರೆ.
ಇವರ ಮಗ ರಾಚಪಯ್ಯ, ಶಿಷ್ಯ ಮಂಟೇಸ್ವಾಮಿ ದಕ್ಷಿಣಕ್ಕೆ ಹೋಗಿ ನೆಲಸಿದರು. ಆಚಾರ್ಯರ ನಡೆಯಿಂದ ರೋಸಿ ತಮ್ಮ ಮೂಲ ಜಾತಿಗಳಿಗೆ ಮರಳಿದ್ದ ದಲಿತರು ಮಂಟೇಸ್ವಾಮಿ ಭಕ್ತರಾದರು.
ಮಂಟೇಸ್ವಾಮಿ ಅನುಯಾಯಿಗಳು ಸೃಷ್ಟಿಸಿದ ಜಾನಪದ ಸಾಹಿತ್ಯದಲ್ಲಿ ತನ್ನ ಮೂಲ ಸ್ವರೂಪ ಕಳೆದುಕೊಂಡು ಶೋಷಣೆಯ ಮಾಧ್ಯಮವಾದ ಲಿಂಗಾಯತದ ವಿರುದ್ಧ ಆಕ್ರೋಶ ಕಾಣಿಸುತ್ತದೆ.
ಒಂದು ಹಾಡಿನಲ್ಲಿ ಮಡಿವಾಳ, ಕುಂಬಾರ, ಹಡಪದ ಮುಂತಾದ 9 ಹಿಂದುಳಿದ ಜಾತಿಗಳು ಮಾತ್ರ ನಿಜ ಲಿಂಗಾಯತರೆಂದು ಮಿಕ್ಕವೆರಲ್ಲ “ಕಲ್ಲು ವಡ್ಡರಾಗಿರಿ” ಎಂದು ಮಂಟೇಸ್ವಾಮಿ ಶಾಪ ಕೊಡುತ್ತಾರೆ.
(‘ಕೊಡೇಕಲ್ಲ ಬಸವಣ್ಣ: ಒಂದು ಅಧ್ಯಯನ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೬)