ವಿಶೇಷ ನೆರವು

ಹೆಸರು :

ನಿಂಗನಗೌಡ ಹಿರೇಸಕ್ಕರಗೌಡ್ರ

ಸ್ಥಳ:

ಗದಗ

ದಿನಾಂಕ:

04/07/2025

ದಾಸೋಹ ಮೊತ್ತ:

10000

ದಾಸೋಹದ ವಿಧ:

ಮಹಾ ಪೋಷಕ

ಪರಿಚಯ:

ನಿವೃತ್ತ ಶಿಕ್ಷಕರು. ಬಸವ ತತ್ವನಿಷ್ಟ ಗದಗ ಬೆಟಗೇರಿ ಬಸವದಳದ ಪ್ರಮುಖರು. ವಚನ ಅಧ್ಯಯನ ಮಾಡಿದವರು, ಮಾಡುತ್ತಿರುವರು. ದಾಸೋಹ ಪ್ರೇಮಿಗಳು. ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ಆಪ್ತರಾಗಿದ್ದವರು.

ಸಂದೇಶ:

“ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ಮತ್ತು ಅವರ ವಚನಗಳು, ಪ್ರಸ್ತುತ ಕಾಲದ ಅಗತ್ಯತೆ, ಅವಶ್ಯಕತೆಯನ್ನು ಪೂರೈಸಬಲ್ಲವು. ದೇವರು ದೇವರೆಂದು ಸುಮ್ಮನೆ ಅಂಧಾನುಕರಣೆ ಬೇಡ. ಕಾಯ ಇದೆ ಎಂದ ಬಳಿಕ ‘ಕಾಯಕ’ ಮಾಡಬೇಕು. ಕಾಯಕದಲ್ಲಿಯೇ ಕೈಲಾಸ ಕಂಡವರು-ಶರಣರು. ಮೂಢ ನಂಬಿಕೆ, ಹಲವು ದೈವಾಚರಣೆಗಳನ್ನು ಶರಣರು ತಿರಸ್ಕರಿಸಿದರು. ತಮ್ಮ ತಮ್ಮ ಅರಿವಿನ-ಚೈತನ್ಯವನ್ನೇ ನಂಬಿ, ನಡೆಯಲ್ಲಿಯೇ ನುಡಿ ಪೂರೈಸಿದವರು. ಕಾಯಕ, ದಾಸೋಹಕ್ಕೆ ಮಹತ್ವ ಕೊಟ್ಟವರು-ಶರಣರು. ಅಂಥ ಮಹಾಪುರುಷರನ್ನೂ ಅವರ ವಚನ ಪ್ರಸಾರವನ್ನೂ ಮಾಡುತ್ತಿರುವ ‘ಬಸವ ಮೀಡಿಯ’ ಇನ್ನೂ ಹೆಚ್ಚು ಹೆಚ್ಚಾಗಿ ಶರಣರ ಬಗ್ಗೆ, ಅವರ ಕಾಯಕ, ದಾಸೋಹ ಕುರಿತು ಪ್ರಚಾರ ಮಾಡಲಿ. ಎಲ್ಲರಲ್ಲಿಯೂ ಬಸವ ಪ್ರಜ್ಞೆ ಜಾಗ್ರತೆಯಾಗುವಂತೆ ಮಾಡಲಿ” ಎಂದು ಹಾರೈಸುವೆ. ಶರಣಾರ್ಥಿಗಳು.

ಹೆಸರು :

ಪ್ರೊ. ಎಸ್. ಎಸ್. ಹರ್ಲಾಪುರ, ಸಾವಿತ್ರಿ ಹರ್ಲಾಪುರ

ಸ್ಥಳ:

ಅಣ್ಣಿಗೇರಿ

ದಿನಾಂಕ:

25/06/2025

ದಾಸೋಹ ಮೊತ್ತ:

10000

ದಾಸೋಹದ ವಿಧ:

ಮಹಾ ಪೋಷಕ

ಪರಿಚಯ:

ಕಿರು ಪರಿಚಯ ಬರಲಿದೆ

ಸಂದೇಶ:

ಸಂದೇಶ ಬರಲಿದೆ

ಹೆಸರು :

ಡಾ. ಪೂರ್ಣಿಮ ಜೆ.

ಸ್ಥಳ:

ಬೆಂಗಳೂರು

ದಿನಾಂಕ:

27/06/2025

ದಾಸೋಹ ಮೊತ್ತ:

10000

ದಾಸೋಹದ ವಿಧ:

ಮಹಾ ಪೋಷಕ

ಪರಿಚಯ:

ಡಾ. ಪೂರ್ಣಿಮ ಮೂಲತಃ ಕಡೂರು ತಾಲೂಕಿನ ಚೌಳಹಿರಿಯೂರಿನವರು. ಎಂ.ಬಿ.ಬಿ.ಎಸ್., ಡಿ.ಜಿ.ಒ., ಎಂ.ಎಸ್ (ಒ.ಬಿ.ಜಿ) ಓದಿದ್ದಾರೆ. ಈಗ ಬೆಂಗಳೂರಿನ ಇಂದಿರಾನಗರದ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ಕಾಯಕ ಸಲ್ಲಿಸುತ್ತಿದ್ದಾರೆ.

ಸಂದೇಶ:

ಬಸವ ಮೀಡಿಯಾ ಎಂಬ ಬಸವ ಜ್ಯೋತಿ ಬಸವ ತತ್ವವನ್ನು ವಿಶ್ವದ ಮೂಲೆ ಮೂಲೆಗೂ ಪ್ರಸರಿಸಲಿ. ಈ ಜ್ಯೋತಿಯ ಹನಿ ಎಣ್ಣೆಗಾಗಿ ನನ್ನ ದಾಸೋಹ ಉಪಯೋಗವಾಗಲಿ.

ಹೆಸರು :

ಸಂಗಮೇಶ ವೀರಪ್ಪ ಅರಳಿ

ಸ್ಥಳ:

ಬೆಳಗಾವಿ

ದಿನಾಂಕ:

25/06/2025

ದಾಸೋಹ ಮೊತ್ತ:

5000

ದಾಸೋಹದ ವಿಧ:

ಪೋಷಕ

ಪರಿಚಯ:

ಬೆಳಗಾವಿ ಲಿಂಗಾಯತ ಸಂಘಟನೆಯ ಉಪಾಧ್ಯಕ್ಷರು, ಬೀಜದ ವ್ಯಾಪಾರಿ, ಬೆಳಗಾವಿ ಅಗ್ರೋ ಟ್ರೇಡರ್ಸ್ ಅಸೋಸಿಯೇಷನ್ ಉಪಾಧ್ಯಕ್ಷರು, ಕೆಎಲ್ಇ ಸಂಸ್ಥೆಯ ಅಜೀವ ಸದಸ್ಯರು.

ಸಂದೇಶ:

ಬಸವ ಮೀಡಿಯಾ ಇದೇ ರೀತಿ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಸಾಗಲಿ. ಬಸವಾದಿ ಶರಣರ ತತ್ವವನ್ನು ನಮ್ಮ ಸಮಾಜ ಮತ್ತು ಜಗತ್ತಿನಾದ್ಯಂತ ಬಿತ್ತುವ ಕೆಲಸವನ್ನು ಮುನ್ನಡೆಸಿಕೊಂಡು ಹೋಗಲಿ.