ಹುಬ್ಬಳ್ಳಿ ವಚನ ಬರವಣಿಗೆ ಸ್ಪರ್ಧೆಯಲ್ಲಿ 60 ಶರಣೆಯರು ಭಾಗಿ

ಕುಮಾರಣ್ಣ ಪಾಟೀಲ್
ಕುಮಾರಣ್ಣ ಪಾಟೀಲ್

ಹುಬ್ಬಳ್ಳಿ

ಶರಣೆ ಗಂಗಾಬಿಕಾ ಬಳಗದಿಂದ ಶರಣೆಯರಿಗಾಗಿ ಸೋಮವಾರ ಏರ್ಪಡಿಸಲಾಗಿದ್ದ ಬಸವಾದಿ ಶರಣರ ವಚನ ಬರವಣಿಗೆ ಸ್ಪರ್ಧೆಯಲ್ಲಿ 60 ಜನರು ಭಾಗವಹಿಸಿದರು.

20 ವರ್ಷದಿಂದ 80 ವರ್ಷ ವಯಸ್ಸಿನ ಶರಣೆಯರು ಸ್ಪರ್ಧೆಯಲ್ಲಿ ಭಕ್ತಿ, ಉತ್ಸಾಹದಿಂದ ಪಾಲ್ಗೊಂಡದ್ದು ವಿಶೇಷವಾಗಿತ್ತು.

ವಿಜೇತರಾದವರಿಗೆ ಬಹುಮಾನದ ಮೊತ್ತ ಪ್ರಥಮ ₹. 2000/- ದ್ವಿತೀಯ ₹ 1500/- ತೃತೀಯ ₹ 700/- ಎಂದು ಘೋಷಿಸಲಾಗಿದೆ. ಒಂದು ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಹಾಗೂ ಕಾರ್ಯಕ್ರಮವೊಂದನ್ನು ಏರ್ಪಡಿಸಿ, ವಿಜೇತರಿಗೆ ಸತ್ಕರಿಸಲಾಗುವುದು ಎಂದು ಗಂಗಾಂಬಿಕಾ ಬಳಗದ ಅಧ್ಯಕ್ಷರಾದ ಶರಣೆ ಸ್ನೇಹಾ ಭೂಸನೂರ ತಿಳಿಸಿದರು.

Share This Article
Leave a comment

Leave a Reply

Your email address will not be published. Required fields are marked *