ಕೊಲ್ಹಾಪುರ :
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ರಾಜಾಪೂರವಾಡಿಯಲ್ಲಿ ಬಸವ ಮಂಟಪದ ವಾರ್ಷಿಕೋತ್ಸವದ ಅಂಗವಾಗಿ, ಬೆಳಗಾವಿ ಜಿಲ್ಲೆಯ ನಾಗನೂರ ಗುರುಬಸವ ಮಠದ ಪೂಜ್ಯ ಬಸವಗೀತಾ ಮಾತಾಜಿ ಅವರಿಂದ ‘ಬಸವಧರ್ಮ ಪ್ರವಚನ’ವನ್ನು ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ 21ರಿಂದ ಆರಂಭವಾಗಿ 25 ರವರೆಗೆ 5 ದಿನಗಳ ಕಾಲ ಪ್ರತಿದಿನ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ಬಸವ ಮಂಟಪದ ಆವರಣದಲ್ಲಿ ನಡೆಯಲಿದೆ.
ಊರಿನ ಶರಣ ಶರಣರೆಯರೆಲ್ಲ ಪ್ರವಚನಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹಿರಿಯರು ಹಾಗೂ ಬಸವ ಮಂಟಪದ ಸರ್ವಸದಸ್ಯರು ಕೋರಿದ್ದಾರೆ.
