ಆಯುಷ್ಯದ ಬೆಳಕು ಆರುವ ಮುನ್ನ ಜ್ಞಾನದ ಬೆಳಕು ಪಡೆಯಿರಿ

ಚಿಕ್ಕಮಗಳೂರು

ಅನುದಿನಂಗಳೆಂಬವು ಪ್ರಣತೆಯಾಗಿ
ವರುಷವೆಂಬವು ಬತ್ತಿಯಾಗಿ
ಜೀವಜಾತಿಯ ಬೆಳಗ ಬೆಳಗಿನಲರಿಯಬೇಕು
ಬೆಳಗುಳ್ಳಲ್ಲಿ ಆತ ನಡೆಸಿದಂತೆ ನಡೆಯಬೇಕು
ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು
ಎಣ್ಣೆಯೆಂಬ ಜವ್ವನ ಸವೆಯದ ಮುನ್ನ
ಬೆಳಗು ಕತ್ತಲೆಯಾಗದ ಮುನ್ನ ರೇಕಣ್ಣಪ್ರಿಯ ನಾಗಿನಾಥ ಬೆಳಗ ಬೆಳಗಿನಲರಿಯಬೇಕು
-ಬಹುರೂಪಿ ಚೌಡಯ್ಯ

ಬೆಳಕು ಬಹುದೊಡ್ಡ ರೂಪಕ. ಅದು ಜ್ಞಾನಕ್ಕೆ, ಜೀವಕ್ಕೆ, ಆಯುಷ್ಯಕ್ಕೆ ಸಂಕೇತ. ದೇವಕೃಪೆಯ ಸಂಕೇತವೂ ಹೌದು. ಆ ಬೆಳಕಿನಲ್ಲಿಯೇ ಎಲ್ಲ ಜೀವರಾಶಿಗಳು ಬದುಕಿರುವುದು.

ಬಹುರೂಪಿ ಚೌಡಯ್ಯನವರ ಮೇಲಿನ ವಚನ ಈ ಎಲ್ಲ ಸಂಗತಿಗಳನ್ನು ಸಂಕೇತಿಸಿ ಬೆಳಗನ್ನು ಅರ್ಥೈಸಿದೆ.

ದಿನ-ವರ್ಷಗಳ ಲೆಕ್ಕದಲ್ಲಿ ಆಯುಷ್ಯದ ಬೆಳಕು ಕಳೆದುಹೋಗುತ್ತಿರುತ್ತದೆ. ಆ ಬೆಳಗು ತೀರುವವರೆಗೂ ದೇವನ ಅನುಗ್ರಹದ ಬೆಳಕಿನಲ್ಲಿ ನಮ್ಮ ನಡೆ ನುಡಿಗಳೆಲ್ಲವನ್ನು ರೂಪಿಸಿಕೊಳ್ಳಬೇಕು. ಎಣ್ಣೆ ಇರುವಾಗಲೇ ಜ್ಯೋತಿ ಪ್ರಜ್ವಲಿಸಿ ಉರಿಯುವುದು. ಜೀವನೋತ್ಸಾಹವೆಂಬುದೂ ಎಣ್ಣೆಯೇ.

ಜವ್ವನ ಎಂದರೆ ಉತ್ಸಾಹ ಎಂದು ಪರಿಭಾವಿಸಬೇಕು. ಆ ಉತ್ಸಾಹ ತೀರುವ ಮುನ್ನವೇ, ಆಯುಷ್ಯದ ಬೆಳಕು ಆರದ ಮುನ್ನವೇ ಜ್ಞಾನದ ಬೆಳಕಿನಲ್ಲಿ ದೇವನ ಬೆಳಕನ್ನು ಅರಿಯಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *

ಬಸವಕೇಂದ್ರ ಶಿವಮೊಗ್ಗ, ಚಿಕ್ಕಮಗಳೂರು