ಭೀಮಣ್ಣ ಖಂಡ್ರೆ ನಿಧನಕ್ಕೆ ಸಿದ್ಧಲಿಂಗ ಮಹಾಸ್ವಾಮಿಗಳ ಸಂತಾಪ

ಬಸವ ಮೀಡಿಯಾ
ಬಸವ ಮೀಡಿಯಾ

ತುಮಕೂರು:

ಮಾಜಿ ಸಚಿವರು, ಸಮಾಜದ ಮುಖಂಡರಾದ ಶತಾಯುಷಿ ಶ್ರೀಯುತ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಸಿದ್ಧಗಂಗಾ ಮಠಾಧ್ಯಕ್ಷರಾದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಆಳವಾದ ಸಂತಾಪ ಸೂಚಿಸಿದ್ದಾರೆ.

ಭೀಮಣ್ಣ ಖಂಡ್ರೆ ಅವರು ನಮ್ಮ ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ, ದಕ್ಷತೆ-ಬದ್ಧತೆ- ಪ್ರಾಮಾಣಿಕತೆಯ ಪ್ರತಿರೂಪ.

ಸಮಾಜದ ಧುರೀಣ, ನಾಡಿನ ರಾಜಕೀಯ ಜೀವನದ ಅಪರೂಪದ ವ್ಯಕ್ತಿತ್ವ, ಗುರುಲಿಂಗ ಜಂಗಮ ಪ್ರೇಮಿ ಎಂದು ನೆನಪಿಸಿಕೊಂಡಿದ್ದಾರೆ.

ದಕ್ಷತೆ, ಬದ್ಧತೆ ಮತ್ತು ಪ್ರಾಮಾಣಿಕತೆಯ ಪ್ರತಿರೂಪವಾಗಿದ್ದ ಭೀಮಣ್ಣ ಖಂಡ್ರೆ ಅವರು ಸಮಾಜದ ಮುಖಂಡರಾಗಿದ್ದರು. ಜನಾನುರಾಗಿ ಬದುಕು ನಡೆಸಿದ ಶತಾಯುಷಿ ನಾಯಕನ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಪೂಜ್ಯರು ಸ್ಮರಿಸಿದ್ದಾರೆ.

ಸಿದ್ಧಗಂಗಾ ಮಠದ ಪರಮ ಭಕ್ತರಾಗಿದ್ದ ಖಂಡ್ರೆ ಅವರು ಯಾವತ್ತೂ ನಮ್ಮ ಪರಮಪೂಜ್ಯ ಗುರುದೇವರ ಕೃಪೆಗೆ ಪಾತ್ರರಾಗಿದ್ದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾಗಿ ಸಮಾಜವನ್ನು ಮುನ್ನಡೆಸಿದ ಮಹತ್ವದ ಪಾತ್ರ ವಹಿಸಿದ್ದರು. ಅವರ ಕಾಯದ ಅವತಾರ ಅಳಿದು, ಆತ್ಮದ ಸುಳುಹು ಬಸವ ಬೆಳಕಿನಲ್ಲಿ ಸೇರಿ ಹೋಗಿದೆ. ಅದಕ್ಕಾಗಿ ನಾವು ಸಂತೋಷ ಪಡಬೇಕೇ ಹೊರತು ಸಂತಾಪ ಪಡಬೇಕಿಲ್ಲ ಎಂದಿದ್ದಾರೆ.

ಅವರ ಕಾಯಕಮಯ ಜೀವನ ಮುಕ್ತಾಯಗೊಂಡಿದ್ದು, ಆತ್ಮವು ಬಸವ ಬೆಳಕಿನಲ್ಲಿ ಲೀನವಾಗಿದೆ. ಆದ್ದರಿಂದ ಆತ್ಮಶಾಂತಿಗಾಗಿ ಸಂತಾಪಕ್ಕಿಂತ ಗೌರವಭಾವವೇ ಪ್ರಧಾನವಾಗಬೇಕು ಎಂಬ ಸಂದೇಶವನ್ನು ಶ್ರೀಗಳು ನೀಡಿದ್ದಾರೆ. ಆದರೆ ಮಾನವೀಯವಾಗಿ ಅವರ ಅಗಲಿಕೆಯ ನೋವು ಕುಟುಂಬಸ್ಥರಿಗೆ ದುಃಖ ತಂದಿರುವುದನ್ನು ಒಪ್ಪಿಕೊಂಡ ಶ್ರೀಗಳು, ಆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *