ಜಾತಿ-ಮತದ ಭೇದವಿಲ್ಲದ ಶಿವಕುಮಾರ ಸ್ವಾಮೀಜಿ ಶಿವಗಣ ಆರಾಧನೆ ಇಂದು

ಗುರುರಾಜ ಮನಹಳ್ಳಿ
ಗುರುರಾಜ ಮನಹಳ್ಳಿ

ಬಸವಣ್ಣನವರ ತತ್ವಗಳನ್ನು ಅಕ್ಷರಶಃ ಪಾಲಿಸಿದವರು ಶ್ರೀಗಳು.

ತ್ರಿವಿದಿ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳವರ ಶಿವಗಣ ಆರಾಧನೆ.

ಸಿದ್ದಗಂಗಾ ಶ್ರೀಗಳು ಕೇವಲ ಒಬ್ಬ ವ್ಯಕ್ತಿಯಾಗಿರದೆ, ಹಸಿದವರಿಗೆ ಅನ್ನ, ಜ್ಞಾನದ ಹಸಿವು ಇದ್ದವರಿಗೆ ಅಕ್ಷರ ಮತ್ತು ಬದುಕಿನಲ್ಲಿ ದಾರಿ ಕಾಣದವರಿಗೆ ಆಶ್ರಯ ನೀಡಿದ ಮಹಾನ್ ಚೇತನ.

ಅನ್ನ ದಾಸೋಹ: ಜಾತಿ-ಮತದ ಭೇದವಿಲ್ಲದೆ ಮಠಕ್ಕೆ ಬರುವ ಸಹಸ್ರಾರು ವಿದ್ಯಾರ್ಥಿಗಳಿಗೆ ಮತ್ತು ಭಕ್ತರಿಗೆ ನಿರಂತರ ಉಚಿತ ಊಟದ ವ್ಯವಸ್ಥೆ.

ಅಕ್ಷರ ದಾಸೋಹ: ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ಅವರ ಬದುಕನ್ನು ರೂಪಿಸುವುದು ಮೂಲಕ ಲಕ್ಷಾಂತರ ಗ್ರಾಮೀಣ ಭಾಗದ ಮಕ್ಕಳ ಬಾಳಿಗೆ ಬೆಳಕಾದರು.

ಆಶ್ರಯ ದಾಸೋಹ: ದೂರದ ಊರುಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಮಠವು ತಾಯಿಯ ಮಡಿಲಂತಿದೆ. ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಿ ಕೊಟ್ಟವರು.

ಕಾಯಕವೇ ಕೈಲಾಸ: ತಮ್ಮ 111ನೇ ವಯಸ್ಸಿನವರೆಗೂ ಅವರು ನಿರಂತರವಾಗಿ ಕೆಲಸದಲ್ಲಿ ತೊಡಗಿದ್ದರು. “ದುಡಿಯುವ ಕೈಗಳೇ ದೇವರೆಂದು” ನಂಬಿದ್ದರು.

ಸಮಾನತೆ: ಸಿದ್ದಗಂಗಾ ಮಠದ ದ್ವಾರಗಳು ಎಲ್ಲ ಧರ್ಮದವರಿಗೂ ಸದಾ ತೆರೆದಿರುತ್ತವೆ. ಬಸವಣ್ಣನವರ ತತ್ವಗಳನ್ನು ಅಕ್ಷರಶಃ ಪಾಲಿಸಿದವರು ಶ್ರೀಗಳು.

ಶ್ರೀಗಳು 21 ಜನವರಿ 2019 ರಂದು ಲಿಂಗೈಕ್ಯರಾದರು (ಶಿವಗಣ ಸೇರಿದರು). “ನಮಗಿಂತ ಮೊದಲು ಸಮಾಜ, ನಮ್ಮ ನಂತರ ನಾವು” – ಇದು ಶ್ರೀಗಳ ಬದುಕಿನ ಸಾರವಾಗಿತ್ತು. ಈ ದಿನವನ್ನು ‘ದಾಸೋಹ ದಿನ’ ವನ್ನಾಗಿ ಆಚರಿಸಲಾಗುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
Leave a comment

Leave a Reply

Your email address will not be published. Required fields are marked *