‘ಮಾಧ್ಯಮಗಳಲ್ಲಿ ನಿರಂತರ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿರುವುದು ಸಂತೋಷದ ಸಂಗತಿ.’
ಭಾಲ್ಕಿ
(‘ಬಸವ ಸಂಸ್ಕೃತಿ ಅಭಿಯಾನ’ದ ಕುರಿತು ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದೇವರಿಗೆ ಬಸವ ಸಂಘಟನೆಗಳು ಗುರುವಾರ ಮನವಿ ಪತ್ರ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಇಂದು ಭಾಲ್ಕಿ ಶ್ರೀಗಳು ಹೇಳಿಕೆ ನೀಡಿದ್ದಾರೆ)
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಹಾಗೂ ಜಾಗತಿಕ ಲಿಂಗಾಯತ
ಮಹಾಸಭೆ ಸೇರಿದಂತೆ ನಾಡಿನ ಎಲ್ಲಾ ಬಸವಪರ ಸಂಘಟನೆಗಳ ಸಹಕಾರದೊಂದಿಗೆ ಕರ್ನಾಟಕ
ರಾಜ್ಯಾದ್ಯಂತ ಸಪ್ಟೆಂಬರ್ ೦೧ ರಿಂದ ‘ಬಸವ ಸಂಸ್ಕೃತಿ ಅಭಿಯಾನ’ ಪ್ರಾರಂಭವಾಗಲಿದ್ದು, ಅದರ ಸಿದ್ಧತೆ ಭರದಿಂದ ಸಾಗುತ್ತಿದೆ.
ಈ ಅಭಿಯಾನ ಬಸವತತ್ವದ ಪ್ರಸಾರ, ಸಮಾಜದ ಸಂಘಟನೆ ಮತ್ತು ಏಕತೆಗಾಗಿ ಹಮ್ಮಿಕೊಳ್ಳಲಾಗಿದ್ದು, ಬಸವಾದಿ ಶರಣರ ತತ್ವಾದರ್ಶಗಳನ್ನು ನಂಬುವ ಎಲ್ಲ ಸಂಘಟನೆಗಳು ಈ ಅಭಿಯಾನದ ಯಶಸ್ಸಿಗಾಗಿ ಶ್ರಮಿಸಬೇಕಾಗಿದೆ.
ಸಪ್ಟೆಂಬರ್ ೦೧ ರಿಂದ ಬಸವ ಜನ್ಮಭೂಮಿಯಾದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಿಂದ
ಪ್ರಾರಂಭವಾಗಲಿರುವ ಈ ಅಭಿಯಾನ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ, ಬೆಂಗಳೂರು ಮಹಾನಗರದಲ್ಲಿ ಸಮಾರೋಪಗೊಳ್ಳಲಿದೆ.
ಆ ದಿಶೆಯಲ್ಲಿ ರಾಜ್ಯದ ಜಿಲ್ಲೆಗಳಲ್ಲಿರುವ ಪ್ರಮುಖ ಮಠಾಧೀಶರನ್ನು ಮತ್ತು ಬಸವಪರ ಸಂಘಟಕರನ್ನು ಸಂಪರ್ಕಿಸಿ, ಅವರ ಜೊತೆ ಪತ್ರ ವ್ಯವಹಾರ ನಡೆದಿದೆ. ಪ್ರಮುಖ ಮಠಾಧೀಶರು ಮತ್ತು ಸಂಘಟಕರು ಅನೇಕ ಸಭೆಗಳು ನಡೆಸಿ, ಕಾರ್ಯಕ್ರಮದ ರೂಪರೇಷಗಳನ್ನು ಸಿದ್ಧಪಡಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಸಂಯೋಜನಾ ಸಮಿತಿ ರಚಿಸಿ ಆ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಮಠಾಧೀಶರು ಮತ್ತು ಸಂಘಟಕರು ಕಾರ್ಯಪ್ರವರ್ತರಾಗುತ್ತಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದ ಕುರಿತು ಸಮೂಹ ಮಾಧ್ಯಮಗಳಲ್ಲಿ ನಿರಂತರ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ನಾಡಿನ ಹಿರಿಯ ಸಾಹಿತಿಗಳು, ಸಂಶೋಧಕರು, ಬಸವತತ್ವ ಚಿಂತಕರು, ಬಸವಾಭಿಮಾನಿಗಳು ಆನ್ ಲೈನ್ ಸಭೆಯ ಮೂಲಕ ನೀಡಿರುವ ಮೌಲಿಕ ಸೂಚನೆಗಳು ಅಭಿಯಾನದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ. ಹಾಗಾಗಿ ಅಭಿಯಾನದ ಸಿದ್ಧತೆ ಕುರಿತು ಯಾರೂ ನಕಾರಾತ್ಮಕ ಭಾವನೆ ತಾಳದೆ ಎಲ್ಲರೂ ಉತ್ಸಾಹದಿಂದ ಅಭಿಯಾನಕ್ಕೆ ಪೂರಕ ಪ್ರಸಾರ, ಪ್ರಚಾರ ಮಾಡಬೇಕೆಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲು ಲಿಂಗಾಯತ ಮಠಾಧೀಶರ ಒಕ್ಕೂಟದಲ್ಲಿರುವ ಕೆಲ ಸ್ವಾಮಿಗಳನ್ನು ಜಾಗೃತ ಮಾಡಬೇಕಾಗಿದೆ. ಹಿಂದೂ ಸಂಘಟನೆ ಕಾರ್ಯಕ್ರಮಕ್ಕೆ ಹೋಗಿ ನಾವು ಹಿಂದೂಗಳು ಹಿಂದೂ ಧರ್ಮವನ್ನು ರಕ್ಷಿಸೋಣ ಅನ್ನೋದು, ವೀರಶೈವರ ಕಾರ್ಯಕ್ರಮಕ್ಕೆ ಹೋದರೆ ನಾವು ವೀರಶೈವರು ಅನ್ನೋದು.
ಇವನ್ನು ಬಿಟ್ಟು ನಾವು ಲಿಂಗಾಯತರೆಂದು ಧೈರ್ಯವಾಗಿ ಹೇಳಲಿ.
ಸರ್,
ಮೊದಲು ಕಾರ್ಯಕ್ರಮದ ಯಶಸ್ಸಿಗೆ ಒತ್ತು ಕೊಡಬೇಕು. ಪರುಷದ ಬಲದಿಂದ ಅವಲೋಹದ ಕೇಡು ಅನ್ನುವಂತೆ ಬದಲಾವಣೆ ಖಂಡಿತವಾಗುತ್ತದೆ. ನಾವು ಬರೀ ದೂರುವುದೇಯಾದರೆ ಅವರು ಮತ್ತೆ ಮತ್ತೆ ದೂರವಾಗುತ್ತಾರೆ. ಇವ ನಮ್ಮವ……ಇದೇ ನಮ್ಮ ಮಂತ್ರವಾಗಬೇಕು ಸರ್..ಕ್ಷಮಿಸಿ
ಶರಣರೇ
ಮೊದಲು ಅಭಿಯಾನಕ್ಕೆ ಒಂದು ಲಕ್ಷ ಎತ್ತಿ ಆಮೇಲೆ ಟೀಕಿಸಿ. ದೂಷಣೆ ಮಾಡುವುದೇ ಸೇವೆಯಲ್ಲ. ಸಮಯ ಸಂದರ್ಭದ ಅರಿವಿಲ್ಲದ ಮೂರ್ಖತನ ಬೇಡ.
ಶರಣರೆ,
900 ವರ್ಷ ಕಳೆದವು ಇನ್ನೂ ಯಾವಾಗ ಬದಲಾಗುತ್ತಾರೆ ?
ಶರಣರೆ,
ವಚನ ದರ್ಶನ ಬಂದಾಗಲೂ ಹೀಗೆ ಹೇಳಿದರು, ಶರಣ ದರ್ಶ ಸಿನಿಮಾ ಬಂದಾಗಲೂ ಹಾಗೆ ಹೇಳಿದರು, ವೀಣಾ ಬನ್ನಂಜೆ ಅನುಭವ ಮಂಟಪ ಇರಲೆ ಇಲ್ಲ ಅಂದಾಗಲೂ ವಿರೋಧಿಸ ಬೇಡಿ ಎಂದರು ಹೀಗೆ ಒಂದೆ ಎರಡೆ ಎಲ್ಲದಕ್ಕೂ ಮೌನ ವಹಿಸಿದರೆ ನಮ್ಮಂಥ ಮೂರ್ಖರು ಬೇರೆ ಯಾರೂ ಇಲ್ಲ.
ಕುಮಾರಣ್ಣ ಪಾಟೀಲ್ ಹೇಳುವ ಮಾತು ಕೆಲವು ಮಠಾಧೀಶರಿಗೆ ನೂರಕ್ಕೆ ನೂರು ಅನ್ವಯ ಆಗುತ್ತೆ.