ಅಭಿಯಾನ ಅರ್ಥಪೂರ್ಣವಾಗಿ ನಡೆಸಲು ಭಾಲ್ಕಿ ಶ್ರೀಗಳಿಗೆ ಮನವಿ

‘ಅಭಿಯಾನ ಗ್ರಾಮ ಮಟ್ಟಕ್ಕೂ ತಲುಪಬೇಕಾದರೆ ವ್ಯಾಪಕ ಪ್ರಚಾರ ಅಗತ್ಯ.’

ಭಾಲ್ಕಿ

ಸೆಪ್ಟಂಬರ್ ತಿಂಗಳಿನಲ್ಲಿ ನಡೆಯಲಿರುವ ‘ಬಸವ ಸಂಸ್ಕೃತಿ ಅಭಿಯಾನ’ದ ಕುರಿತು ಬೀದರ್ ಜಿಲ್ಲೆಯ ಬಸವ ಸಂಘಟನೆಗಳು ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದೇವರಿಗೆ ಗುರುವಾರ ಸಂಜೆ ಭಾಲ್ಕಿ ಹಿರೇಮಠದಲ್ಲಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.

ನಾಡಿನ ಬಸವಾನುಯಾಯಿಗಳ ಪರವಾಗಿ ಓಂಪ್ರಕಾಶ ರೊಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಬಸವ ಸಂಸ್ಕೃತಿ ಅಭಿಯಾನ’ ಅರ್ಥಪೂರ್ಣವಾಗಿ ಜರುಗಬೇಕು, ಬಸವಾದಿ ಶರಣರ ತತ್ವಗಳು ಗ್ರಾಮ ಮಟ್ಟಕ್ಕೂ ತಲುಪಬೇಕಾದರೆ ವ್ಯಾಪಕ ಪ್ರಚಾರ ಅಗತ್ಯ. ಎಲ್ಲಾ ಬಸವಪರ ಸಂಘಟನೆಗಳನ್ನು ಒಗ್ಗೂಡಿಸಿ ಜಿಲ್ಲಾಮಟ್ಟ, ತಾಲೂಕುಮಟ್ಟ, ಮತ್ತು ಗ್ರಾಮಮಟ್ಟದ ಸಮಿತಿಗಳನ್ನು ರಚಿಸಿ, ಜನಸಾಮಾನ್ಯರು ಪಾಲ್ಗೊಳ್ಳುವಂತೆ ಕ್ರಮವಹಿಸಬೇಕು. ಈ ದಿಶೆಯಲ್ಲಿ ಹಿರಿಯ ಚಿಂತಕರು ನೀಡಿರುವ ಸಲಹೆಗಳನ್ನು ಶ್ರೀಗಳ ಗಮನಕ್ಕೆ ತಂದರು.

ಚಿಂತಕ ರಮೇಶ ಮಠಪತಿಯವರು ಅಭಿಯಾನ ಯಶಸ್ವಿಗೆ ಗೊ.ರು.ಚರವರು ನೀಡಿರುವ ಏಳು ಸಲಹೆಗಳನ್ನು ಓದಿ, ಈ ಅಭಿಯಾನವು ರಾಜ್ಯ, ರಾಷ್ಟ್ರವಷ್ಟೇ ಅಲ್ಲ ವಿಶ್ವಮಟ್ಟದಲ್ಲಿಯೂ ಲಿಂಗಾಯತ ಮಹತ್ವ ತಲುಪಿಸುವಂತಾಗಬೇಕು. ಅದಕ್ಕಾಗಿ ಬೇಕಾದ ಸಕಲ ಸಿದ್ಧತೆ ಕೂಡಲೇ ಆರಂಭಿಸಲು ಕೋರಿಕೊಂಡರು.

ಮನವಿ ಸ್ವೀಕರಿಸಿ ಮಾತನಾಡಿದ ಬಸವಲಿಂಗಪಟ್ಟದ್ದೇವರು ಧನಾತ್ಮಕವಾಗಿ ಸ್ಪಂದಿಸಿದರು. ಸೆಪ್ಟೆಂಬರ್ ನಲ್ಲಿ ನಡೆಯಬೇಕಾದ ‘ಬಸವ ಸಂಸ್ಕೃತಿ ಅಭಿಯಾನ’ ನಿಗದಿತ ವೇಳಾಪಟ್ಟಿಯಂತೆ ಜರಗಲಿದೆ. ಅಭಿಯಾನವು ಬಸವನಬಾಗೇವಾಡಿಯಿಂದ ಆರಂಭವಾಗಿ ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ.

ಈ ದಿಶೆಯಲ್ಲಿ ರಾಜ್ಯದ ಅರ್ಧ ಮಠಾಧೀಶರು ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯವರಿಗೆ ಬುಧವಾರವೇ (ಜೂನ್ 4) ಪತ್ರ ಕಳಿಸಲಾಗಿದೆ. ಇನ್ನುಳಿದವರಿಗೆ ಇಂದು ಮತ್ತು ನಾಳೆ ಪತ್ರ ಕಳಿಸಲಾಗುತ್ತದೆ. ದೊಡ್ಡ ದೊಡ್ಡ ಮಠಾಧೀಶರಿಗೆ ಎರಡು ಮೂರು ಜಿಲ್ಲೆಗಳ ಜವಾಬ್ದಾರಿ ವಹಿಸಲಾಗಿದೆ. ಕಲಬುರ್ಗಿ ಮತ್ತು ಬೀದರ ಜಿಲ್ಲೆ ಜವಾಬ್ದಾರಿ ನಮಗಿದೆ. ಅಭಿಯಾನಕ್ಕಾಗಿ ‘ರಥ’ದ ಕೆಲಸ ನಡೆದಿದೆ ಎಂದು ಹೇಳಿದರು. ಈ ದಿಸೆಯಲ್ಲಿ ಶೀಘ್ರವಾಗಿ ಪತ್ರಿಕೆ ಹೇಳಿಕೆಯನ್ನು ನೀಡಲಾಗುವುದೆಂದರು.

ಮನವಿ ಸಲ್ಲಿಸಿದ್ದು ಸಂತೋಷಕರ ಸಂಗತಿ ಮತ್ತೆ ಹೆಚ್ಚಿನ ಸಲಹೆಗಳಿದ್ದರೂ ಮುಕ್ತವಾಗಿ ನೀಡಬಹುದಾಗಿದ್ದು ಅಭಿಯಾನ ಯಶಸ್ವಿಯಾಗಿ ನಡೆಸೋಣ ಎಂದರು.

ಶಂಭುಲಿಂಗ ಕಾಮಣ್ಣ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ ಬೀದರ, ನಾಗಭೂಷಣ ವಾಮಡಿ ತಾಲೂಕು ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಭಾಲ್ಕಿ, ಮಲ್ಲಮ್ಮ ಆರ್. ಪಾಟೀಲ ಶರಣ ಸಾಹಿತ್ಯ ಪರಿಷತ್ ಮಹಿಳಾ ಅಧ್ಯಕ್ಷರು, ಗುಂಡಪ್ಪ ಸಂಗಮಿಕರ್ ರಾಷ್ಟ್ರೀಯ ಬಸವದಳ, ಸಿ.ಎಸ್. ಗಣಾಚಾರಿ ಲಿಂಗಾಯತ ಮಹಾಮಠದ ಪ್ರಚಾರಕರು ಬೀದರ, ಜಯರಾಜ ಕೊಳ್ಳ ಬಸವಭಕ್ತರು ಭಾಲ್ಕಿ, ಜಗದೀಶ ಬಿರಾದರ ಜನಪದ ಚಿಂತಕರು ಬೀದರ, ವೀರಣ್ಣ ಕುಂಬಾರ ಸಾಹಿತಿಗಳು ಭಾಲ್ಕಿ, ಭೂರೆ ಕಾರ್ಯದರ್ಶಿಗಳು ಕ.ಸಾ.ಪ. ಭಾಲ್ಕಿ, ಸಂತೋಷ ಹಡಪದ, ಹಡಪದ ಸಮಾಜದ ಕಾರ್ಯದರ್ಶಿ ಭಾಲ್ಕಿ ಈ ಎಲ್ಲ ಶರಣ ಬಂಧುಗಳು ಉಪಸ್ಥಿತರಿದ್ದರು. ಶಂಭುಲಿಂಗ ಕಾಮಣ್ಣ ಎಲ್ಲರಿಗು ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
Leave a comment

Leave a Reply

Your email address will not be published. Required fields are marked *