ಅಭಿಯಾನಕ್ಕೆ ಮೂರೇ ತಿಂಗಳಿದ್ದರೂ ಯಾವುದೇ ಪೂರ್ವಸಿದ್ಧತೆ ಕಾಣುತ್ತಿಲ್ಲವಾದ್ದರಿಂದ ಕಳವಳವಾಗಿದೆ
ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನವನ್ನು ಲಿಂಗಾಯತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ ಸೇರಿದಂತೆ ನಾಡಿನ ಎಲ್ಲಾ ಬಸವ ಸಂಘಟನೆಗಳ ಸಹಯೋಗದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಅಭಿಯಾನ ನಡೆಯಲಿದೆ.
ಶರಣ ಸಮಾಜದ ಮುಂದಿರುವ ಹತ್ತಾರು ಸವಾಲುಗಳನ್ನು ಎದುರಿಸಲು, ಇಂದು ಚಿಗುರುತ್ತಿರುವ ಬಸವ ಪ್ರಜ್ಞೆಯನ್ನು ಗಟ್ಟಿಯಾಗಿ ರೂಪಿಸಲು ಅಭಿಯಾನ ಅನಿವಾರ್ಯವೆಂದು ಎಲ್ಲರಿಂದ ಒಮ್ಮತದ, ಉತ್ಸಾಹದ ಬೆಂಬಲ ಬಂದಿದೆ.
ಅಭಿಯಾನಕ್ಕೆ ಮೂರೇ ತಿಂಗಳಿದ್ದರೂ ಯಾವುದೇ ಪೂರ್ವಸಿದ್ಧತೆ ಕಾಣುತ್ತಿಲ್ಲವೆಂದು ಹಿರಿಯ ಚಿಂತಕರಾದ ಗೊ.ರು. ಚನ್ನಬಸಪ್ಪ, ಎನ್.ಜಿ. ಮಹಾದೇವಪ್ಪ, ಟಿ. ಆರ್. ಚಂದ್ರಶೇಖರ್, ವೀರಣ್ಣ ರಾಜೂರ, ಮೀನಾಕ್ಷಿ ಬಾಳಿ, ಅಶೋಕ ಬರಗುಂಡಿ ಲಿಂಗಾಯತ ಮಠಾಧೀಶರ ಒಕ್ಕೊಟಕ್ಕೆ ಮತ್ತು ಕಾರ್ಯಕ್ರಮದ ಮುಖ್ಯ ಸಂಘಟಕರಾದ ಎಸ್ ಎಂ ಜಾಮದಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ..
೨೮/೫/೨೦೨೫
ಇಂದ
ನಾಡಿನ ಬಸವ ಅನುಯಾಯಿಗಳು
ಗೆ
ಅಧ್ಯಕ್ಷರು, ಲಿಂಗಾಯತ ಮಠಾಧೀಶರ ಒಕ್ಕೂಟ
ಎಸ್. ಎಂ. ಜಾಮದಾರ್, ಜಾಗತಿಕ ಲಿಂಗಾಯತ ಮಹಾಸಭಾ
ಪೂಜ್ಯರೇ, ಹಿರಿಯರೇ,
ಶರಣು ಶರಣಾರ್ಥಿಗಳು.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಇತರ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಸಲು ನಿರ್ಧರಿಸಿತ್ತು.
ಲಿಂಗಾಯತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಸಾಂಸ್ಕೃತಿಕ ದಾಳಿಯನ್ನು ಪ್ರತಿರೋಧಿಸುವ, ಹಿಂದುತ್ವದ ಕಪಿಮುಷ್ಟಿಯಿಂದ ಲಿಂಗಾಯತ ಯುವ ಪೀಳಿಗೆಯನ್ನು ಪಾರುಮಾಡುವ ಹಾಗೂ ಸಮಾಜದಲ್ಲಿ ಹರಡುತ್ತಿರುವ ಬಸವಪ್ರಜ್ಞೆಯನ್ನು ಗಟ್ಟಿಗೊಳಿಸುವ ಮಹಾತ್ವಾಂಕ್ಷೆಯಿರುವ ಈ ಕಾರ್ಯಕ್ರಮಕ್ಕೆ ವ್ಯಾಪಕ ಬೆಂಬಲ ಈಗಾಗಲೇ ವ್ಯಕ್ತವಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಿರುವ ಅಭಿಯಾನಕ್ಕೆ ಕೇವಲ ಮೂರು ತಿಂಗಳು ಉಳಿದಿವೆ. ಆದರೂ ಇಷ್ಟೊಂದು ದೊಡ್ಡ ಕಾರ್ಯಕ್ರಮ ನಡೆಸಲು ಬೇಕಿರುವ ಯಾವುದೇ ಪೂರ್ವಸಿದ್ಧತೆ ನಮಗೆ ಕಾಣುತ್ತಿಲ್ಲವಾದ್ದರಿಂದ ಕಳವಳದಿಂದ ಈ ಪತ್ರ ಬರೆಯುತ್ತಿದ್ದೇವೆ.
ಲಿಂಗಾಯತ ಸಮಾಜ ಆತಂಕದಲ್ಲಿದೆ ಎಂದು ಎಲ್ಲರಿಗೂ ಅರಿವಾಗಿರುವ ವಾಸ್ತವ. ಒಂದು ಕಡೆ ಬಸವಣ್ಣನವರ ಪ್ರಭಾವವನ್ನು ಸಮಾಜದಲ್ಲಿ ದುರ್ಬಲಗೊಳಿಸುವ ಮತ್ತು ಬಸವತತ್ವವನ್ನು ವಿರೂಪಗೊಳಿಸಿ ಜನರ ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ.
ಸಮಾಜದಲ್ಲಿ ದುರ್ಬಲಗೊಳಿಸುವ ಮತ್ತು ಬಸವತತ್ವವನ್ನು ವಿರೂಪಗೊಳಿಸಿ ಜನರ ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ.
ಇನ್ನೊಂದೆಡೆ ಸುಪ್ತವಾಗಿ ಹರಿಯುತ್ತಿರುವ ಬಸವಪ್ರಜ್ಞೆ ಅವಕಾಶ ಸಿಕ್ಕಲ್ಲೆಲ್ಲ ರಭಸವಾಗಿ ಹೊರಚಿಮ್ಮುತ್ತಿದೆ. ಬೀದರಿನಿಂದ ಚಾಮರಾಜನಗರದವರೆಗೆ ನೂರಾರು ಕಡೆ ಸಾವಿರಾರು ಬಸವ ಭಕ್ತರು ಯಾವುದೇ ಕೇಂದ್ರ ನಿರ್ದೇಶನವಿಲ್ಲದೆ ತಾವಾಗಿಯೇ ಈ ವರ್ಷ ಬಸವ ಜಯಂತಿಯನ್ನು ನಿಷ್ಠೆಯಿಂದ ಆಚರಿಸಿದ್ದಾರೆ.
ಬಹುತೇಕ ಜಿಲ್ಲೆಗಳಲ್ಲಿ ಹಲವಾರು ಬಸವ ಸಂಘಟನೆಗಳು ವರ್ಷವಿಡೀ ಬಸವ ತತ್ವದ ಪ್ರಸಾರಕ್ಕಾಗಿ ದುಡಿಯುತ್ತಿವೆ. ಬಹಳ ಬದ್ಧತೆಯಿರುವ ಈ ಸಂಘಟನೆಗಳಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಮೂಡಿಸಬೇಕಾಗಿದೆ, ಒಂದು ಸಾಮಾನ್ಯ ಕಾರ್ಯಸೂಚಿ ರೂಪಿಸಬೇಕಾಗಿದೆ, ಆದ್ಯತೆಯ ಮೇಲೆ ಮಾಡಬೇಕಿರುವ ಕೆಲಸಗಳನ್ನು ಗುರುತಿಸಬೇಕಾಗಿದೆ.
ಸೆಪ್ಟೆಂಬರ್ ಅಭಿಯಾನದ ಮೂಲಕ ಈ ಕೆಲಸ ನಡೆದು ನಾಡಿನ ಬಸವ ಸಂಘಟನೆಗಳು ಒಂದು ಸಂಘಟಿತ ರೂಪದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಶಕ್ತಿಯಾಗಿ ಹೊರಹೊಮ್ಮಬೇಕಾಗಿದೆ.
ಈ ಕೆಲಸವನ್ನು ನಾವು ಈಗ ಮಾಡದಿದ್ದರೆ ಬಸವ ವಿರೋಧಿ ಶಕ್ತಿಗಳು ತಮ್ಮ ಕುಟಿಲ ಚಟುವಟಿಕೆಗಳನ್ನು ಹಿಗ್ಗಿಸುತ್ತವೆ ಎನ್ನುವುದನ್ನು ಮರೆಯಬಾರದು. ಈ ವರ್ಷದ ಬಸವ ಜಯಂತಿಯಲ್ಲಿ ರಾಜ್ಯದೆಲ್ಲೆಡೆ ರೇಣುಕಾಚಾರ್ಯರನ್ನೂ ಕೂರಿಸುವ ದೊಡ್ಡ ಪ್ರಯತ್ನ ನಡೆಯಿತು ಎನ್ನುವುದನ್ನು ಈ ಹಿನ್ನಲೆಯಲ್ಲಿ ಅರ್ಥೈಸಬೇಕೆಂದು ಕೋರುತ್ತೇವೆ.
ನಾಡಿನಲ್ಲಿ ತನ್ನ ಸ್ವಶಕ್ತಿಯಿಂದಲೇ ಗಟ್ಟಿಯಾಗುತ್ತಿರುವ ಬಸವತತ್ವ ಅನೇಕ ಪಟ್ಟಭದ್ರರನ್ನು ಅತಂತ್ರಗೊಳಿಸಿದೆ. ಸಮಾಜದಲ್ಲಿ ಪ್ರಗತಿಪರ ಪರಿವರ್ತನೆಯನ್ನು ತರಲು ಸಾಮರ್ಥ್ಯವಿರುವ ಬಸವ ಶಕ್ತಿಯನ್ನು ದುರ್ಬಲಗೊಳಿಸಲು ಸಾಂಪ್ರದಾಯಿಕ ಶಕ್ತಿಗಳು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆಂಬುದು ಅಲಕ್ಷಿಸುವ ಮಾತಲ್ಲ.
ಬಸವ ಭಕ್ತರು ಜಾಗೃತರಾಗಿರುವುದರಿಂದ ಈ ದುಷ್ಟಶಕ್ತಿಗಳ ಹುನ್ನಾರ ಇಲ್ಲಿಯವರೆಗೆ ವಿಫಲವಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಇಂತಹ ಕೈವಾಡಗಳು ಮತ್ತೆ ನಡೆಯುವ ಮುನ್ನವೇ ಮೊಳಕೆಯಲ್ಲೇ ಚಿವುಟಿ ಹಾಕಲು ಯೋಚಿಸಿ, ಅಭಿಯಾನದ ಮೂಲಕ ಬಸವ ಭಕ್ತರನ್ನು ಸಿದ್ಧಪಡಿಸುವ ಅವಸರದ ಅಗತ್ಯವಿದೆ ಎಂದು ಬೇರೆ ಹೇಳಬೇಕಾಗಿಲ್ಲ.
ಈ ಅಭಿಯಾನ ಕೇವಲ ನೆಪ ಮಾತ್ರಕ್ಕೆ ನಡೆಯುವ ವೇದಿಕೆಯ ಕಾರ್ಯಕ್ರಮವಾಗದೆ ರಾಜ್ಯದಲ್ಲಿ ಒಂದು ಜಾಗೃತ ಸಂಚಲನವನ್ನುಂಟುಮಾಡುವ ಜನಾಂದೋಲನವಾಗಬೇಕು.
ಅಭಿಯಾನ ಕೇವಲ ನೆಪ ಮಾತ್ರಕ್ಕೆ ನಡೆಯದೆ ರಾಜ್ಯದಲ್ಲಿ ಸಂಚಲನವನ್ನುಂಟುಮಾಡುವ ಜನಾಂದೋಲನವಾಗಬೇಕು.
ಈ ಅಭಿಯಾನ ಹಳ್ಳಿ, ತಾಲೂಕು, ಜಿಲ್ಲಾ ಮಟ್ಟಗಳಲ್ಲಿ ಬಸವತತ್ವದ ಮಠಗಳ ಹಾಗೂ ಸಂಘಟನೆಗಳ ಸಹಯೋಗದಲ್ಲಿ ನಡೆಯಬೇಕು. ಇಂದು ನಮ್ಮ ಸಮಾಜದ ಮುಂದಿರುವ ಸವಾಲುಗಳನ್ನು ಕುರಿತಂತೆ ನಮ್ಮ ಶರಣ ಬಂಧುಗಳಲ್ಲಿ ಖಚಿತ ಅರಿವು ಮೂಡಿಸುವ ವಿಷಯಗಳು ಮುನ್ನೆಲೆಗೆ ಬರಬೇಕು.
ಈ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಲು, ಅಭಿಯಾನವನ್ನು ರೂಪಿಸಿ ನಡೆಸಲು ಒಂದು ವಿಶೇಷವಾದ ನಿಯೋಗವನ್ನು ರಚಿಸಬೇಕು. ಸರಿಯಾಗಿ ಯೋಜಿಸಿ ಹೆಜ್ಜೆಯಿಟ್ಟರೆ ಈ ಕಾರ್ಯಕ್ಕೆ ಸಮಾಜದ ಬೆಂಬಲ ಮತ್ತು ಸಂಪನ್ಮೂಲಗಳು ಹರಿದುಬರವುದರಲ್ಲಿ ಯಾವ ಸಂಶಯವೂ ಇಲ್ಲ.
ಕೊನೆಯದಾಗಿ, ನಮ್ಮ ಸಮಾಜದ ಪ್ರಮುಖ ಧಾರ್ಮಿಕ ಮತ್ತು ರಾಜಕೀಯ ಮುಖಂಡರು ರಾಜ್ಯ ಆಯವ್ಯಯ ಮಂಡನೆಗೆ ಮುಂಚೆ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಹಲವಾರು ಬೇಡಿಕೆಗಳನ್ನು ಮಂಡಿಸಿದರು. ಇವೆಲ್ಲಾ ಬಸವಣ್ಣನವರಿಗೆ ಸಂಬಂಧಿಸಿದ ಬೇಡಿಕೆಗಳಾಗಿದ್ದರೂ, ಬಸವ ಅನುಯಾಯಿಗಳೆಂದೇ ಪ್ರಸಿದ್ಧರಾಗಿರುವ ಮುಖ್ಯಮಂತ್ರಿಗಳು ಒಂದಕ್ಕೂ ಸ್ಪಂದಿಸಲಿಲ್ಲ.
ರಾಜ್ಯದ ಬಿಡಿ ಬಿಡಿಯಾಗಿರುವ ಅಸಂಖ್ಯಾತ ಬಸವ ಭಕ್ತರನ್ನು ಒಗ್ಗೂಡಿಸಲು ನಾವು ವಿಫಲರಾಗಿರುವುದೇ ಇದಕ್ಕೆ ಮುಖ್ಯ ಕಾರಣ. ನಮ್ಮ ನ್ಯಾಯಬದ್ಧ ಬೇಡಿಕೆಗಳಿಗೆ ಸಮುದಾಯದ ಸಂಪೂರ್ಣ ಬೆಂಬಲವಿದೆ ಎಂದು ಅರಿವಾದರೆ, ನಮ್ಮನ್ನು ಹಗುರವಾಗಿ ತೆಗೆದುಕೊಳ್ಳಲು ಯಾವ ಮುಖ್ಯಮಂತ್ರಿಯಿಂದಲೂ ಸಾಧ್ಯವಾಗುವುದಿಲ್ಲ.
ಈ ನಿಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳ ಬಸವ ಸಂಸ್ಕೃತಿ ಅಭಿಯಾನ ಮೊದಲ ಹೆಜ್ಜೆಯಾಗಲಿ.
ಸಮಾಜದ ಈ ಕಳಕಳಿಯ ಧ್ವನಿಗೆ ತಾವು ಓಗೊಡುತ್ತೀರಿ ಎಂಬ ವಿಶ್ವಾಸ ಮತ್ತು ನಿರೀಕ್ಷೆಯೊಂದಿಗೆ.
ತಮ್ಮ ವಿಶ್ವಾಸಿಗಳಾದ
ಗೊ.ರು. ಚನ್ನಬಸಪ್ಪ
ಎನ್.ಜಿ. ಮಹಾದೇವಪ್ಪ
ಟಿ. ಆರ್. ಚಂದ್ರಶೇಖರ್
ವೀರಣ್ಣ ರಾಜೂರ
ಮೀನಾಕ್ಷಿ ಬಾಳಿ
ಅಶೋಕ ಬರಗುಂಡಿ
ತಮ್ಮ ಈ ಜಂಟಿ ಹೇಳಿಕೆಗೆ ಸ್ವಾಗತ. ತಮ್ಮ ಬೆಂಬಲಿಸುತ್ತೇನೆ. ಶರಣು ಶರಣಾರ್ಥಿ.
🙏👍👏
ಲಿಂಗಾಯತ ಮಠಾಧೀಶರ ಒಕ್ಕೂಟವು ಈ ಬಗ್ಗೆ ಶೀಘ್ರ ಕಾರ್ಯೊನ್ಮುಖವಾಗ ಬೇಕು
ಜಾಲಿಂಮ , ರಾಬದ ಸೇರಿದಂತೆ ಎಲ್ಲಾ ಬಸವ ಪರ ಸಂಘಟನೆಗಳನ್ನು ಜಿಲ್ಲಾ ಮಟ್ಟದಲ್ಲಿ ಒಂದೇ ವೇದಿಕೆಯಡಿ ತಂದು ಈ ವೇದಿಕೆಗೆ ಅಭಿಯಾನಕ್ಕೆ ಸಂಬಂಧಿಸಿದಂತೆ ಜೂನ್ ನಿಂದ ಆಗಸ್ಟ್ ಮಾಹೆಯ ವರೆವಿಗೆ ಪ್ರತೀ ವಾರ ಸಲಹೆ ಸೂಚನೆ ನೀಡಿ ಜಾಗ್ರತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಬಗ್ಗೆ ಜಾಲಿಂಮ ಹಾಗೂ ರಾಬದ ಕೇಂದ್ರ ಘಟಕವು ಪರಸ್ಪರ ಸಮಾಲೋಚಿಸಿ ಜಿಲ್ಲಾ ಮಟ್ಟದ ಬಸವ ಪರ ಸಂಘಟನೆಗಳ ವೇದಿಕೆ / ಒಕ್ಕೂಟಗಳಿಗೆ ಜೂನ್ ಮಾಹೆಯಿಂದ ಆರಂಭಿಸಿ ಆಗಸ್ಟ್ 2025ರ ತನಕ ಪ್ರತೀ ವಾರವೂ ಸಲಹೆ ಸೂಚನೆಗಳನ್ನು ಕಳುಹಿಸಿ ಜಿಲ್ಲಾ ಘಟಕಗಳೊಂದಿಗೆ ಗೂಗಲ್ ಮೀಟ್ ಸಭೆ ಕರೆದು ಈ ನಿಟ್ಟಿನಲ್ಲಿ ಉಂಟಾದ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವುದು ಕೇಂದ್ರ ಘಟಕಗಳ ಜವಾಬ್ದಾರಿ ಆಗಬೇಕಿದೆ.
ಬಹಳ ಜನರಲ್ಲಿರುವ ಪ್ರಶ್ನೆಗಳನ್ನು ನಮ್ಮ ಹಿರಿಯರು ಕೇಳಿದ್ದಾರೆ. ಲಿಂಗಾಯತ ಮಠಾಧೀಶರು ಅಭಿಯಾನವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ನಿಮ್ಮ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
ಸೆಪ್ಟೆಂಬರ್ ಅಭಿಯಾನ ಯಶಸ್ವಿಯಾಗಿ ನಡೆಯಲು ಸಕಲ ತಯ್ಯಾರಿಗಳು ನಡೆಯಬೇಕು ಎಂಬ ಹಿರಿಯರ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
ಅಭಿಯಾನ ತುಂಬಾ ಅಗತ್ಯವಾಗಿದೆ. ಎಲ್ಲಾ ಲಿಂಗಾಯತರಲ್ಲಿ ಬಸವ ಪ್ರಜ್ಞೆ ಬೆಳೆಸಿ, ಬೇರೂರಬೇಕಾದರೆ ಉದ್ದೇಶಿತ ಅಭಿಯಾನ ಯಶಸ್ವಿಗೊಳಿಸುವುದು ಎಲ್ಲಾ ಲಿಂಗಾಯತರ ಹೊಣೆಯಾಗಿದೆ. ಹೀಗಾಗಿ ನನ್ನದೂ ಬೆಂಬಲ ಇದೆ.
ವ್ಯವಸ್ಥಿತ ಯೋಜನೆ ಸಿದ್ಧಪಡಿಸಿ ಕಾರ್ಯೋನ್ಮುಖರಾಗಬೇಕು.
ನಿಮ್ಮ ಅಭಿಯಾನಕ್ಕೆ ನನ್ನ ಬೆಂಬಲವಿದೆ
I agree
ಈ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ
ಈ ಕಾರ್ಯಕ್ಕೆ ಸಂಪೂರ್ಣವಾದ ಬೆಂಬಲ ನೀಡುತ್ತೇನೆ.
ಅಭಿಯಾನ ಚೆನ್ನಾಗಿ ನಡೆಯಲಿಪೂಜ್ಯರು ಮನಸ್ಸು ಮಾಡಲಿ
ಅಭಿಯಾನ ಪರಿಣಾಮಕಾರಿ ಸಂಚಲನ ಉಂಟುಮಾಡುವಂತಾಗಬೇಕು
ನನ್ನ ಸಂಪೂರ್ಣ ಬೆಂಬಲವಿದೆ
ಅಭಿಯಾನ ಯಶಸ್ವಿಯಾಗಲಿ ಸಗಲರೂ ಕೈಜೋಡಿಸೋಣ.
ಶುಭವಾಗಲಿ
ರಾಶಿಮೈ.
ಜಿಲ್ಲೆಯ ಮುಖಂಡತ್ವ ವಹಿಸುವವರನ್ನು ಗುರ್ತಿಸಲಿ.ಅವರು ತಮ್ಮ ವಿವೇಚನೆಗೆ ತಕ್ಕಂತೆ 9 ಅಥವ 11 ಅಥವಾ ಅವರಿಗೆ ಯೋಗ್ಯವೆನಿಸಿದಷ್ಟು ಸದಸ್ಯರನ್ನು ನೇಮಿಸಿಕೊಳ್ಳಲಿ. ಅವರು ಆಯಾ ಜಿಲ್ಲೆಯ ಕಾರ್ಯಕ್ರಮವನ್ನು ರಾಜ್ಯಮಟ್ಟದ ಅಂದರೆ ‘ಜಾಗತಿಕ ಲಿಂಗಾಯತ ಮಹಾ ಸಭೆಯ’ ಸೂಚನೆಗಳಂತೆ ನೆರವೇರಿಸಲಿ. ಯಾವುದಕ್ಕೂ ಪೂರ್ವ ತಯ್ಯಾರಿ ಆಗಬೇಕು. ಇದು ನಮ್ರ ಬೇಡಿಕೆ. ಆದರೆ ಆ ಸಮಿತಿಯಲ್ಲಿ ಬಸವ ಪ್ರಿಯರೇ ಇರಬೇಕು.
ನಾವು ಅಭಿಯಾನ ವನ್ನು ಕಾತರದಿಂದ ಕಾಯುತ್ತಿದ್ದೇವೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.
ಇಲ್ಲಿಯವರೆಗೆ ಬೆರಳೆಳಿಕೆಯ ಒಂದಷ್ಟು ಮಠಗಳು ಮಾತ್ರ ಕಾರ್ಯ ಶೀಲ ವಾಗಿವೆ, ಉಳಿದ ಮಠಗಳು ತಮ್ಮಷ್ಟಕ್ಕೆ ತಾವೇ ಇದ್ದುಬಿಟ್ಟಿವೆ. ತಾಲೂಕು ಜಿಲ್ಹಾ ಕೇಂದ್ರಗಳಲ್ಲಿ ಮಾತ್ರ ಎಡಬಿಡದೆ ಬಸವ ಪ್ರಣೇತ ಚಟುವಟಿಕೆಗಳು ವಿವಿಧ ರೂಪಗಳಲ್ಲಿ ಜರುಗುತ್ತಲಿವೆ. ಹೀಗಾದರೆ ಒಂದು ದೊಡ್ಡ ಕಾರ್ಯ ನಡೆಯುವದು ಕಷ್ಟ. ಗದುಗಿನ ಸಿದ್ಧರಾಮ ಸ್ವಾಮೀಜಿ, ಸಾಣೆಹಳ್ಳಿಯ ಪಂಡಿತಾರಾಧ್ಯರು, ಭಾಲ್ಕಿಯ ಬಸವಲಿಂಗ ಪಟ್ಟದದೇವರ ಒಂದು ಸಮಿತಿ ಮಾಡುವದು ಸೂಕ್ತ. ಅವರು ಎಲ್ಲ ಮಾತಾಧೀಷರನ್ನು ವಿಸ್ವಾಸಕ್ಕೆ ತೆಗೆದುಕೊಂಡು, ಪ್ರಮುಖ ಕ್ರೀಯಾಶೀಲಾ ಬಸವ ನಿಷ್ಟರನ್ನು ಹಾಕಿಕೊಂಡು ಉಪಸಮಿತಿಗಳನ್ನು ಮಾಡಿ ಸ್ಥಳ ಗುರುತಿಸುವ, ಇತರ ಕಾರ್ಯಗಳು ಪ್ರಾರಂಭ ವಾಗಬೇಕು. ಎಲ್ಲರೂ ಸಲಹೆ ಕೊಡುವವರೇ, ಸಮಯ ಕೊಡಲು ಯಾರು ಸಿದ್ಧರಿದ್ದಾರೆ ಎನ್ನುವ ಪ್ರಶ್ನೆ ಬರಬಹುದು.ನನ್ನ ವಯಕ್ತಿಕ ನೆಲೆಯಲ್ಲಿ ನಾನು ಅವರ ಜೊತೆ ಕೆಲಸ ಮಾಡಲು ಸಿದ್ಧನಿದ್ದೀನೆ.
ವಂದನೆಗಳು.
ನಾನು ಸಂಘಟನೆಗೆ ಬಳ್ಳಾರಿ ಜಿಲ್ಲೆಯಲ್ಲಿ ಅಧ್ಯಕ್ಷರಾದ ಬಸವರಾಜಪ್ಪ N J ಇವರ ಜೊತೆ ಕೂಡಲೇ ಕಾರ್ಯಪ್ರವೃತ್ತನಾಗುತ್ತೇನೆ…
ಮಠಾಧೀಶರು ಒಂದು ಪಂಗಡಕ್ಕೆ ಸೇರಿದವರಷ್ಟೆ ಸಭೆ ಸೇರುತ್ತಾರೆ ಇನ್ನುಳಿದ ಒಳ ಪಂಗಡಗಳ ಮಠಾಧೀಶರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿಯಾನದ ರೂಪರೇಷೆಗಳನ್ನು ಸಿದ್ಧಪಡಿಸಬೇಕು ಲಿಂಗಾಯತದ ಎಲ್ಲ ಒಳಪಂಗಡಗಳೂ ಭಾಗವಹಿಸಿದರೆ ಅಭಿಯಾನ ದೊಡ್ಡ ಶಕ್ತಿಯಾಗಿ ನಿಲ್ಲುತ್ತದೆ.
ಅಗತ್ಯ ವಾ ಗಿ ನಡೆಯಬೇಕು.
ಈ ಅಭಿಯಾನ ಬಾರೀ ಯಶಸ್ವಿಯಾಗಲಿ ಎಂದು ಬಸವೇಶ್ವರರನ್ನ ಪ್ರಾರ್ಥಿಸುತ್ತೇನೆ
ಇದು ಅವಶ್ಯವೆಂಬುದು ಎಲ್ಲರಿಗೂ ಮನದಟ್ಟಾಗಿದೆ. ಆದರೂ ಕೈ ಕಟ್ಟಿ ಕೂಡುವದು ಬೇಡ. ಎಷ್ಟು ಜಾಗೂರಕರಾಗುತ್ತೇವೆಯೊ ಅಷ್ಟು ಒಳ್ಳೆಯದಿದೆ. ಈ ಕಾರ್ಯಕ್ಕೆ ನಾವು ನಿಮ್ಮೊಂದಿಗಿದ್ದೇವೆ.
💐
Sharanu sharanarthigalu
ಶರಣು ಶರಣಾರ್ಥಿಗಳು
ನಿಮ್ಮ ಅಭಿಯಾನಕ್ಕೆ ನಮ್ಮ ಬೆಂಬಲವಿದೆ ಶರಣಾರ್ಥಿ
ನಿಮ್ಮ ಅಭಿಯಾನ ಸದಾ ಬೆಂಬಲ ನೀಡುವ ಮೂಲಕ ಸದಾ ಚಿರಋಣಿ ಶರಣು ಶರಣಾರ್ಥಿ..
ಯುವ ಪೀಳಿಗೆ ಬಸವಣ್ಣನವರ ಕುರಿತು ಜ್ಞಾನ ಕಡಿಮೆ ಮತ್ತು ಪಟ್ಟ ಭದ್ರ ಹಿತಾಸಕ್ತಿಗಳ ಜೊತೆ ತಿಳಿಯದೆ ಇದ್ದರೆ ಯುವ ಪೀಳಿಗೆಯನ್ನು
ಜಾಗೃತಿ ಮಾಡಲು ಈ ಸೆಪ್ಟೆಂಬರ್ ನಲ್ಲಿ ನಡೆಯುವ ಸಭೆ ಅವಶ್ಯಕ