ಹಾಸನದಲ್ಲಿ ಬಸವ ಸಂಸ್ಕೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ

20ನೇ ದಿನದ ಅಭಿಯಾನ

2 weeks agoSeptember 21, 2025 9:10 pm

ಕಲ್ಯಾಣ ಗೀತೆಯೊಂದಿಗೆ ಸಾರ್ವಜನಿಕ ಸಮಾರಂಭ ಮಂಗಲ.

2 weeks agoSeptember 21, 2025 8:07 pm

ಕಾರ್ಯಕ್ರಮಕ್ಕೆ ಅಡಚಣೆ

ಕೆಲವು ವ್ಯಕ್ತಿಗಳ ವಿರೋಧದಿಂದ ಕಾರ್ಯಕ್ರಮ ಕೆಲವು ಕಾಲ ನಿಂತಿತ್ತು. ಹೆಚ್ಚಿನ ಮಾಹಿತಿ ಲಭ್ಯವಾದಂತೆ ಹಂಚಿಕೊಳ್ಳುತ್ತೇವೆ.

2 weeks agoSeptember 21, 2025 8:03 pm

ಉಪನ್ಯಾಸ

ಶಿವಮೊಗ್ಗದ ಶುಭಾ ಮರವಂತೆ ಅವರಿಂದ ‘ಶರಣರು ಮತ್ತು ಕಲೆ’ ವಿಷಯವಾಗಿ ಉಪನ್ಯಾಸ.

2 weeks agoSeptember 21, 2025 7:01 pm

ಅನುಭಾವ

ಮೈಸೂರಿನ ಡಾ. ಶ್ರೀಕಂಠ ಸ್ವಾಮೀಜಿ ಅವರಿಂದ ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ ವಿಷಯವಾಗಿ ಅನುಭಾವ.

2 weeks agoSeptember 21, 2025 7:00 pm

ಆಶೀರ್ವಚನ

ಸಾಣೆಹಳ್ಳಿ ಶ್ರೀಗಳಿಂದ, ಭಾಲ್ಕಿ ಬಸವಲಿಂಗ ಪಟ್ಟದ್ದೇವರಿಂದ ಆಶೀರ್ವಚನ.

2 weeks agoSeptember 21, 2025 6:34 pm

ಸಾರ್ವಜನಿಕ ಸಮಾವೇಶ

ಜ್ಯೋತಿ ಬೆಳಗಿಸಿ ಪೂಜ್ಯರು ಹಾಗೂ ಗಣ್ಯರು ಸಮಾವೇಶ ಉದ್ಘಾಟಿಸಿದರು. ಬಸವ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನಡೆಯಿತು. ಸಕಲೇಶಪುರದ ಮಹಿಳಾ ಘಟಕದ ಶರಣೆಯರಿಂದ ಬಸವ ಪ್ರಾರ್ಥನೆ.

‘ದಾರ್ಶನಿಕ ಬಸವಣ್ಣ’ ಹಾಗೂ ‘ವಚನ ವ್ಯಕ್ತಿತ್ವ ವಿಕಸನ’ ಎಂಬ ಎರಡು ಕಿರು ಪುಸ್ತಕಗಳು ಬಿಡುಗಡೆಗೊಂಡವು.

2 weeks agoSeptember 21, 2025 5:13 pm

ಸದ್ಭಾವನಾ ಪಾದಯಾತ್ರೆ

ಜಿಲ್ಲಾಧಿಕಾರಿ ಕಚೇರಿಯಿಂದ ಹಾಸನಾಂಬ ಕಲಾಕ್ಷೇತ್ರದವರೆಗೆ ಸಾಗಿದ ಸದ್ಭಾವನಾ ಪಾದಯಾತ್ರೆ.

2 weeks agoSeptember 21, 2025 1:40 pm

ಕಲ್ಯಾಣ ಗೀತೆಯೊಂದಿಗೆ ಸಂವಾದ ಮುಕ್ತಾಯ.

2 weeks agoSeptember 21, 2025 12:49 pm

ಸಂವಾದ ವಿಡಿಯೋ, ಫೋಟೋ

2 weeks agoSeptember 21, 2025 12:01 pm

ಬಂದ ಪ್ರಶ್ನೆಗಳು

  • ಬಸವಣ್ಣನವರು ದೇಹವೇ ದೇಗುಲ ಎಂದಿದ್ದರೂ, ಇತ್ತೀಚಿಗೆ ದೇಗುಲಗಳ ಸಂಖ್ಯೆ ಹೆಚ್ಚಾಗುತ್ತಿದೆ ಏಕೆ?
  • ಬಸವತತ್ವ ನಮ್ಮ ರಾಜ್ಯ, ದೇಶದಲ್ಲಿ ಏಕೆ ಪ್ರಚಲಿತದಲ್ಲಿ ಇಲ್ಲ?
  • ಸೂಳೆ ಸಂಕವ್ವೆ ಅಂತವರನ್ನು ಬದಲಾಯಿಸಿದ ಬಸವಣ್ಣನವರ ನಿಲುವು, ಪ್ರಸ್ತುತ ಸ್ಥಿತಿಯನ್ನೇಕೆ ಬದಲಾಯಿಸಿಲ್ಲ?
  • ವಿಶ್ವವಿಖ್ಯಾತಿ ಪಡೆದಿರುವ ಬಸವೇಶ್ವರರ ಹೆಸರನ್ನು ಯಾವುದೇ ವಿಶ್ವವಿದ್ಯಾಲಯಕ್ಕೆ ಇಟ್ಟಿಲ್ಲ ಏಕೆ?
  • ಲಿಂಗಪೂಜೆ ಬಗ್ಗೆ ಶರಣರ ಅಭಿಪ್ರಾಯವೇನು?
  • ಲಿಂಗಪೂಜೆಯ ಮಹತ್ವ ಎಲ್ಲರಿಗೂ ಏಕೆ ತಿಳಿಸಿಲ್ಲ?
  • ಕಲ್ಯಾಣ ಕ್ರಾಂತಿ ಆದಮೇಲೆ ಬಸವಣ್ಣ ಬಸವಕಲ್ಯಾಣ ಬಿಟ್ಟು ಕೂಡಲಸಂಗಮಕ್ಕೆ ಬಂದದ್ದು ಸರಿಯೆ?
  • ಲಿಂಗಾಯತ ಮಠಾಧೀಶರು ಕುಂಕುಮ ಹಚ್ಚುವುದು ಎಷ್ಟು ಸರಿ?
  • ಅನುಭವ ಮಂಟಪದಂತೆ ಇಂದು ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆಯೇ?
  • ಬಸವತತ್ವದಿಂದ ಬದಲಾವಣೆ ಹೇಗಾಗುತ್ತೆ?
  • ಬಸವತತ್ವದಲ್ಲಿ ಸಮಾನತೆ ಇದೆ ಎಂದರೆ, ಮಹಿಳೆಯರಿಗೆ ಮಠದ ಉತ್ತರಾಧಿಕಾರಿಯಾಗಲು ಅವಕಾಶವಿದೆಯ?
  • ಶರಣೆ ಅಕ್ಕಮಹಾದೇವಿ ಅವರ ದಿಗಂಬರತೆ ಸ್ವೀಕಾರಾರ್ಹವೆ?
  • ಗುರು ಲಿಂಗ ಜಂಗಮ ಈ ಮೂರರ ವ್ಯತ್ಯಾಸವೇನು?
  • ಶತಶತಮಾನಗಳ ಕಳೆದರೂ ವಚನಗಳ ಅರಿವು ಇಂದೂ ಏಕಿದೆ?
  • ಜಾತಿವ್ಯವಸ್ಥೆ ವಿರುದ್ಧ ಬಸವೇಶ್ವರರು ಹೋರಾಡಿದರೂ ಪ್ರಸ್ತುತ ಸಮಾಜದಲ್ಲಿ ಜಾತಿ ವ್ಯವಸ್ಥೆ ಪ್ರಬಲವಾಗಿದೆ ಏಕೆ?
  • ಅಂತರ್ಜಾತಿ ವಿವಾಹ ಮಠದಲ್ಲಿ ಎಷ್ಟರಮಟ್ಟಿಗೆ ನಡೆಯುತ್ತವೆ?
  • ಹಿಂದೆ 7 ಸಾವಿರ ಮಠಗಳಿದ್ದವು, ಇಂದು ಸಾವಿರಕ್ಕೆ ಕುಸಿದಿವೆ ಏಕೆ?
  • ಸ್ಥಾವರಕ್ಕಳಿಯುಂಟು ಎಂದ ಬಸವಣ್ಣನವರ ಮೂರ್ತಿಯನ್ನು, ಅವರ ಗುಡಿಯನ್ನು ಕಟ್ಟುವುದು ಎಷ್ಟು ಸರಿ?
  • ಬಸವಾದಿ ಶರಣರ ವಚನಗಳು ಪ್ರಸ್ತುತ ಸಮಾಜಕ್ಕೆ ದಿವ್ಯ ಔಷಧ ಆಗಬಲ್ಲವೆ?

2 weeks agoSeptember 21, 2025 11:32 am

ಸಂವಾದ ಕಾರ್ಯಕ್ರಮ ಆರಂಭ

ಶಾಸಕ ಬಾಲಕೃಷ್ಣ ಅವರು ಮಾತನಾಡಿದರು. ಚನ್ನರಾಯಪಟ್ಟಣದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣಗೊಳಿಸುವುದಾಗಿ ಹೇಳಿದರು.

2 weeks agoSeptember 21, 2025 11:30 am

ಉದ್ಘಾಟನೆ

ಪೂಜ್ಯರು ಹಾಗು ಗಣ್ಯರಿಂದ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ. ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಆಶಯ ನುಡಿ.

2 weeks agoSeptember 21, 2025 11:12 am

ಇಂದಿನ ಕಾರ್ಯಕ್ರಮ

ಸಂವಾದ
ಮುಂಜಾನೆ 11 ಗಂಟೆಗೆ ಹಾಸನಾಂಬ ಕಲಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ.

ಪಾದಯಾತ್ರೆ
ಮಧ್ಯಾಹ್ನ 4 ಗಂಟೆಗೆ ಪ್ರಮುಖ ಬೀದಿಗಳಲ್ಲಿ ಸದ್ಭಾವನಾ ಪಾದಯಾತ್ರೆ, ಬಸವಣ್ಣನವರ ರಥದ ಮೆರವಣಿಗೆ.

ಬಹಿರಂಗ ಸಮಾವೇಶ
ಸಂಜೆ 5 ಗಂಟೆಗೆ ಸಾರ್ವಜನಿಕ ಸಮಾರಂಭ ಹಾಸನಾಂಬ ಕಲಾಕ್ಷೇತ್ರದಲ್ಲಿ.

ನಾಟಕ
ರಾತ್ರಿ 8 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ.

2 weeks agoSeptember 21, 2025 11:54 am

ಅಭಿಯಾನಕ್ಕೆ ಶೃಂಗಾರಗೊಂಡ ಹಾಸನ ನಗರ

Share This Article
Leave a comment

Leave a Reply

Your email address will not be published. Required fields are marked *