ಬಸವ ಸಂಸ್ಕೃತಿ ಅಭಿಯಾನದ ಸುಶ್ರಾವ್ಯ ಗೀತೆಗಳು ಸದ್ಯದಲ್ಲೇ ಬಿಡುಗಡೆ

ಬೆಂಗಳೂರು

ಬಸವ ಸಂಸ್ಕೃತಿ ಅಭಿಯಾನದ ಗೀತೆಗಳ ಸಂಯೋಜನೆ ಮತ್ತು ರೆಕಾರ್ಡಿಂಗ್ ಕಾರ್ಯ ಕಳೆದೆರಡು ದಿನಗಳಿಂದ ಬೆಂಗಳೂರಿನ ಅಶ್ವಿನಿ ಸ್ಟುಡಿಯೋದಲ್ಲಿ ಜರುಗಿತು.

ಸದ್ಯಕ್ಕೆ ಸಂಕಲನವಾಗುತ್ತಿರುವ ಗೀತೆಗಳ ಸಾಹಿತ್ಯವನ್ನು ಅಥಣಿ ಮೋಟಗಿಮಠದ ಪೂಜ್ಯ ಪ್ರಭುಚನ್ನಬಸವ ಸ್ವಾಮೀಜಿ ರಚಿಸಿದ್ದಾರೆ.

ಸಂಗೀತ್ ಥಾಮಸ್ ತಂಡ ಸಂಗೀತ ಸಂಯೋಜಿಸಿದ್ದಾರೆ, ಖ್ಯಾತ ತಬಲವಾದಕ ವೇಣುಗೋಪಾಲ ರಾಜು ವಾದ್ಯ ಸಂಯೋಜಿಸಿದ್ದಾರೆ.

ಕಲಾವತಿ ದಯಾನಂದ, ಕೀರ್ತನ ಹೊಳ್ಳ, ಪಂ. ರವೀಂದ್ರ ಸೋರಗಾಂವಿ, ವಾಣಿಶ್ರೀ, ನಾಗರಾಜ ಸಾಣೇಹಳ್ಳಿ, ಶರಧಿ ಪಾಟೀಲ ಮತ್ತಿತರರು ಧ್ವನಿ ನೀಡಿದ್ದಾರೆ.

ಅಭಿಯಾನದ ಪ್ರಚಾರದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ, ಬಸವ ರಥಯಾತ್ರೆಯಲ್ಲಿ ಗೀತೆಗಳು ಬಳಕೆ ಆಗಲಿವೆ. ಶರಣರ ಭಾವಚಿತ್ರದೊಂದಿಗೆ ಗೀತೆಗಳ ಅಳವಡಿಸಲಾಗುವುದು, ಗೀತೆಗಳ ಸಾಲುಗಳನ್ನು ಘೋಷ ವಾಕ್ಯಗಳಾಗಿಯೂ ಎಂದು ಪ್ರಭುಚನ್ನಬಸವ ಸ್ವಾಮೀಜಿ ತಿಳಿಸಿದರು.

ಸಂಕಲನ ಕಾರ್ಯ ಅಂತಿಮ ಹಂತದಲ್ಲಿದ್ದು ಗೀತೆಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದೆಂದು ತಿಳಿದು ಬಂದಿದೆ.



ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *