ಹುಬ್ಬಳ್ಳಿ
ಬಸವ ಪರಂಪರೆ ಅಂದ್ರೆ ನಿಜ ಅರಿತು ಬಾಳುವುದು. 12ನೇ ಶತಮಾನದ ಲಿಂಗಾಯತ ಧರ್ಮದ ಮೂಲಕ ಅಪ್ಪ ಬಸವಣ್ಣನವರು ಸಕಲ ಜೀವರಾಶಿಗಳಿಗೂ ಅನ್ವಯ ಆಗುವಂತೆ ಮಾರ್ಗದರ್ಶನ ಮಾಡಿದ್ದಾರೆ. ಅದರೆ ಈಗಿನ ಮುಂದುವರೆದ ತಾಂತ್ರಿಕ ಕಾಲದಲ್ಲಿ ವಚನಗಳು ಮತ್ತು ಇಷ್ಟಲಿಂಗ ದೃಷ್ಟಿಯೋಗ ಎಷ್ಟು ಅವಶ್ಯಕತೆಯಿದೆ ಅನ್ನುವುದನ್ನು ನಾವು ಜನ ಸಾಮನ್ಯರಿಗೆ ಆಧುನಿಕ ಮಾಧ್ಯಮದ ಮುಖಾಂತರ ತಲುಪಿಸುವುದು ನಮ್ಮ ಪ್ರತಿಯೊಬ್ಬರ ಕರ್ತವ್ಯ.
1) AI (ಕೃತಕ ಬುದ್ಧಿಮತ್ತೆ ತಂತ್ರಜ್ಞಾನ) ಉಪಯೋಗ ಮಾಡಿಕೊಂಡು 770 ಅಮರಗಣಂಗಳ ಕ್ಯಾರೆಕ್ಟರ್ ಕ್ರಿಯೇಟ್ ಮಾಡಿ ವಚನಗಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು.
2) ಸಣ್ಣ ಮಕ್ಕಳಿಗೆ ದಿನಕ್ಕೊಂದು ವಚನಗಳ ಹೇಳುವಂತೆ ಮಾಡಿ, ಅವರಿಗೆ ಆಕರ್ಷಣೆ ಮಾಡುವ ಸಲುವಾಗಿ ನಗದು ಬಹುಮಾನ ನೀಡುವುದು.
3) ಸಭೆ ಸಮಾರಂಭಗಳಲ್ಲಿ ಹೊಸಬರನ್ನು ಕರೆತಂದು ಅವರಿಗೆ ನಮ್ಮ ತತ್ವ ಅತಿ ಸರಳ ಅಂತ ತಿಳಿಸುವುದು.
4) ವಿಧವೆ ಹೆಣ್ಣುಮಕ್ಕಳು ಈಗಲೂ ಸಹ ವೈದಿಕ ನಂಬಿಕೆಗಳ ದಾಸರಾಗಿದ್ದಾರೆ. ಇದು ತಪ್ಪು, ಸರಳ ಸುಂದರ ಜೀವನ ಪ್ರತಿಯೊಬ್ಬರ ಹಕ್ಕು ಅಂತ ಮನದಟ್ಟು ಮಾಡಲು ಅಂತಹ ತಾಯಿಂದ್ರ ಕರೆತಂದು ಕಾರ್ಯಕ್ರಮ ಮಾಡಿಸುವದು.
5) ನಮ್ಮ ಅಭಿಯಾನ ಸಾಧನೆ ಇಲ್ಲದೆ ಬರಿ ಭೋದನೆ ಆಗಬಾರದು. ಇಷ್ಟಲಿಂಗ ಶಿವಯೋಗ ಸಾಧನೆ, ವಚನಗಳು ಮೊದಲು ನಮ್ಮ ಜೀವನದಲ್ಲಿ ಏನು ಬದಲಾವಣೆ ತಂದಿದೆ ಅನುವದನ್ನು ನಾವು ಸಣ್ಣಸಣ್ಣ ವಿಡಿಯೋ ಮುಖಾಂತರ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು.
6) ನಮ್ಮ ಅಭಿಯಾನ ಎಲ್ಲ ಮಾಧ್ಯಮ ಭಾಷೆಗಳಲ್ಲಿ ಜನರ ಮನಮುಟ್ಟಲು ದಿನಾ ಸಂಪನ್ಮೂಲ ವ್ಯಕ್ತಿಗಳಿಂದ ವಿಡಿಯೋ ಮಾಡಿಸಿ ಹಾಕುವುದು.
7) ಅಭಿಯಾನದ ಬಗ್ಗೆ ಪ್ರತಿಯೊಬ್ಬರು ಮನೆಮನೆಗೆ ಹೋಗಿ ಅವರಿಂದ ಬಸವಣ್ಣನವರ ಬಗ್ಗೆ, ಶರಣರ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಹಾಕುವುದು.
8) ಇಷ್ಟಲಿಂಗ ಶಿವಯೋಗವು ಮಕ್ಕಳು ಮತ್ತು ಮಹಿಳೆಯರ ಅರೋಗ್ಯ ಮತ್ತು ಮನಸ್ಸಿಗೆ ಹೇಗೆ ಸಹಾಯ ಆಗುತ್ತೆ ಅಂತ ಶರಣರ ಬಗ್ಗೆ ಒಂದು ಚಿತ್ರಣ ಇಲ್ಲವೇ ಅನುಭಾವ ಮಾಡುವುದು.
9) ಶರಣರು ಸಂಸಾರಧರ್ಮ ದೊಡ್ಡದು ಅಂತ ಸಾರಿದ್ದಾರೆ, ಅಂತ ತೋರಿಸಲು ಶರಣ ದಂಪತಿಗಳಿಗೆ ಗೌರವ ಸನ್ಮಾನ ಮಾಡಿ ಅವರಿಗೆ ತತ್ವದ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು.
10 ) ವಚನಗಳನ್ನು ಬೇರೆ ಬೇರೆ ರೀತಿಯಲ್ಲಿ, ಹೊಸ ಹೊಸ ಪ್ರಯೋಗಗಳ ಮುಖಾಂತರ ಅಪ್ಲೋಡ್ ಮಾಡುವದು.
11) ನಮ್ಮ ಧರ್ಮ ಉಳಿಯಲು ನಾವು ಜನರಲ್ಲಿ ಈಗಿನ ದಿನಗಳಲ್ಲಿ ಅವರ ಕೊರತೆ ಏನು ಎಂಬುದು ತಿಳಿದು, ಅದರಿಂದ ಅವರು ಹೊರಬರಲು ವಚನಗಳು, ಇಷ್ಟಲಿಂಗ ಶಿವಯೋಗ ಹೇಗೆ ಸಹಾಯ ಮಾಡುತ್ತವೆ ಅನ್ನುವುದು ಮನದಟ್ಟು ಮಾಡಿಕೊಟ್ಟಾಗ ಜನರು ಸಹಜವಾಗಿ ನಮ್ಮತ್ತ ಬರುತ್ತಾರೆ.
12) ವಚನಗಳಲ್ಲಿ ವೈಜ್ಞಾನಿಕ ಅರಿವು, ಸಮಾನತೆ, ರಾಜಕೀಯ, ಸಂಸ್ಕೃತಿ ಹೇಗೆ ಅದು ಎಲ್ಲವನ್ನು ಒಳಗೊಂಡಿದೆ ಅಂತ ಸಾರಲು ಎಲ್ಲಾ ಕ್ಷೇತ್ರಗಳಲ್ಲಿ ಇರುವ ನಮ್ಮ ವ್ಯಕ್ತಿಗಳು ತಮ್ಮ ಅನುಭಾವ ಹಂಚಿಕೊಳ್ಳಬೇಕು.