ಬಳ್ಳಾರಿ
ಬಳ್ಳಾರಿಯ ಬಿ. ಗೋನಾಳ ಏರಿಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಸವಾದಿ ಶರಣರ ವಚನ ಕಂಠಪಾಠ ಸ್ಪರ್ಧೆ ನಡೆಸಲಾಯಿತು.

ಮನ-ಮನೆ, ಶಾಲೆ-ಗ್ರಾಮ, ಊರುಗಳಿಗೆ ಬಸವ ತತ್ವ ಸಂದೇಶ ಸಾರುತ್ತ, ಸಂದೇಶ ತಲುಪಿಸುತ್ತಿರುವ ಬಳ್ಳಾರಿಯ ಅಂದ್ರಾಳ್ ರಾಷ್ಟ್ರೀಯ ಬಸವ ದಳದ ವತಿಯಿಂದ ಒಂದು ವಾರ ಮೊದಲೇ ಶಾಲೆಯ ಮಕ್ಕಳಿಗೆ ವಚನ ಪುಸ್ತಕ ವಿತರಿಸಲಾಗಿತ್ತು.

ಉತ್ತಮವಾಗಿ ವಚನ ಕಂಠಪಾಠ ಮಾಡಿದ ಮಕ್ಕಳಿಗೆ ಪದಕಗಳ ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲರಿಗೂ ಪೆನ್ನು ವಿತರಿಸಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶರಣ ಶಿವಕುಮಾರ, ಬಸನಗೌಡರು, ಕೆ. ರವಿಶಂಕರ, ಪಂಪನಗೌಡ್ರು, ಗಾಳೇಶಣ್ಣ, ಗಾದಿಲಿಂಗಪ್ಪ, ದುರುಗಣ್ಣ, ಹರೀಶ್ , ಶಿವಗಂಗಮ್ಮ, ನಾಗಲಿಂಗಣ್ಣ ಮತ್ತು ಶಾಲಾ ಆಡಳಿತ ಮಂಡಳಿ, ಸರ್ವ ಶಿಕ್ಷಕ ವೃಂದ ಮತ್ತು ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡುವಲ್ಲಿ ಸಹಕರಿಸಿದರು.

ರಾಷ್ಟ್ರೀಯ ಬಸವ ದಳದ ಅಂದ್ರಾಳ ಯುವ ಘಟಕ, ಬಳ್ಳಾರಿ ಜಿಲ್ಲಾ ಯುವ ಘಟಕದ ಕಾರ್ಯಕರ್ತರಾದ ಹರೀಶ, ಕಾರ್ತಿಕ, ಮುತ್ತು, ಚನ್ನಬಸವಣ್ಣ ಮತ್ತಿತರರು ಉಪಸ್ಥಿತರಿದ್ದರು.




