ಚಿಂಚೋಳಿ
ಬಸವ ಭವನಕ್ಕೆ ನಿವೇಶನ ಮಂಜೂರು ಮಾಡುವಂತೆ ಸರಕಾರವನ್ನು ಆಗ್ರಹಿಸಿ ಹಳೆ ತಹಸೀಲ್ದಾರ್ ಕಚೇರಿಯ ಮುಂದೆ ಬಸವ ಸಂಘಟನೆಯ ಕಾರ್ಯಕರ್ತರು ಸೋಮವಾರ ಧರಣಿ ನಡೆಸಿದರು.
ಚಂದಾಪುರ ಹಳ್ಳಿಯ ಸರ್ವೆ ನಂಬರ್ 12/4ರಲ್ಲಿರುವ 200×200 ಅಳತೆಯ ನಿವೇಶನವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿಯನ್ನು ಜೂನ್ 20ರಂದು ಬಸವ ಅನುಯಾಯಿಗಳು ನೀಡಿದ್ದರು.
“ಬಸವ ಭವನ ತಾಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಲಿಂಗಾಯತ ಸಮಾಜದ ಬಹುದಿನದ ಬೇಡಿಕೆಯಾಗಿದೆ. ಇದಕ್ಕೆ ಸ್ಥಳೀಯ ಅಧಿಕಾರಿಗಳು, ಶಾಸಕರು, ಸಚಿವರು ಸ್ಪಂದಿಸಿಲ್ಲ. ಶಾಂತಿಯ ಮಂತ್ರ ಹೇಳುವ ಲಿಂಗಾಯತ ಸಮಾಜಕ್ಕೆ ಉಗ್ರ ರೂಪ ತಾಳಲು ಅವಕಾಶ ಕೊಡೇಬೇಡಿ,” ಎಂದು ಚಿಂಚೋಳಿ ವೀರಶೈವ ಮಹಾಸಭಾದ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಬಸವರಾಜ ಸಜ್ಜನ,ಸುರೇಶ ದೇಶಪಾಂಡೆ, ಸಂತೋಷ ಕಶೆಟ್ಟಿ, ವೀರೇಶ ಯಂಪಳ್ಳಿ, ಲೋಕೇಶ ಶೇಳಗಿ, ಅನಿಲಕುಮಾರ, ಆನಂದ ಹಿತ್ತಲ್, ರಾಜಶೇಖರ ಹಿತ್ತಲ್, ಶಂಕರ ಶಿವಪೂರಿ ಉಪಸ್ಥಿತರಿದ್ದರು.