ಮಸ್ಕತ್ ನಗರದಲ್ಲಿ ಸಂಭ್ರಮದ ಬಸವ ಜಯಂತಿ ಆಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಸಿದ್ದಗಂಗಾ ಶ್ರೀ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 700 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಮಸ್ಕತ್ (ಒಮಾನ್)

ಅರಬ್ ರಾಷ್ಟ್ ಒಮಾನ್ ನ ರಾಜಧಾನಿ ಮಸ್ಕತ್ ನಗರದ ಕೃಷ್ಣಮಂದಿರ ಸಭಾಂಗಣದಲ್ಲಿ ಅದ್ದೂರಿ 15ನೇ ವಾರ್ಷಿಕ ಬಸವ ಜಯಂತಿ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಸಿದ್ದಗಂಗಾ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ಗುರುವಣ್ಣ ದೇವರಮಠದ ಪೂಜ್ಯ ನಂಜುಂಡಸ್ವಾಮಿಗಳು, ಅರಮೇರಿ ಮಠದ ಮಲ್ಲಿಕಾರ್ಜುನ ಸ್ವಾಮಿಗಳು ಬೇವೂರು ಮಠದ ಮೃತ್ಯುಂಜಯ ಸ್ವಾಮಿಗಳು ಆಗಮಿಸಿದ್ದರು.

ವಿಶೇಷ ಆಹ್ವಾನಿತರಾಗಿ ಬಂದಿದ್ದ ಭಾರತೀಯ ರಾಯಭಾರಿ ಜಿ.ವಿ. ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಿದವು.

ಬಸವಣ್ಣನವರು, ವಚನಗಳು ಕುರಿತು ಭಾಷಣ, ಹಾಡು, ವಿವಿಧ ನೃತ್ಯ, ”ತ್ರಿವಿಧ ದಾಸೋಹ”ನಾಟಕ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಅರ್ಥಪೂರ್ಣವಾಗಿ ಮಾತನಾಡುತ್ತಾ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಮಸ್ಕತ್ ನಲ್ಲಿ ನೆಲೆಸಿರುವ ಕನ್ನಡಿಗರ ಸಂಸ್ಕೃತಿ ಮತ್ತು ಅದರ ಆಚರಣೆಗೆ ಅನುವು ಮಾಡಿಕೊಟ್ಟ ದೇಶದ ಮನೋಭಾವ ಬಸವಣ್ಣವರ ವಚನದಂತೆ ಇವನಾರವ ಇವನಾರವ ಎಂದೆನಿಸದೇ ಇವನಮ್ಮವ ಎನ್ನುವ ಹಾಗಿದೆ ಎಂದು ಬಣ್ಣಿಸಿದರು.

ಮಸ್ಕತ್ ಬಸವ ಬಳಗ ಒಂದು ಮಾದರಿ ಕೂಟ, ಯಾವುದೇ ಅಧ್ಯಕ್ಷ, ಕಾರ್ಯದರ್ಶಿ ಎಂಬ ಪದಾಧಿಕಾರಿಗಳು ಇಲ್ಲದೇ ಎಲ್ಲರೂ ಸೇವಾಕರ್ತರು ಎಂಬ ಮನೋಭಾವದಿಂದ ದುಡಿಯುತ್ತಿದ್ದಾರೆ ಎಂದು ಸ್ವಾಮೀಜಿ ಬಣ್ಣಿಸಿದರು.

ಸುಮಾರು 700 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಎಲ್ಲರಿಗೂ ರುಚಿಕರವಾದ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
1 Comment

Leave a Reply

Your email address will not be published. Required fields are marked *