ಬಸವ ಜಯಂತಿ: ಸಾಂಸ್ಕೃತಿಕ ನಾಯಕ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಸಿಂಧನೂರು

ಬಸವ ಕೇಂದ್ರ ಹಾಗೂ ಬಸವಪರ ಸಂಘಟನೆಗಳು ಆಯೋಜಿಸಿರುವ 892ನೇ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಸಿಂಧನೂರ ನಗರದ ಎಲ್ಲಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ” ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು” ವಿಷಯವಾಗಿ ಪ್ರಬಂಧ ಸ್ಪರ್ಧೆ ನಡೆಸಲಾಯಿತು.

ಶರಣ ಬೀರಪ್ಪ ಶಂಭೋಜಿಯವರು ಆರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ, ಬಸವೇಶ್ವರರು ಮಹಾನ್ ಮಾನವತವಾದಿಗಳು, ಸಕಲ ಜೀವಿಗಳಿಗೆ ಲೇಸನ್ನು ಬಯಸಿದ ಮಹನೀಯರು. 12ನೆಯ ಶತಮಾನದಲ್ಲಿ ನವಸಮಾಜ ನಿರ್ಮಾಣ ಮಾಡಿದವರು. ಸಮಾಜದ ಮೌಡ್ಯಗಳನ್ನು , ಅಸಮಾನತೆಯನ್ನು ತೊಡೆದು ಹಾಕುವಲ್ಲಿ ಯಶಸ್ವಿ ನಾಯಕರಾದ ಇವರನ್ನು ಕರ್ನಾಟಕ ಘನ ಸರಕಾರ ” ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ” ಎಂದು ಘೋಷಣೆ ಮಾಡಿದೆ.

ಈ ವಿಷಯವಾಗಿ ಎಲ್ಲಾ ವಿದ್ಯಾರ್ಥಿಗಳು ಸುಂದರವಾಗಿ ಸ್ಪುಟವಾಗಿ ಪ್ರಬಂಧವನ್ನು ಬರೆಯಬೇಕು. ಆಕರ್ಷಕವಾಗಿ ಬರೆದು ಪ್ರಥಮ ಬಂದವರಿಗೆ 2000 ರೂ, ದ್ವಿತೀಯ ಬಂದವರಿಗೆ 1500 ರೂ.ಯ, ತೃತೀಯ ಬಂದವರಿಗೆ ಒಂದು ಸಾವಿರ ರೂಪಾಯಿ ನಗದು ಬಹುಮಾನದ ಜೊತೆಗೆ ಪ್ರಶಸ್ತಿ ಪತ್ರ ಮತ್ತು ಗೌರವ ಶ್ರೀರಕ್ಷೆ ಇರುತ್ತದೆ. ದಿನಾಂಕ 30. 4. 2025 ರಂದು ಜರುಗಲಿರುವ ಬಸವ ಜಯಂತಿ ಕಾರ್ಯಕ್ರಮದ ಸಾಯಂಕಾಲದ ವೇದಿಕೆಯಲ್ಲಿ ಬಹುಮಾನವನ್ನು ವಿತರಿಸಲಾಗುವುದು ಹಾಗು ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ವಿವರಿಸಿದರು.

ಕಾರ್ಯಕ್ರಮದ ಸಂಘಟಕರಾದ ಶರಣ ಪರಶುರಾಮ ಮಲ್ಲಾಪುರ, ಶರಣ ಎಚ್.ಎಫ್. ಮಸ್ಕಿ, ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಬಸವ ಕೇಂದ್ರದ ಉಪಾಧ್ಯಕ್ಷರಾದ ಬಸವಲಿಂಗಪ್ಪ ಬಾದರ್ಲಿ ಮಾತನಾಡಿದರು. ಶರಣ ಬಸವರಾಜ ಬಳಿಗಾರ ಸ್ವಾಗತಿಸಿ, ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *