ಹರಿಹರ
ತಾಲೂಕಿನ ಮಲೆಬೆನ್ನೂರು ಪಟ್ಟಣದ ಡಾ. ರಾಜಕುಮಾರ ಬಡಾವಣೆಯಲ್ಲಿ ನಿರ್ಮಾಣ ಹಂತದ ಬಸವ ಮಂಟಪದ ಕಾಮಗಾರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರು ಒಂದೂವರೆ ಲಕ್ಷ ಮಂಜೂರು ಮಾಡಿರುತ್ತಾರೆ.
ಯೋಜನಾಧಿಕಾರಿ ವಸಂತ ಅವರು ಬಸವ ಮಂಟಪದ ರೂವಾರಿ ಶರಣ ನಾರೇಶಪ್ಪ ಹಾಗೂ ಶರಣೆ ಸರೋಜಮ್ಮ ಅವರಿಗೆ ಚೆಕ್ಕನ್ನು ಹಸ್ತಾಂತರಿಸಿದರು.
ಅಕ್ಕನ ಬಳಗದ ಶರಣೆಯರು ಅರ್ಧಗಂಟೆ ವಚನ ಗೀತೆ ಹಾಡಿ ಸರಳ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
40ಕ್ಕೂ ಹೆಚ್ಚು ಶರಣ, ಶರಣೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.