ಬೆಂಗಳೂರು
ಬಸವ ಜಯಂತಿಗೆ ರಾಜ್ಯಾದ್ಯಂತ ಸಂಭ್ರಮದ ಸಿದ್ದತೆಗಳು ನಡೆಯುತ್ತಿವೆ.
ಕಳೆದ ಒಂದು ವರ್ಷದಿಂದ ಲಿಂಗಾಯತ ಸಮಾಜದ ಮೇಲೆ ಹಲವಾರು ರೀತಿಗಳಲ್ಲಿ ಸಾಂಸ್ಕೃತಿಕ ದಾಳಿ ನಡೆಯುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿಯವರು ಬಸವ ಜಯಂತಿಗೆ ರೇಣುಕಾಚಾರ್ಯರ ಜಯಂತಿ ಜೋಡಿಸುವ ಸುತ್ತೋಲೆ ಈ ನಿಟ್ಟಿನಲ್ಲಿ ನಡೆದಿರುವ ಹೊಸ ಪ್ರಯತ್ನವಷ್ಟೇ.
ಈ ಹಿನ್ನಲೆಯಲ್ಲಿ ಏಪ್ರಿಲ್ 30ರ ವಿವಿಧ ಜಿಲ್ಲೆಗಳಲ್ಲಿ ಬಸವ ಜಯಂತಿಯ ಸಿದ್ದತೆಗಳು ಹೇಗೆ ನಡೆದಿವೆ, ಈ ವರ್ಷದ ಆಚರಣೆಯಲ್ಲಿ ಏನಾದರೂ ವಿಶೇಷತೆಯಿದೆಯೇ?
ಇಂದು ರಾತ್ರಿ 8.30ಕ್ಕೆ ಬಸವ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ:
ಉಪನ್ಯಾಸ:
- ಬಸವಂತಪ್ಪ ತೋಟದ, ಧಾರವಾಡ.
- ಬಸವರಾಜ ರೊಟ್ಟಿ, ಬೆಳಗಾವಿ.
ದಿನಾಂಕ : ಎಪ್ರಿಲ್ 26, 2025
ಸಮಯ : ರಾತ್ರಿ 8:30 – 9:30
ಪ್ರಾಸ್ತಾವಿಕ ಹಾಗೂ ಸಮಾರೋಪ ನುಡಿ,
ಡಾ. ಹೆಚ್ ಎಂ ಸೋಮಶೇಖರಪ್ಪ.
ಕಾರ್ಯಕ್ರಮ ನಿರ್ವಹಣೆ: ಕುಮಾರಣ್ಣ ಪಾಟೀಲ.
ಶರಣು ಸಮರ್ಪಣೆ : ಶರಣ ಸಿದ್ಧೇಶ
ದಯವಿಟ್ಟು ಗಮನಿಸಿ:
ಅತಿಥಿಗಳು ಪ್ರತಿಯೊಬ್ಬರು 10 ನಿಮಿಷ ಮಾತನಾಡಲಿದ್ದಾರೆ.
ನಂತರ 15 ನಿಮಿಷ ಮುಕ್ತ ವೇದಿಕೆ
(ಆಸಕ್ತರಿಗೆ ಮಾತನಾಡಲು ಅವಕಾಶ)
ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.