ಬಸವಕಲ್ಯಾಣ
ಪಟ್ಟಣದಲ್ಲಿ ಜರುಗಲಿರುವ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ದರ್ಬಾರ್ ಕಾರ್ಯಕ್ರಮದ ಕಾರ್ಯಾಲಯವನ್ನು ಇತ್ತೀಚೆಗೆ ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಪೂಜ್ಯ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮಲ್ಲಯ್ಯಸ್ವಾಮಿ ಹಿರೇಮಠ, ಸೂರ್ಯಕಾಂತ ಮಠ, ಸೋಮಶೇಖರ ವಸ್ತ್ರದ, ಚಂದ್ರಶೇಖರ ಪಾಟೀಲ, ಎಂ.ಕೆ. ನಂದಿ, ವೀರಣ್ಣ ಶೀಲವಂತ, ಸುನಿಲ ಪಾಟೀಲ, ಸೂರ್ಯಕಾಂತ ಶೀಲವಂತ, ಬಸವಂತಪ್ಪ ಲಾವರೆ, ದಯಾನಂದ ಶೀಲವಂತ, ವಿ.ಜಿ. ಪಾಟೀಲ, ಸಿದ್ರಾಮ ಕವಳೆ, ಗೋವಿಂದ ರೆಡ್ಡಿ ಮತ್ತಿತರರು ಹಾಜರಿದ್ದರು.
ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ದಸರಾ ದರ್ಬಾರ್ ನಡೆಯಲಿದ್ದು
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಶಾಸಕ ಶರಣು ಸಲಗರ ಅವರ ನೇತೃತ್ವದಲ್ಲಿ ಈಗಾಗಲೇ ಸ್ಥಳದ ಆಯ್ಕೆಯಾಗಿದೆ.