ಬಸವಕಲ್ಯಾಣ:
೧೨ನೇ ಶತಮಾನದ ಬಸವಾದಿ ಶರಣರ ವಚನಗಳು ವ್ಯಾಪಕವಾಗಿ ಜನಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪ ವತಿಯಿಂದ ಲಿಂಗೈಕ್ಯ ಸುಶೀಲಾದೇವಿ ಡಾ.ಬಿ.ವಿ. ಪಟೇಲ ಸ್ಮರಣೆಯ ಅಂಗವಾಗಿ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ ಅನುಭವಮಂಟಪ ಉತ್ಸವ ನಿಮಿತ್ಯ ಪ್ರತಿವರ್ಷವೂ ಆಯೋಜಿಸಲಾಗುತ್ತದೆ. ಈ ವರ್ಷ ನವೆಂಬರ್ ೨೩ ರವಿವಾರದಂದು ಬೆಳಿಗ್ಗೆ ೯-೩೦ ಗಂಟೆಗೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಈ ಸ್ಪರ್ಧೆ ನಡೆಸಲಾಗುತ್ತದೆ.
ಹೆಚ್ಚು ವಚನಗಳು ಕಂಠಪಾಠ ಹೇಳಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪ್ರಥಮ ಬಹುಮಾನ ರೂ. ೨೦,೦೦೦/- (ರೂ.ಇಪ್ಪತ್ತು ಸಾವಿರ ಮಾತ್ರ) ದ್ವಿತೀಯ ಬಹುಮಾನ ರೂ.೧೫,೦೦೦/- (ರೂ.ಹದಿನೈದು ಸಾವಿರ ಮಾತ್ರ) ಮತ್ತು ತೃತೀಯ ಬಹುಮಾನ ರೂ. ೧೦,೦೦೦/- (ರೂ.ಹತ್ತು ಸಾವಿರ ಮಾತ್ರ) ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಅದಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಯ ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅನುಭವಮಂಟಪದ ಅಧ್ಯಕ್ಷರಾದ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯ ನಿಯಮಗಳು:
೧. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ದಿನಾಂಕ: ೨೩-೧೧-೨೦೨೫ ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು.
೨. ಎಲ್ಲರಿಗೂ ಉಚಿತ ಪ್ರವೇಶ ಉಂಟು.
೩. ಸ್ಪರ್ಧೆಯಲ್ಲಿ ಭಾಗವಹಿಸುವವರು ೧೨ನೇ ಶತಮಾನದ ಶರಣರ ವಚನಗಳು ಮಾತ್ರ ಹೇಳಬೇಕು.
೪. ತಾವು ಹೇಳುವ ವಚನಗಳನ್ನು ದಾಖಲಿಸಿದ ನೋಟ್ಬುಕ್ ಸಿದ್ಧಪಡಿಸಿಕೊಂಡು ಬರಬೇಕು.
೫.ವಚನಪೂರ್ತಿಯಾಗಿ ಹೇಳಬೇಕು. ವಚನ ನೆನಪಿಸಿಕೊಳ್ಳಲು ಮಧ್ಯದಲ್ಲಿ ಒಂದು ನಿಮಿಷ ಕಾಲಾವಕಾಶ ಮಾತ್ರ ಇರುತ್ತದೆ.
೬. ಹಿಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ವಿಜೇತರರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
೭. ವಯಸ್ಸಿನ ನಿರ್ಬಂಧ ಇರುವುದಿಲ್ಲ. ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಭಾಗವಹಿಸಬಹುದು.
೮. ದೂರದಿಂದ ಆಗಮಿಸುವ ಸ್ಪರ್ಧಾಳುಗಳು ತಮ್ಮ ಹೋಗಿ ಬರುವ ಖರ್ಚು ತಾವೇ ಭರಿಸಬೇಕು.
೯. ವಸತಿ ಮತ್ತು ಪ್ರಸಾದ ವ್ಯವಸ್ಥೆ ಉಚಿತವಾಗಿ ಒದಗಿಸಲಾಗುವುದು.
೧೦. ರಾಜ್ಯಮಟ್ಟದ ಸ್ಪರ್ಧೆ ಇದಾಗಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಯವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
೧೧. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ದಿ: ನವೆಂಬರ್ ೨೯/೩೦, ೨೦೨೫ ರಂದು ನಡೆಯುವ ೪೬ನೆಯ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸುವುದು,
ಪೂಜ್ಯ ಶಿವಾನಂದ ಸ್ವಾಮಿಗಳು ಮೊ: ೮೯೭೧೯೪೮೫೮೩
ಬಾಬು ಬೆಲ್ದಾಳ ಮೊ:೯೮೮೦೭೬೮೬೬೨
ಅಶೋಕ ಕುಂಬಾರ ಮೊ: ೯೧೭೨೩೧೯೬೨೦
ಗಂಗಾಧರ ಬಿರಾದಾರ ೯೯೬೪೦೩೬೯೪೯.
