ಚಿಂಚೋಳಿ
ಲಿಂಗಾಯತ ಪದವೇ ಸೂಚಿಸುವಂತೆ ಲಿಂಗವನ್ನು ಅಂದರೆ ಪರಮಾತ್ಮನ ಕುರುಹುವನ್ನು ಯಾರು ಆಯತ ಮಾಡಿಕೊಳ್ಳುವರೋ ಅವರು ಲಿಂಗಾಯತರು, ಅದು ಜಾತಿಯಾಗಿ ತಿರುವು ಪಡೆದುಕೊಂಡಿರುವುದು ದುರಾದೃಷ್ಟಕರ. ಲಿಂಗವನ್ನು ಯಾರು ಬೇಕಾದರೂ ಧರಿಸಬಹುದು. ಮಾಂಗಲ್ಯ ಗಂಡನ ಕುರುಹು ಹೇಗೋ ಹಾಗೆಯೇ ಲಿಂಗ ಪರಮಾತ್ಮನ ಕುರುಹು. ಪರಮಾತ್ಮನನ್ನು ಬಯಸುವವರು ಲಿಂಗವನ್ನು ಕಟ್ಟಿಕೊಂಡರೆ ಅವರ ಕಾಯಕ ವರ್ಗ ಯಾವುದೇ ಇದ್ದರೂ ಸರಿ ಅವರು ಲಿಂಗಾಯತರಾಗುವರು ಎಂದು ಕಲ್ಯಾಣ ಮಹಾಮನೆಯ ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಮಾರ್ಮಿಕವಾಗಿ ಮಾತನಾಡಿದರು.

ಅವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪೂರಿನ ನಾರಾ ಪರಿವಾರದ ಸುನಿತಾ ವಿಜಯಕುಮಾರ ಇವರ ಮಕ್ಕಳಿಗೆ ಲಿಂಗದೀಕ್ಷೆ ಸಂಸ್ಕಾರ ಮತ್ತು ಶಾಲು ಹೊದಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪ್ರತಿಯೊಬ್ಬ ಲಿಂಗಾಯತರು ಧರ್ಮದ ಸಂಸ್ಕಾರವನ್ನು ವಿಧಿವತ್ತಾಗಿ ಪಡೆದುಕೊಳ್ಳಬೇಕು. ಲಿಂಗ, ರುದ್ರಾಕ್ಷಿ, ವಿಭೂತಿ ಉಳಿದರೆ ಮಾತ್ರ ಲಿಂಗಾಯತ ಧರ್ಮ ಉಳಿಯಲು ಸಾಧ್ಯ.
ಇಂದಿನ ಯುವಕರಿಗೆ ಲಿಂಗದ ವೈಜ್ಞಾನಿಕತೆ ತಿಳಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳುತ್ತಾ, ಸುನಿತಾ ವಿಜಯಕುಮಾರ ದಂಪತಿಗಳು ಮಕ್ಕಳಿಗೆ ಬಸವ ಧರ್ಮ ಸಂಸ್ಕಾರ ಕೊಡಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

ನಿವೃತ್ತ ಬಿಎಸ್ಸೆಪ್ ಯೋಧ ಸಿದ್ದಪ್ಪ ಮುಗನೂರು ಮಾತನಾಡಿ, ಇಂದಿನ ಯುವ ಮನಸ್ಸುಗಳು ಧರ್ಮ ಸಂಸ್ಕಾರದ ಜೊತೆಗೆ ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ತಂದೆ ತಾಯಿಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟರೆ ಅವರೆಂದೂ ದಾರಿ ತಪ್ಪಲು ಸಾಧ್ಯವಿಲ್ಲ ಎಂದರಲ್ಲದೆ ಸೈನಿಕರು ನಾವು ದೇಶದ ಗಡಿಯನ್ನು ಅತ್ಯಂತ ಶ್ರದ್ಧೆಯಿಂದ ಕಾಯುತ್ತೇವೆ ಆದರೆ ದೇಶದ ಒಳಗಿದ್ದು ಯುವ ಮನಸ್ಸುಗಳು ದುಶ್ಚಟಕ್ಕೆ ಬಲಿಯಾಗಿ ದೇಶ ವಿರೋಧಿ ಚಟುವಟಿಕೆ ನಡೆಸಿದರೆ ನಮ್ಮ ಹೃದಯ ಭಾರವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚಂದಾಪೂರದ ನಿರಂಕಾರಿ ಸಂತರು ಸತ್ಸಂಗವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿಜಯಕುಮಾರ ನಾರಾ, ಸುಮಿತ್ರಾ ದಾವಣಗಾವೆ, ಸಂಗಮೇಶ ತೊಗರಖೇಡೆ, ನೀಲಮ್ಮ, ಮಾತನಾಡಿದರು.
ಸುನಿತಾ ನಾರಾ ಸ್ವಾಗತಿಸಿದರೆ, ವಿರೇಶ ಮಾಹಾತ್ಮರು ನಿರೂಪಿಸಿದರು, ಹೇಮಾ ಮತ್ತು ಜ್ಯೋತಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸೊರಡೆ, ಶ್ಯಾಮರಾವ್ ತಾವರಖೇಡೆ, ಲಕ್ಷ್ಮಿಬಾಯಿ ಪಾಟೀಲ, ವಿಠಲ ಗೌಡ, ಸೂರ್ಯಕಾಂತ ಹುಲಿ, ಶಾಂತಪ್ಪ ದುಬಲಗುಂಡಿ, ರೇಣುಕಾ ಮಹಾಮನೆ, ಗಿರಿಜಾ ಹಂಗರಗೀಕರ್, ವಿಜಯಲಕ್ಷ್ಮೀ, ಸರಸ್ವತಿ, ಬಕ್ಕಪ್ಪ, ವಿಮಲಾ ಬಾಯಿ, ಸೋಮನಾಥ, ಮಲ್ಲಿಕಾರ್ಜುನ ಪೂಜಾರಿ, ಹೇಮಾ, ಈರಮ್ಮ, ಕಮಲಾಬಾಯಿ ನೂರಾರು ನಿರಂಕಾರಿ ಸಂತರು ಮತ್ತು ಬಸವ ಭಕ್ತರು ಉಪಸ್ಥಿತರಿದ್ದರು.