ಚಿಂಚೋಳಿ
ಪಟ್ಟಣದ ಚಂದಾಪುರದ ಪಟೇಲ್ ಕಾಲೋನಿಯ ಮದರಸಾದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಂಜಾನ ಹಬ್ಬದ ಅಂಗವಾಗಿ ತಾಲೂಕಾ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಇಫ್ತಾರ ಕೂಟ ಮತ್ತು ಊಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಂ ಬಾರಿ, ಮತ್ತು ಅಬ್ದುಲ್ ಬಾಸಿದ ಅವರು ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬೆರೆತುಕೊಂಡಿದ್ದು, ಒಗ್ಗಟ್ಟಿನಿಂದ ಇದ್ದಾರೆ ಎಂದು ಹೇಳಿದರು.
ತಾಲೂಕ ಅರೋಗ್ಯ ಅಧಿಕಾರಿ ಡಾ.ಮಹಮ್ಮದ್ ಗಫರ್ ಅವರು ಮಾತನಾಡಿ ರಂಜಾನ್ ಹಬ್ಬದ ಅಂಗವಾಗಿ ತಾಲೂಕ ವೀರಶೈವ ಸಮಾಜ ವತಿಯಿಂದ ವತಿಯಿಂದ ಇಫ್ತಾರ್ ಮತ್ತು ಊಟದ ಕಾರ್ಯಕ್ರಮ ಹಮ್ಮಿಕೊಂಡಿದನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ತಾಲೂಕ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿಗಳದ ವೀರೇಶ ದೇಸಾಯಿ ಚಿಮ್ಮಾಇದಲಾಯಿ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಪ್ರದೀಪ ದೇಶಮುಖ್ ಪೆÇೀಲಕಪಳ್ಳಿ, ರೇವಣಸಿದ್ದಪ್ಪ ದಾದಾಪೂರ, ಡಾ.ವಿಜಯ ಕುಮಾರ್ ಬೆಳಕೇರಿ, ಚಂದ್ರಶೇಖರ್ ಪಾರ, ರವೀಂದ್ರ ಬಂಡೆಪ್ಪನೋರ, ಚೆನ್ನವೀರ ಪಾಟೀಲ್ ದೇಗಲಮಡಿ, ಸಿದ್ದಣ್ಣ ಪಾಟೀಲ್, ವಿವೇಕ್ ಪಾಟೀಲ ದೇಗಲಮಡಿ, ಶ್ರೀಧರ್ ಪಾಟೀಲ ದೇಗಲಮಡಿ, ಮುಸ್ಲಿಂ ಸಮಾಜದ ಮುಖಂಡರಾದ ಕೆ.ಎಂ ಬಾರಿ, ಅಬ್ದುಲ್ ಬಾಸಿದ, ಮಕಸೂದ ಸೌದಾಗರ್, ಮತಿನ ಸೌದಾಗರ್, ಕಲಿಲ ಪಟೇಲ್, ಸತ್ತರ್ ಪಟೇಲ್, ಮಹಮ್ಮದ್ ನೋಮನ್ ಪಟೇಲ್, ಇಸ್ಮಾಯಿಲ್ ಪಟೇಲ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ನಿಂಬಾಜಿ ಚವ್ಹಾಣ, ಮತ್ತು ಮಸ್ಜಿದ್ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.