ಸಿ ಟಿ ರವಿ ವಿವಾದ: ಖಂಡಿಸುತ್ತೇನೆ, ಮೃತ್ಯುಂಜಯ ಶ್ರೀ; ಮಾತನಾಡಲ್ಲ, ವಚನಾನಂದ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ

ಶುಕ್ರವಾರ ಕೊಪ್ಪಳದ ಪಂಚಮಸಾಲಿ ಸಮಾಜ ಮುಖಂಡರ ಕುಟುಂಬದ ಮದುವೆ ಕಾರ್ಯಕ್ರಮಕ್ಕೆ ಇಬ್ಬರು ಶ್ರೀಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರು ಪ್ರತ್ಯೇಕವಾಗಿ ಶ್ರೀಗಳನ್ನು ಮಾತನಾಡಿಸಿದ್ದಾರೆ.

ಸಚಿವೆ ಲಕ್ಷ್ಮೀ ಹೇಬ್ಬಾಳ್ಳರ್ ಅವರ ಬಗ್ಗೆ ವಿಧಾನ ಪರಿಷತ್ತು ಸದಸ್ಯ ಸಿ.ಟಿ. ರವಿ ಅವರು
ಕೆಟ್ಟ ಪದ ಬಳಕೆ ಮಾಡಿರುವುದನ್ನು ನಾವು ಸಹಿಸುವದಿಲ್ಲ. ಇದನ್ನು ಖಂಡಿಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನನಗೆ ಇರುವ ಮಾಹಿತಿಯ ಪ್ರಕಾರ ಸಿ.ಟಿ. ರವಿ ಅವರು ಕೆಟ್ಟ ಪದ ಬಳಕೆ ಮಾಡಿದ್ದಾರೆ ಎಂಬುದು. ಹೀಗಾಗಿ, ನಾನು ಅದನ್ನು ಖಂಡಿಸುತ್ತೇನೆ. ಭಾರತದಲ್ಲಿ ಯಾವುದೇ
ಮಹಿಳೆಗೆ ಅಪಮಾನ ಮಾಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದರು. ಅವರು ಪತ್ರಕರ್ತರು ಕೇಳಿದಕ್ಕೆ ಉತ್ತರಿಸಿದ್ದಾರೆ.

ವಚನಾನಂದ ಸ್ವಾಮೀಜಿ

ಬೆಳಗಾವಿಯಲ್ಲಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ಆ ಬಗ್ಗೆ ಮಾಹಿತಿಯೂ ಇಲ್ಲ. ಹೀಗಾಗಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಅವರಿಗೆ ಸಿ.ಟಿ. ರವಿ ನಿಂದನೆ ವಿಚಾರ ಕಾನೂನು
ವ್ಯಾಪ್ತಿಗೆ ಬರುತ್ತದೆ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಘಟನೆಯ ಕುರಿತು ಮಾಹಿತಿ ತಿಳಿದುಕೊಂಡು ನಂತರ ಮಾತನಾಡುತ್ತೇನೆ ಎಂದು ಶುಕ್ರವಾರ ಪತ್ರಕರ್ತರು ಕೇಳಿದ್ದಕ್ಕೆ ಉತ್ತರಿಸಿದರು.

Share This Article
6 Comments
  • ವಚನಾನಂದಶ್ರೀಗಳು ಜಾಣಪೆದ್ದನಂತೆ ಮಾತನಾಡಿರುವುದನ್ನ ನೋಡಿದ್ರೆ ಅರ್ಥವಾಗುತ್ತದೆ ಇವರು ಸಂಘಪರಿವಾರದವರ ಪರ ಎಂಬುದು. ಸಂಘಪರಿವಾರದವರ ಪರವಾಗಿ ಇರಲಿ ತಪ್ಪೇನು ಆದರೆ ಸಂಘಪರಿವಾರದವರು ಸಿ.ಟಿ.ರವಿಗೆ ಕಲಿಸಿದ ಸಂಸ್ಕಾರ ಇದೆನಾ??ಅಥವಾ ಹಿಂದುತ್ವದವರು ಮಹಿಳೆಯರನ್ನ ಹಿಂದಿನಿಂದಲೂ ಶೂದ್ರಳು ಮತ್ತು ವೇಶ್ಯೆಯಂತೆ ಎಂಬ ಮನೋಭಾವವನ್ನ ಹೊಂದಿದ್ದಾರೆ ಎಂದು ಹೇಳಲು ವಚನಾನಂಶ್ರೀಗಳಿಗೆ ದೈರ್ಯವೆಲ್ಲಿಂದ ಬರಬೇಕು?

    ಅಪ್ಪ ಬಸವಣ್ಣನವರು ವೇಶ್ಯೆ ದಾಸಿಯರನ್ನ ಶರಣೆ ಎಂದು ಪುಣ್ಯಾಂಗಣೆ ಮಾಡಿದರು ಪ್ರತಿ ಮಹಿಳೆಯರನ್ನ ಅಕ್ಕ,ಅವ್ವ ಎಂದರು ಇದಲ್ಲವೇ ಸಂಸ್ಕಾರ ಸಂಸ್ಕ್ರತಿ…ಸಿ.ಟಿ ರವಿಯವರನ್ನ ಸಮರ್ಥಿಸಿಕೊಳ್ಳುವವರು ನಿಜವಾಗಲೂ ಯಾರು ಎಂದು ನಾವು ಸಿ.ಟಿ.ರವಿಯವರ ಪದ ಬಳಕೆಯೊಂದಿಗೆ ಕೇಳಬೇಕಾಗಿದೆ.

  • ಹಾಗೆಂದಿರುವುದು ರುಜುವಾತಾದರೆ ತಪ್ಪು ಎಂದಾದರೂ ಹೇಳಬಹುದಿತ್ತು. ಅವರ ಮಾತುಗಳು ಅವರ ಮಾನಸಿಕ ಸ್ಥಿತಿಗತಿಯನ್ನು ತೋರಿಸುತ್ತದೆ.

    • ಸ್ವಾಮೀಜಿಗಳಿಬ್ಬರು ‌ಸಂಘಪರಿವಾರದ
      ಅಣತಿಯಂತೆ ನಡೆಯುವವರು.
      ದೇಹ ಬಸವವಾಗಿದೆ ಮನಸ್ಸು ಮನುವಾದಿ ಯಾಗಿದೆ.

  • ಪಂಚಮಸಾಲಿಯ ಈ ಇಬ್ಬರೂ ಸ್ವಾಮಿಗಳು ಸಂಘಿಗಳ ಪರವಾದವರು ಕಾಸಿಗಾಗಿ ಬಸವಣ್ಣನವರನ್ನು ಕಡೆಗಣಿಸಿ ಅಯೋಧ್ಯಯ ರಾಮನ ದ್ವಾರಪಾಲಕರಾದವರು ಇವರಿಂದ ಸಮಾಜದ ಹಿತ ಬಯಸಲಾಗದು

  • ಬಸವಣ್ಣನವರ ನಡೆಯಲ್ಲಿ ನಡೆಯದವರು ಶರಣರಾಗಲು ಸಾಧ್ಯವಿಲ್ಲ ಅದಕ್ಕೆ ಇವರೂ ಅರಿವಿಲ್ಲದೆ ಬದುಕುವ ಜನರು ಅರಿವೇ ಗುರು ಎಂದು ಸಾರುವ ನಡೆ ಇವರದಲ್ಲ ಸಮಯ ಸಾಧಕರು ಎನ್ನಲು ತಪ್ಪಿಲ್ಲ

Leave a Reply

Your email address will not be published. Required fields are marked *