ದಾವಣಗೆರೆ
167ನೇ ಕದಳಿ ಕಮ್ಮಟದಲ್ಲಿ ವಚನ ದಾಸೋಹ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವು, ದಾವಣಗೆರೆ ಕುವೆಂಪು ನಗರದಲ್ಲಿರುವ “ಜಾಗೃತ ಮಹಿಳಾ ಸಂಘ”ದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೂ ಮೊದಲು ವಚನ ದಾಸೋಹ ಮತ್ತು ವೇದಿಕೆಯ ಪದಾಧಿಕಾರಿಗಳಿಂದ ಪ್ರಾರ್ಥನೆ ನಡೆಯಿತು.
ಲಿಂಗೈಕ್ಯ ಗೌರಮ್ಮ ಮತ್ತು ವೀರಭದ್ರಯ್ಯ ಹಂಜಿಗಿಮಠ ದತ್ತಿ. ದತ್ತಿದಾನಿಗಳು ಹೆಚ್.ಎಂ ಮಹಾರುದ್ರಯ್ಯ ಇವರ ಪರವಾಗಿ ಶರಣೆ ಶಾಂಭವಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎರಡನೆಯ ದತ್ತಿ ಲಿಂ.ಕೆ.ಜಿ ಕಲ್ಲಪ್ಪ ಮತ್ತು ಲಿಂ.ಕೆ.ಜಿ ಲೋಕೇಶ್ವರಮ್ಮ ದತ್ತಿ, ದತ್ತಿದಾನಿಗಳು ಕೆ.ಜಿ ಸದಾಶಿವಪ್ಪ ಮತ್ತು ಸಹೋದರರು.

ನಿವೃತ್ತ ಪ್ರಾಂಶುಪಾಲರು ಮತ್ತು ಕಸ್ತೂರ ಬಾ ಸಮಾಜದ ಅಧ್ಯಕ್ಷರು, ದತ್ತಿ ಉಪನ್ಯಾಸಕರೂ ಆಗಿರುವ ಶರಣೆ ಶಕುಂತಲಾ ಗುರುಸಿದ್ದಯ್ಯ ಅವರು ದತ್ತಿ ಅನುಭಾವವನ್ನು ನೀಡಿದರು. ಹಿಂದಿನ ಗತಕಾಲದ ಜೀವನಶೈಲಿಯಿಂದ ಇಂದಿನ ವೈಜ್ಞಾನಿಕ ಕಾಲದ ಜೀವನ ಶೈಲಿಯವರೆಗೂ ಅರ್ಥಸಹಿತ ನಡೆ-ನುಡಿಗಳು ಶರಣರ ವಚನಗಳಲ್ಲಿ ಒಳಗೊಂಡಿವೆ. ವಚನಗಳು ಬರಿ ಅಕ್ಷರವಾಗಿರದೆ ಜೀವನೋತ್ಸಾಹವನ್ನು ಒಳಗೊಂಡಿವೆ ಎಂದು ಹೇಳಿದರು. ವಚನಗಳಲ್ಲಿ ಕೌಟುಂಬಿಕ ಸಾಮರಸ್ಯ ಎಂಬ ವಿಷಯದ ಬಗ್ಗೆ ಮಾತನಾಡುತ್ತ ಈ ವಿಷಯ ತಿಳಿಸಿದರು.
ವಿಶೇಷ ಆಹ್ವಾನಿತರಾದ ಜಾಗೃತ ಮಹಿಳಾ ಸಂಘದ ಅಧ್ಯಕ್ಷರಾದ ಶರಣೆ ಶಾಂತಮ್ಮ ದಿಳ್ಯೆಪ್ಪ ಅವರು ಕದಳಿ ಮಹಿಳಾ ವೇದಿಕೆಯ ಕಾರ್ಯಕ್ರಮ ಇಲ್ಲಿ ನಡೆಸುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಜಾಗೃತ ಮಹಿಳಾ ಸಂಘದ ಕಾರ್ಯದರ್ಶಿಗಳಾದ ಶರಣೆ ಮೀನಾ ಬಾನು ಅವರು ನಡೆ ನುಡಿ ಒಂದಾಗಿರುವ ಶರಣ ತತ್ವವನ್ನು ತಾವು ಪಾಲಿಸುತ್ತಿರುವುದಾಗಿ ತಿಳಿಸಿದರು.
ಕದಳಿ ಮಹಿಳಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರಾದ ಶರಣೆ ನಿರ್ಮಲಾ ಶಿವಕುಮಾರ್, ಶರಣೆ ಮಂಜುಳ ಚಂದ್ರಶೇಖರ್, ಶರಣೆ ರತ್ನ ರೆಡ್ಡಿ ಉಪಸ್ಥಿತರಿದ್ದರು. ಲಘು ಉಪಾಹಾರದ ಪ್ರಾಯೋಜಕರಾದ ಮಮತಾ ನಾಗರಾಜರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಚನಗಳು ಎಲ್ಲರ ಬಾಳಿಗೆ ಬೆಳಕಾಗಿವೆ. ಯಾವುದೇ ಸಮಸ್ಯೆಗೆ ವಚನಗಳಲ್ಲಿ ಪರಿಹಾರವಿದೆ ಎಂದು ಹೇಳಿ, ಕದಳಿ ಮಹಿಳಾ ವೇದಿಕೆಯವರ ಕಡೆಯಿಂದ ಜಾಗೃತ ಮಹಿಳಾ ಸಂಘಕ್ಕೆ ಯಾವುದೇ ತರಹದ ಸಹಾಯ ಬೇಕಾದರೂ ನೀಡುವುದಾಗಿ ತಿಳಿಸಿದರು.
ಜಾಗೃತ ಸಂಘದ ಮಹಿಳೆಯರಿಗೆ ಆಟ ಆಡಿಸಿ ಬಹುಮಾನ ವಿತರಿಸಲಾಯಿತು. ಕದಳಿ ಮಹಿಳಾ ವೇದಿಕೆಯ ನಿರ್ದೇಶಕರಾದ ಶರಣೆ ಪಲ್ಲವಿ ಪಾಟೀಲ್ ಅವರು ಬಹುಮಾನಗಳನ್ನು ಪ್ರಾಯೋಜಿಸಿದ್ದರು.
ಕಾರ್ಯಕ್ರಮವನ್ನು ಶರಣೆ ವಸಂತ ಕೆ.ಆರ್ ನಿರೂಪಿಸಿದರು. ಶರಣೆ ಪೂರ್ಣಿಮಾ ಪ್ರಸನ್ನ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ದತ್ತಿ ಮತ್ತು ದಾನಿಗಳನ್ನು ಶರಣೆ ವಿಜಯ ಚಂದ್ರಶೇಖರ್ ಮತ್ತು ದತ್ತಿ ಉಪನ್ಯಾಸಕರಾದ ಶರಣೆ ಶಕುಂತಲಾ ಗುರುಸಿದ್ದಯ್ಯ ಅವರನ್ನು ಶರಣೆ ಸೌಮ್ಯ ಸತೀಶ್ ಪರಿಚಯಿಸಿದರು. ವಂದನಾರ್ಪಣೆಯನ್ನು ಶರಣೆ ನಂದಿನಿ ಗಂಗಾಧರ್ ಅವರು ನಡೆಸಿಕೊಟ್ಟರು.