ಫೆಬ್ರವರಿ 10ರಿಂದ ಬಸವಗಿರಿಯಲ್ಲಿ 23ನೇ ವಚನ ವಿಜಯೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಗಿರಿಯಲ್ಲಿ 10 ಸಾವಿರ ಜನ ಕುಳಿತುಕೊಳ್ಳಬಹುದಾದ ಅಕ್ಕ ಅನ್ನಪೂರ್ಣ ತಾಯಿ ಮಹಾ ಮಂಟಪ ನಿರ್ಮಿಸಲಾಗಿದೆ

ಬೀದರ್

ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಫೆಬ್ರವರಿ 10ರಿಂದ 12 ರವರೆಗೆ 23ನೇ ವಚನ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ. ಎಂದು ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಸವಗಿರಿಯಲ್ಲಿ 10 ಸಾವಿರ ಜನ ಕುಳಿತುಕೊಳ್ಳಬಹುದಾದ ಅಕ್ಕ ಅನ್ನಪೂರ್ಣ ತಾಯಿ ಮಹಾ ಮಂಟಪ ನಿರ್ಮಿಸಲಾಗಿದೆ. ಭಕ್ತರಿಗೆ ಮೂರೂ ದಿನ ಪ್ರಸಾದ ವ್ಯವಸ್ಥೆ ಇರಲಿದೆ.

ವಚನ ವಿಜಯೋತ್ಸವದ ಭಿತ್ತಿ ಪತ್ರಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ. ಫೆಬ್ರವರಿ 9 ರಂದು ಗುಂಪಾದಿಂದ ಬಸವಗಿರಿವರೆಗೆ ಬೈಕ್ ಹಾಗೂ ಕಾರುಗಳ ರ್‍ಯಾಲಿ ನಡೆಯಲಿದೆ. ವಚನ ವಿಜಯೋತ್ಸವದ ಮೂರು ದಿನಗಳಲ್ಲಿ ಅನೇಕ ಕಾರ್ಯಕ್ರಮಗಳು ಜರುಗಲಿವೆ, ಎಂದು ಅಕ್ಕ ಗಂಗಾಂಬಿಕೆ ತಿಳಿಸಿದರು.

ಫೆಬ್ರವರಿ 10

ಬೆಳಿಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜಾ ಯೋಗದೊಂದಿಗೆ ವಚನ ವಿಜಯೋತ್ಸವ ಆರಂಭವಾಗಲಿದೆ.

ಬೆಳಿಗ್ಗೆ 11ಕ್ಕೆ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ವಚನ ವಿಜಯೋತ್ಸವ ಹಾಗೂ ಸಾಮರಸ್ಯ ಗೋಷ್ಠಿಗೆ ಚಾಲನೆ ನೀಡುವರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ, ವಚನ ವಿಜಯೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು.

ಪೌರಾಡಳಿತ ಸಚಿವ ರಹೀಂ ಖಾನ್ ಅವರು ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು.

ಧಮ್ಮಾನಂದ ಮಹಾಥೆರೊ, ನೆಲ್ಸನ್ ಸುಮಿತ್ರ, ಬಲವಂತಸಿಂಗ್, ಕಾಜಿ ಎಸ್.ಎಚ್. ಸಮ್ಮುಖ ವಹಿಸುವರು. ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಾಂಗ್ರೆಸ್‌ ಮುಖಂಡ ರಾಜಶೇಖರ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು. ಮೈಸೂರಿನ ಶಂಕರ ದೇವನೂರು ಅನುಭಾವ ನೀಡುವರು.

ಮಧ್ಯಾಹ್ನ 3ಕ್ಕೆ ಜರುಗುವ ‘ವಚನ ಸಾಹಿತ್ಯದ ವಿವಿಧ ಆಯಾಮಗಳು’ ಗೋಷ್ಠಿಯನ್ನು ಮಾಜಿ ಸಂಸದ ಉಮೇಶ ಜಾಧವ ಉದ್ಘಾಟಿಸುವರು. ಹುಬ್ಬಳ್ಳಿಯ ಶಶಿಧರ ಕರವೀರ ಶೆಟ್ಟರ ಅನುಭಾವ ನೀಡುವರು. ಸಂಜೆ 6ಕ್ಕೆ ‘ಮಹಾಕ್ರಾಂತಿ’ ನಾಟಕ ಪ್ರದರ್ಶನಗೊಳ್ಳಲಿದೆ.

ಫೆಬ್ರವರಿ 11

11 ರಂದು ಬೆಳಿಗ್ಗೆ 8ಕ್ಕೆ ನಡೆಯುವ ಸಾಮೂಹಿಕ ವಚನ ಪಾರಾಯಣವನ್ನು ಡಾ. ಗುರಮ್ಮ ಸಿದ್ಧಾರೆಡ್ಡಿ, ಮಧ್ಯಾಹ್ನ 3ಕ್ಕೆ ಜರುಗುವ ಯೋಗ ಆರೋಗ್ಯ ಗೋಷ್ಠಿಯನ್ನು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಉದ್ಘಾಟಿಸುವರು.

ಸಂಜೆ 6ಕ್ಕೆ ಸಾಂಸ್ಕೃತಿಕ ಸೌರಭ ನಡೆಯಲಿದ್ದು, ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಸಹಯೋಗದಲ್ಲಿ ವಿವಿಧ ರಾಜ್ಯಗಳ ಕಲಾ ತಂಡದವರು ಕಲಾ ಪ್ರದರ್ಶನ ನೀಡಲಿದ್ದಾರೆ.

ಫೆಬ್ರವರಿ 12

ಫೆ. 12ರಂದು ಬೆಳಿಗ್ಗೆ 9ಕ್ಕೆ ನಗರದ ಬಸವೇಶ್ವರ ವೃತ್ತದಿಂದ ಬಸವಗಿರಿವರೆಗೆ ಸಮಗ್ರ ವಚನ ಸಾಹಿತ್ಯ ಹಾಗೂ ಲಿಂಗಾಯತ ಧರ್ಮ ಗ್ರಂಥದ ಭವ್ಯ ಮೆರವಣಿಗೆ ನಡೆಯಲಿದೆ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಚಾಲನೆ ನೀಡುವರು.

ಮೆರವಣಿಗೆಯಲ್ಲಿ ಸಾವಿರಾರು ಶರಣ ಶರಣೆಯರು ತಲೆ ಮೇಲೆ ಗುರುವಚನ ಹೊತ್ತು ಪಾಲ್ಗೊಳ್ಳುವರು. ವಚನ ಸಾಹಿತ್ಯ ಹೊತ್ತ ಪುಷ್ಪಾಲಂಕೃತ ರಥ 25 ಕಲಾ ತಂಡಗಳು ಛತ್ರಿ– ಚಾಮರ ಬಸವ ಧ್ವಜಗಳು ಶರಣರ ವೇಷಧಾರಿಗಳು ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮದ ಮಾತೆ ಗಂಗಾದೇವಿ, ಇಳಕಲ್‍ ಗುರುಮಹಾಂತ ಸ್ವಾಮೀಜಿ, ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಅಕ್ಕ ಗಂಗಾಂಬಿಕೆ ಸಾನ್ನಿಧ್ಯ ವಹಿಸುವರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಸಂಸದ ಸಾಗರ್ ಖಂಡ್ರೆ, ಶಾಸಕರಾದ ಪ್ರಭು ಚವಾಣ್, ಶರಣು ಸಲಗರ್, ಶಶಿಕಲಾ ಜೊಲ್ಲೆ, ಡಾ. ಸಿದ್ದು ಪಾಟೀಲ, ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಎಂ.ಜಿ. ಮುಳೆ ಅತಿಥಿಗಳಾಗಿ ಭಾಗವಹಿಸುವರು.

ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬುವಾಲಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ, ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ, ವಚನ ವಿಜಯೋತ್ಸವ ಕಾರ್ಯಾಧ್ಯಕ್ಷ ವಿಶ್ವನಾಥ ಕಾಜಿ, ಮೆರವಣಿಗೆ ಸಮಿತಿಯ ಅಧ್ಯಕ್ಷ ಜೈರಾಜ್ ಖಂಡ್ರೆ, ಪ್ರಮುಖರಾದ ರಾಜೇಂದ್ರಕುಮಾರ ಗಂದಗೆ, ಧನರಾಜ ಹಂಗರಗಿ, ಶಂಕರೆಪ್ಪ ಹೊನ್ನಾ, ಚಂದ್ರಕಾಂತ ಮಿರ್ಚೆ, ವಚನ ವಿಜಯೋತ್ಸವ ಮಾಧ್ಯಮ ಸಮಿತಿಯ ಸಂಯೋಜಕ ವಿರೂಪಾಕ್ಷ ಗಾದಗಿ, ವೀರಭದ್ರಪ್ಪ ಬುಯ್ಯಾ, ಬಸವರಾಜ ಪಾಟೀಲ ಹಾರೂರಗೇರಿ, ರಾಚಪ್ಪ ಪಾಟೀಲ, ಶಿವರಾಜ ಮದಕಟ್ಟಿ, ಪ್ರಕಾಶ್ ಸಾವಳಗಿ, ನಂದಕುಮಾರ ಪಾಟೀಲ, ಸುರೇಶ ಅಲಿಯಂಬರ್, ಸಂಜುಕುಮಾರ, ಶಿವಶಂಕರ ಟೋಕರೆ, ಉಷಾ ಮಿರ್ಚೆ, ಜ್ಞಾನದೇವಿ ಬಕ್ಕಚೌಡಿ, ಜಗದೇವಿ ಮದಕಟ್ಟಿ, ವಿದ್ಯಾವತಿ ಉಂಡೆ ಹಾಜರಿದ್ದರು.

Share This Article
1 Comment
  • ಈ ಮೊದಲು ಬಸವಾಯತರು ವಚನ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಸ್ಟು ಈಗ ನಿರುತ್ಸಾಹ ಕಾಣುತ್ತಿದೆ ,ಕಾರಣ ಮೊನ್ನೆ ನಡೆದ RSS ಪ್ರಾಯೊಜಿತ ಕಾಯ೯ಕ್ರಮದಲ್ಲಿ ಗಂಗಾಂಬಿಕೆ ಅಕ್ಕಾ ಬಾಗವಹಿಸಿ ,ಲಿಂಗಾಯತ ಧಮ೯ದ ಸೈದ್ದಾಂತಿಕ ಬದ್ಧತೆಗೆ ಮಾಡಿದ ಅಪಮಾನ ಯಂಬುದು ನನಗೆ ಸಂಪಕ೯ವಿರುವ ಬಸವಾಯತರ ಅಭಿಪ್ರಾಯ.

Leave a Reply

Your email address will not be published. Required fields are marked *