ಕಾವಿ, ಖಾದಿ ಬಿಟ್ಟು ಲಿಂಗಾಯತ ಧರ್ಮ ಹೋರಾಟ ಮುನ್ನಡೆಯಲಿ: ಸಾಣೇಹಳ್ಳಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

‘ಕಾವಿ, ಖಾದಿಗಳನ್ನು ನೆಚ್ಚಿಕೊಳ್ಳದೆ ಜನಸಾಮಾನ್ಯರ ಜೊತೆ ಹೋರಾಡಿದರೆ ಜಯಗಳಿಸಬಹುದು ಎಂಬುದನ್ನು ಬಸವಣ್ಣ ತೋರಿಸಿಕೊಟ್ಟಿದ್ದಾರೆ. ಅದೇ ದಾರಿಯಲ್ಲಿ ಲಿಂಗಾಯತ ಧರ್ಮದ ಹೋರಾಟದ ರೂಪುರೇಷೆಗಳನ್ನು ಮತ್ತೊಮ್ಮೆ ಸಿದ್ಧಪಡಿಸಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಶನಿವಾರ ಕರೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ಬಸವಪರ ಸಂಘಟನೆಗಳು, ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘಗಳು ಮತ್ತು ಆಕೃತಿ ಪುಸ್ತಕ ಸಹಯೋಗದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿ.ಬಿ.ಪಾಟೀಲ್ ರಚಿಸಿರುವ ಲಿಂಗಾಯತ ಚಳವಳಿ 2017-18 ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2017–18ರಲ್ಲಿ ನಡೆದ ಹೋರಾಟ ರಾಜಕೀಯ ಹಾಗೂ ಧಾರ್ಮಿಕ ಅಲ್ಲೋಲ ಕಲ್ಲೋಲ ಮಾಡಿದರೂ ಕ್ರಮೇಣ ಸತ್ವ ಕಳೆದುಕೊಂಡಿತು. ಬೆಂಬಲ ನೀಡಿದವರು ಹಿಂದಕ್ಕೆ ಸರಿದರು. ಹಿಂದೆ ಇದ್ದವರು ಮುಂದಕ್ಕೆ ಬಂದರು. ಹೊತ್ತು ಬಂದ ಕಡೆ ಕೊಡೆ ಹಿಡಿಯುವ ಪ್ರವೃತ್ತಿಯನ್ನು ಮಠಾಧೀಶರು ಪ್ರದರ್ಶಿಸಿದರು. ಅವೆಲ್ಲ ಈ ಕೃತಿಯಲ್ಲಿ ದಾಖಲಾಗಿದೆ’ ಎಂದರು.

‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಮತ್ತೆ ಹೋರಾಟ ಮಾಡುವುದು ಹೇಗೆ ಎಂಬುದರ ಬಗ್ಗೆ ಚಿಂತನ ಮಂಥನ ನಡೆಯಬೇಕು. ಜನರು ನಮ್ಮೊಂದಿಗಿದ್ದಾರೆ. 20 ಮಂದಿ ಸೇರಿ ಎಂದು ಸಲಹೆ ನೀಡಿದರು.

ಪುಸ್ತಕ ಲೋಕಾರ್ಪಣೆ ಮಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಲಿಂಗಾಯತರೆಲ್ಲರೂ ಸಂಘಟಿತರಾಗಿ ಪ್ರತ್ಯೇಕ ಧರ್ಮವನ್ನು ರಚಿಸಿಬೇಕು ಎಂದು ಹೇಳಿದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಬಸವಣ್ಣರನ್ನು ಧರ್ಮಗುರು ಎಂದು, ವಚನಗಳನ್ನು ಧರ್ಮಗ್ರಂಥವೆಂದು ಒಪ್ಪಿದವರೆಲ್ಲ ಲಿಂಗಾಯತರು’ ಎಂದರು.

‘ಬಸವಣ್ಣನನ್ನು ಓಡಿಸಿದ, ಶರಣರನ್ನು ಕೊಂದ, ವಚನಗಳನ್ನು ಸುತ್ತ ಶಕ್ತಿಗಳು ಈಗಲೂ ನಮ್ಮ ಸಮಾಜದಲ್ಲಿವೆ. ಅವುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಯಾವ ಹೋರಾಟ ಮಾಡಿದರೂ ಗುರಿ ಸಾಧಿಸಲಾಗದು’ ಎಂದರು.

ಲಿಂಗಾಯತರು ಹಿಂದೂಗಳಲ್ಲ ಆದರೂ ಲಿಂಗಾಯತರು ಹಿಂದೂಗಳು ಎಂದು ಹೇಳಿ ಹೇಳಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿಸಲಾಗಿದೆ. ಎಂದು ಇಳಕಲ್‌ ಚಿತ್ತರಗಿ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.

‘ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಂಬ ವರ್ಣಾಶ್ರಮದ ನಾಲ್ಕು ಡಬ್ಬಿಗಳಲ್ಲಿ ಲಿಂಗಾಯತರಿಲ್ಲ. ಲಿಂಗಾಯತರನ್ನು ಶೂದ್ರ ಡಬ್ಬಿಯಲ್ಲಿ ಇರಿಸಲು ನೋಡಲಾಗುತ್ತಿದೆ. ವರ್ಣಾಶ್ರಮದ ನಿಯಮ ಪ್ರಕಾರ ಶೂದ್ರರಿಗೆ ವಿದ್ಯೆ ಪಡೆಯುವ ದೇವರನ್ನು ಪೂಜಿಸುವ ಅಧಿಕಾರವಿಲ್ಲ. ಮೊದಲ ಮೂರು ಡಬ್ಬಿಯವರ ಸೇವಕರಾಗಿ ಇರಬೇಕು. ಬಸವಣ್ಣನವರು ಕೈಗೆ ಇಷ್ಟಲಿಂಗ ನೀಡಿ ಡಬ್ಬಿಗಳ ನಿರ್ಬಂಧದಿಂದ ಬಿಡುಗಡೆಗೊಳಿಸಿ ಸ್ವತಂತ್ರ ಮನುಷ್ಯರನ್ನಾಗಿ ಮಾಡಿದ್ದಾರೆ’ ಎಂದು ಹೇಳಿದರು.

ಹಿಂದೂಗಳು ಅವರ ಧರ್ಮ ಅವರು ಪಾಲನೆ ಮಾಡಲಿ ನಮ್ಮದೇನು ವಿರೋಧವಿಲ್ಲ. ಆದರೆ ಲಿಂಗಾಯತರು ಮಾತ್ರ ಲಿಂಗಾಯತ ಧರ್ಮವನ್ನೇ ಪಾಲನೆ ಮಾಡಬೇಕು, ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಲಿಂಗಾಯತ ಧರ್ಮದ ಹೋರಾಟ ಶುರುವಾಗಿದ್ದು 2017ರಲಲ್ಲ 1880ರಲ್ಲಿ ಎಂದು ಹೇಳಿ ಚಳುವಳಿಯ ದೀರ್ಘ ಇತಿಹಾಸ ವಿವರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *