ಗುಂಡ್ಲುಪೇಟೆ
ಪಟ್ಟಡದಲ್ಲಿ ನಡೆದ ಬಸವ ಜಯಂತಿಯ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಮೇ 19ರಂದು ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಬಸವ ಭಕ್ತರು ಭಾಗವಹಿಸಿದ್ದರು.
ಹದಿನೈದು ಸಾವಿರ ಜನರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು ಎಂದು ಆಯೋಜಕರು ಹೇಳಿದ್ದಾರೆ.
ಗುಂಡ್ಲುಪೇಟೆ ಕರ್ನಾಟಕದ ದಕ್ಷಿಣದ ತುದಿಯಲ್ಲಿರುವ ಕೇರಳ, ತಮಿಳು ನಾಡುಗಳ ಬಳಿಯಿರುವ ಗಡಿ ತಾಲೂಕು. ಇಲ್ಲೂ ಬಸವ ಜಯಂತಿಗೆ ಸಾವಿರಾರು ಜನರು ಬಂದಿರುವುದು ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಶಕ್ತಿಯ ಪ್ರದರ್ಶನ ಎಂದು ಏನೆಕರುಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.