ಗುರುಮಠಕಲ್
ಪಟ್ಟಣದ ಖಾಸಾಮಠದ ಆವರಣದಲ್ಲಿ ಡಾ ಮಹಾಂತ ಹಾಗೂ ಪ್ರೊ.ಅರುಣಕುಮಾರ ಅವರು ‘ವಚನ ಮಾಂಗಲ್ಯ’ದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಖಾಸಾಮಠದ ಪೀಠಾಧಿಪತಿ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟ ಅವರ ಸುಪುತ್ರಿ ಡಾ.ಮಹಂತಾ ಜೊತೆ ಕೇರಳ ಮೂಲದ ಪ್ರೊ.ಅರುಣಕುಮಾರ ಅವರ ವಿವಾಹವು ‘ವಚನ ಮಾಂಗಲ್ಯ’ವು ಸರಳವಾಗಿ ನಡೆಯಿತು.
‘ಮಲ್ಲಿಕಾರ್ಜುನ ಸತ್ಯಂಪೇಟೆಯವರು ತಮ್ಮ ಸುಪುತ್ರಿಯ ವಿವಾಹವನ್ನು ಸರಳ ಸಮಾರಂಭದ ಮೂಲಕ ಬಸಾವದಿ ಶರಣರ ಆಶಯದಂತೆ ವಚನಗಳ ಸಾಕ್ಷಿಯಾಗಿ, ಸಂವಿಧಾನದ ಪ್ರತಿಜ್ಞೆ ಮೂಲಕ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ’ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.
ವಿಶ್ವಾರಾಧ್ಯ ಸಂತ್ಯಂಪೇಟೆ ಅವರು ಮಾತನಾಡಿ,’ಪ್ರಸ್ತುತ ದಿನಮಾನಗಳಲ್ಲಿ ಬಸವಾದಿ ಶರಣರ ಆಶಯಗಳ ಉತ್ತೇಜನದ ಅಗತ್ಯತೆ’ ಬಗ್ಗೆ ವಿವರಿಸಿದರು. ವಚನ ಮಾಂಗಲ್ಯದಲ್ಲಿ ಶಾಸಕ ಶರಣಗೌಡ ಕಂದಕೂರ ಪಾಲ್ಗೊಂಡಿದ್ದರು.
ಕೇಂದ್ರೀಯ ವಿಶ್ವವಿದ್ಯಾಲಯದ ಉಪನ್ಯಾಸಕ ಪ್ರೊ.ವಿಕ್ರಂ ವಿಸಾಜಿ ಅವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಸಾಹಿತಿ ವೆಂಕಪ್ಪ ಅಲೆಮನಿಯವರು ವಚನ ಪ್ರತಿಜ್ಞಾ ವಿಧಿ ಬೋಧಿಸಿದರು. ಬಸವಾದಿ ಶರಣರ ವಚನಗಳ ಪ್ರತಿಜ್ಞಾ ಪೂರ್ವಕವಾಗಿ ಪುಷ್ಪಾರೋಹಣವು ಬಸವತತ್ವ ಅಭಿಮಾನಿಗಳು,ರಾಜ್ಯ ರೈತ ಸಂಘದ ಮುಖಂಡರ ಸಮ್ಮುಖದಲ್ಲಿ ನಡೆಯಿತು.
ವಚನ ಮಾಂಗಲ್ಯ ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡರಾದ ಚಾಮರಸ ಮಾಲಿಪಾಟೀಲ್, ಬಡಗಲಪುರ ನಾಗೇಂದ್ರ, ನಾಗರತ್ನ.ವಿ.ಪಾಟೀಲ್ ಯಕ್ಷಿಂತಿ, ಸಾಹಿತಿ ರಮೇಶಬಾಬು ಯಾಳಗಿ, ಡಾ.ಎಲ್.ಗಂಗಮ್ಮ ಸತ್ಯಂಪೇಟೆ,ಕಲಬುರಗಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಯಾದಗಿರಿ ವೀರಶೈವ ಮಹಾಸಭಾ ಅಧ್ಯಕ್ಷ ಚನ್ನಪ್ಪ ಗೌಡ ಮೋಸಂಬಿ, ಶಿವಣ್ಣ ಇಜೇರಿ, ತಾಲೂಕು ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ನಾಗಭೂಷಣ ಅವಂಟಿ, ನರಸರೆಡ್ಡಿ ಪೊಲೀಸ್ ಪಾಟೀಲ್ ಗಡ್ಡೆಸೂಗೂರ, ರಘುನಾಥ ರೆಡ್ಡಿ ನಜರಾಪೂರ, ವೀರಣ್ಣ ಬೇಲಿ, ಬಸವರಾಜ ಚಂಡರಕಿ, ನರಸರೆಡ್ಡಿ ನಜರಾಪೂರ, ಬಸರೆಡ್ಡಿ ಎಂಟಿಪಲ್ಲಿ ಸಿದ್ದಣ್ಣ ಜಾಡರ್ ಹಾಗೂ ಬಸವಾಭಿಮಾನಿಗಳು ಇದ್ದರು.