ಹರಿಹರ
ತಾಲೂಕಿನಲ್ಲಿ ಕದಳಿ ಮಹಿಳಾ ವೇದಿಕೆ ವತಿಯಿಂದ ಶರಣೆಯರಿಗೆ “ವಚನೋತ್ಸವ” ವಚನ ಗಾಯನ ತರಬೇತಿ ನೀಡಲಾಯಿತು.

ಜೆ.ಸಿ. ಬಡಾವಣೆಯ ಗಿರಿಯಮ್ಮ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಶಿಬಿರದಲ್ಲಿ, ದಾವಣಗೆರೆ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಗೌರವ ಸಲಹೆಗಾರರು, ಗಾಯಕರಾದ ಯಶಾ ದಿನೇಶ ಅವರು ಗಾಯನ ತರಬೇತಿ ನೀಡಿದರು.

12ನೇ ಶತಮಾನದ ವಚನಕಾರ್ತಿಯರ ಆಯ್ದ 5 ವಚನಗಳನ್ನು ಸುಶ್ರಾವ್ಯವಾಗಿ, ರಾಗಬದ್ಧವಾಗಿ, ಸುಮಧುರವಾಗಿ ಹಾಡಲು ಕಲಿಸಲಾಯಿತು. ಭಾಗಿಯಾದ 35 ಶಿಬಿರಾರ್ಥಿಗಳು ಆಸಕ್ತಿ, ಶ್ರದ್ಧೆಯಿಂದ ಕಲಿತರು.


ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಕೆ. ಬಿ. ಪರಮೇಶ್ವರಪ್ಪನವರು ಉಪಸ್ಥಿತರಿದ್ದು ತರಬೇತಿಯ ಯಶಸ್ಸಿಗೆ ಹಾರೈಸಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಮಮತಾ ನಾಗರಾಜರವರು ವಚನಗಳ ವಿಶ್ಲೇಷಣೆ ಮಾಡಿದರು. ಹೊಳೆ ಸಿರಿಗೆರೆಯ ಪ್ರವಚನಕಾರರಾದ ಡಿ. ಸಿದ್ದೇಶ ಅವರು ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ, ವಚನಗಳು ತುಂಬಾ ಅರ್ಥಗರ್ಭಿತವಾಗಿದ್ದು ಇಂದಿಗೂ ಪ್ರಸ್ತುತವಾಗಿವೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಹರಿಹರ ತಾಲೂಕ್ ಘಟಕದ ಅಧ್ಯಕ್ಷರಾದ ರೂಪ ನಾಗರಾಜ್ ಕುರುವತ್ತಿ, ಹರಿಹರದ ಸುನೀತ ಹೆಚ್. ಎಮ್., ಹೆಚ್. ಕೆ. ಜ್ಯೋತಿ, ಕುಸುಮ, ಅನಿತಾ ಪಾಟೀಲ , ಶಕುಂತಲಾ, ತುಂಗಾ, ಲಕ್ಷ್ಮಿ , ಸುಧಾ, ವಿಜಯಮ್ಮ ಮತ್ತು ಶಿವಲಿಂಗಮ್ಮ, ಹೊನ್ನಾಳಿಯ ತಾಲೂಕು ಘಟಕದ ಅಧ್ಯಕ್ಷರಾದ ಪ್ರತಿಮಾ ಹಾಗೂ ದಾವಣಗೆರೆಯ ವಿಜಯ ಚಂದ್ರಶೇಖರ, ಸೌಮ್ಯ ಸತೀಶ, ಪೂರ್ಣಿಮಾ ಪ್ರಸನ್ನ, ಶಾಂತ ಶಿವಶಂಕರ್ ಮತತ್ತಿತರರು ಉಪಸ್ಥಿತರಿದ್ದರು.