ಬಸವ ಜಯಂತಿಯ ಮೇಲೆ ಹಿಂದುತ್ವದ ಲೇಬಲ್ ಹಾಕುವ ಪ್ರಯತ್ನಗಳು

ವಿರಾಟ್ ಹಿಂದೂ ಶೋಭಾ ಯಾತ್ರೆಯ ರೀತಿಯಲ್ಲಿಯೇ ಹಲವಾರು ಕಡೆ ಬಸವ ಜಯಂತಿಯನ್ನು ಆಚರಿಸಿದರು.

ಹುಬ್ಬಳ್ಳಿ

ಬಸವ ಅನುಯಾಯಿಗಳ ಮೇಲೆ ಸಂಘ ಪರಿವಾರದಿಂದ ನಿರಂತರವಾದ ಸಾಂಸ್ಕೃತಿಕ ದಾಳಿ ನಡೆಯುತ್ತಿದೆ.

ವಚನ ದರ್ಶನ ಪುಸ್ತಕ, ಶರಣರ ಶಕ್ತಿ ಚಲನಚಿತ್ರ, ಮಂಗಳೂರು ವಚನ ಸಾಹಿತ್ಯ ಸಮ್ಮೇಳನ, ರೇಣುಕಾ ಜಯಂತಿ, ವೀಣಾ ಬನ್ನಂಜೆ, ಶಂಕರ ಬಿದರಿ ಸುತ್ತೋಲೆ – ಇವು ನಮಗೆ ಕಾಣಿಸಿರುವ ಕೆಲವು ಉದಾಹರಣೆಗಳಷ್ಟೇ.

ಇವುಗಳ ಮುಖ್ಯ ಉದ್ದೇಶ ಸ್ವತಂತ್ರ ಧರ್ಮವಾಗಿರುವ ಲಿಂಗಾಯತವನ್ನು ಹಿಂದೂ ಧರ್ಮದ ಭಾಗ ಎಂದು ಬಿಂಬಿಸುವುದು. ಸಮಾಜದಲ್ಲಿ ದಿನೇದಿನೇ ಜಾಗೃತವಾಗುತ್ತಿರುವ ಬಸವ ತತ್ವ ಇವರಿಗೆ ಬಿಸಿ ತುಪ್ಪವಾಗಿದೆ. ಅದಕ್ಕೆ ಏನಾದರೂ ಮಾಡಿ ಬಸವಣ್ಣನವರನ್ನು ವೈದಿಕ ಚೌಕಟ್ಟಿನ ಒಳಗೆ ಬಂಧಿಸಿಡಲು ಇವರು ಪ್ರಯತ್ನಿಸುತ್ತಿದ್ದಾರೆ.

ಇದೇ ತಂತ್ರವನ್ನು ಈ ಭಾರಿ ಬಸವ ಜಯಂತಿಯ ಮೇಲೂ ಬಳಸಿ ವಿರಾಟ್ ಹಿಂದೂ ಶೋಭಾ ಯಾತ್ರೆಯ ರೀತಿಯಲ್ಲಿಯೇ ಹಲವಾರು ಕಡೆ ಬಸವ ಜಯಂತಿಯನ್ನು ಆಚರಿಸಿದರು. ಕೆಲವು ಉದಾಹರಣೆಗಳನ್ನು ನೋಡಿ:

ಹುಬ್ಬಳ್ಳಿ ವೀರಾಪೂರ ಓಣಿಯಲ್ಲಿ ಏಕೋರಾಮರಾಧ್ಯ (ಪಂಚಾಚಾರ್ಯ) ಹಾಗೂ ಬಸವಣ್ಣನವರ ಭಾವಚಿತ್ರ ಜೊತೆಯಾಗಿ ಇಡಲಾಗಿತ್ತು. ಎಂದೂ ಮೆರವಣಿಗೆ ಮಾಡದವರು ಈ ಸಾರಿ ಡಿಜೆ ಹಚ್ಚಿ ಮೆರವಣಿಗೆಯಲ್ಲಿ ಸಿನಿಮಾ ಹಾಡುಗಳಿಗೆ ಕುಣಿಸಿದರು. ಸಾವಿರಾರು ಜನ ಭಾಗವಹಿಸಿದ್ದರು.

ಬೆಂಗಳೂರಲ್ಲಿ ಅಖಂಡ ವೀರಶೈವ ಲಿಂಗಾಯತ ವೇದಿಕೆಯ ಬ್ಯಾನರ್ ಅಲ್ಲಿ ಬಸವಣ್ಣ, ರೇಣುಕಾಚಾರ್ಯರ ಭಾವಚಿತ್ರ ಇದ್ದವು. ಹಾಗೆಯೇ ಕಾರ್ಯಕ್ರಮದಲ್ಲಿ ಸಂಸ್ಕೃತ ಮಂತ್ರಗಳನ್ನೂ ಹೇಳಿದರು. ದಿಂಗಾಲೇಶ್ವರ ಶ್ರೀ ಇದರ ಸಾನಿಧ್ಯವಹಿಸಿದ್ದರು.

ತುಮಕೂರಿನಲ್ಲಿ ಬಸವಣ್ಣ, ಸಿದ್ಧರಾಮೇಶ್ವರ, ರೇಣುಕಾಚಾರ್ಯ ಜಯಂತಿಗಳನ್ನು ಒಟ್ಟಾಗಿ ಆಚರಿಸಿದರು. ವಾಡಿಯಲ್ಲಿ ಬಸವ ಜಯಂತಿ ಜೊತೆ ರೇಣುಕರ ಜಯಂತಿಯನ್ನೂ ಮಾಡಿದರು.

ಹುಬ್ಬಳ್ಳಿ ರುದ್ರಾಕ್ಷಿ ಮಠದ ಸ್ವಾಮಿಜಿಗಳು ಜೋಡೆತ್ತುಗಳ ಮೆರವಣಿಗೆಗೆ ಚಾಲನೆ ನೀಡಿದರು.

ಶಿವಾಜಿ ಜಯಂತಿಯನ್ನು ಫೆಬ್ರುವರಿ 19 ರಂದು ಪ್ರತಿ ವರ್ಷ ಆಚರಿಸುತ್ತ ಬರಲಾಗುತ್ತಿದೆ ಆದರೂ ಹಲವಾರು ಕಡೆ ಮತ್ತೆ ಎಪ್ರಿಲ್ 30 ರಂದು ಮತ್ತೆ “ಶಿವ ಬಸವ” ಜಯಂತಿ ಎಂದು ಆಚರಿಸಿದರು.

ಬೆಳಗಾವಿ ಹಿಂಡಾಲ್ಕೊ ಕಂಪನಿಯಲ್ಲಿ ಕೆ ಎಲ್ ಇ ಸಹಯೋಗದಲ್ಲಿ ಶಿವಾಜಿ ಹಾಗೂ ಬಸವಣ್ಣನವರ ಜಯಂತಿ ಆಚರಿಸಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಹನುಮ ಜಯಂತಿ ಎಪ್ರಿಲ್‌ 12 ರಂದು ಆಚರಿಸಲಾಗಿತ್ತು. ಆದರೂ ಮತ್ತೆ ಮೇ 1 ರಂದು
ಸವಣೂರಿನಲ್ಲಿ ಹನುಮ ಬಸವ ಜಯಂತಿ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ‘ಹಿಂದೂ ಜಾಗೃತಿಯಲ್ಲಿ ಶ್ರೀರಾಮ ಹನುಮನ ಪ್ರೇರಣೆ ಹಾಗೂ ಹಿಂದೂ ಜಾಗೃತಿಯಲ್ಲಿ ಯುವಕರ ಪಾತ್ರ’ ವಿಷಯದ ಮೇಲೆ ಭಾಷಣವನ್ನೂ ಏರ್ಪಡಿಸಿದ್ದರು.

ಬಸವಣ್ಣನವರ ಭಾವಚಿತ್ರದ ಹಿಂದೆ ನಂದಿ ಚಿತ್ರ ಇದ್ದ ಪೋಸ್ಟರಗಳು, ಶಿವಾಜಿ ಬಸವಣ್ಣ ಪೋಸ್ಟರುಗಳು ಸಾಮಾಜಿಕ‌ ಮಾಧ್ಯಮಗಳಲ್ಲಿ ಕಾಣಿಸಿದವು.

ಬಸವಣ್ಣನವರ ಮೂರ್ತಿಗೆ ಕುಂಕುಮ ಹಚ್ಚಿದರು, ಶಿವಾಜಿ ಅಫ್ಜಲ್ ಖಾನ್ ಹತ್ಯೆ ಮಾಡುವ ಫೋಟೊ ಹಿಡಿದು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.

ಚಿನ್ನ ಖರೀದಿಸಲು ಅಕ್ಷಯ ತೃತಿಯಾ ಶ್ರೇಷ್ಠ ದಿನ ಎಂದು ಬಿಂಬಿಸಿ, ಬಸವ ಜಯಂತಿ ಗೌಣಗೊಳಿಸುವ ಪ್ರಯತ್ನವೂ ಸಾಗಿರುವುದು.

ಬಿಜಾಪುರದಲ್ಲಿ ಶಿವ ಬಸವ ಜಯಂತಿ ಎಂದಾಚರಿಸಿ, ಹಿಂದೂ ಹುಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.

ಬೇರೆ ಬೇರೆ ವಿರಾಟ್ ಯಾತ್ರೆಗಳಲ್ಲಿ ಪಾಲ್ಗೊಳ್ಳುವ ಯುವಕರೇ ಈ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಬಸವಣ್ಣನವರ ತತ್ವ ಪಾಲಿಸುವ ಅವರ ಅನುಯಾಯಿಗಳ ಮೇಲೆ ಈ ಮಿಶ್ರಣ ಮೆರವಣಿಗೆ ಏನು ಪ್ರಭಾವ ಬೀರಬಹುದು? ಉತ್ತರ ನಿಮಗೇ ಗೊತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
2 Comments
  • RSS ನವರೇ ಬುದ್ದಿವಂತರೆಂದು ತಿಳಿದಿರಬಹುದು, ನಮಗೂ ಅವರ ಆಟಗಳನ್ನೆಲ್ಲ ತಡೆಯುವ ಬುದ್ದಿವಂತಿಗೆ ಬಸವಣ್ಣನ ದಯೆ ಯಿಂದ ಲಬಿಸಿದೆ. ನಮಗೆ ಅದನ್ನು ನಿಯಂತ್ರಿಸುವ ಯುಕ್ತಿ ,ಶಕ್ತಿ ಹಾಗೂ ದಾಖಲೆಗಳು ಇವೆ. ರಾಷ್ಟ್ರದಲ್ಲಿ ಸಂಪೂರ್ಣ ಇತಿಹಾಸದ ದಾಖಲೆಗಳು ಇರುವ ಧರ್ಮ ಲಿಂಗಾಯತ ಧರ್ಮ.
    ಮುಂದಿನ ದಿನಗಳಲ್ಲಿ ಬಸವಧರ್ಮ ಅಂದರೆ ಲಿಂಗಾಯತ ಧರ್ಮ ಮಾತ್ರ ಮುಂದುವರೆಯುವುದು. ಸದ್ಯದಲ್ಲೇ ನಾವು ಸಹ ನಮ್ಮ ಆಟ ಶುರುಮಾಡಿ ಲಿಂಗಾಯತ ಅಂದರೇನು ಎನ್ನುವುದನ್ನು ಪರಿಚಯಿಸುತ್ತೇವೆ.

  • ಶಂಕರಾಚಾರ್ಯ, ಮದ್ವಚಾರ್ಯ, ರಾಮನುಜಾಚಾರ್ಯ, ವಿದ್ಯಾರಣ್ಯ, ವಿಶ್ವೇಶ್ವರ ತೀರ್ಥ, ಇವರೆಲ್ಲಾ ಇಷ್ಟಲಿಂಗ ಪೂಜೆ ಮಾಡುತಿದ್ದರು. ಇವರೆಲ್ಲಾ ಕಾಲ್ಪನಿಕ ಪುರುಷ 21 ಲಕ್ಷ ವರುಷಗಳ ಹಿಂದೆ ಹುಟ್ಟಿದ್ದ ರೇಣುಕಾಚಾರ್ಯನ ಪರಂಪರೆಯ ಶಿಷ್ಯರು. ಆಗಾಗ ಇದ್ದ ಜಗದ್ಗುರುಗಳು ಇವರಿಗೆ ದೀಕ್ಷೆ ಕೊಟ್ಟಿದ್ದರು. ಅಂತ ಸುಳ್ಳು ಸುದ್ದಿ ಹರಿಯ ಬಿಡಿರಿ.

    ಪಂಚ ಪಿಂಡಗಳಿಗೂ ಖುಷಿ ಆಗುತ್ತದೆ. ಅವರೆ ಪ್ರಚಾರ ಮಾಡುತ್ತಾರೆ. RSS ಗೂ ಗೊತ್ತಾಗುತ್ತದೆ. ಅವರ ಎಲ್ಲ ಅಯೋಗ್ಯ ಕೆಲಸಗಳಿಗೆ ನಾವೇ ಯಾಕೆ ಉತ್ತರ ಕೊಡುತ್ತಾ ಸಮಯ ಹಾಳು ಮಾಡಬೇಕು?

Leave a Reply

Your email address will not be published. Required fields are marked *