ಬೆಳಗಾವಿ
ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಗುರುಬಸವ ಬಳಗ,ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಸಹಯೋಗದಲ್ಲಿ ರವಿವಾರದಂದು ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಕಾರ್ಯಕ್ರಮ ನೆರವೇರಿತು. 10ನೆಯ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಇದಾಗಿದ್ದು, ಶ್ರೀ ನಿಜಗುಣ ಶಿವಯೋಗಿಗಳ ಮಠದಲ್ಲಿ ಆಯೋಜಿಸಲಾಗಿತ್ತು.

ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು ಶರಣರಾದ ಮಹಾಂತೇಶ ತೋರಣಗಟ್ಟಿ, ಜಿಲ್ಲಾ ಸಂಚಾಲಕರು ಸಂಚಾರಿ ಗುರುಬಸವ ಬಳಗ, ಬೆಳಗಾವಿ ಇವರು ನೆರವೇರಿಸಿಕೊಟ್ಟರು. ಶರಣರಾದ ಬಿ.ಜಿ.ವಾಲಿ ಇಟಗಿ, ಚಂದ್ರಶೇಖರ ಹುಬ್ಬಳ್ಳಿ ಅವರು ಲಿಂಗಾಂಗ ಯೋಗದ ಬಗ್ಗೆ ಅನುಭಾವ ನೀಡಿದರು. ಹೊಸದಾಗಿ ಐದು ಜನ ಇಷ್ಟಲಿಂಗದೀಕ್ಷೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ಬಿ.ಜಿ. ವಾಲಿಇಟಗಿ, ಬಾಬುಗೌಡ ಪಾಟೀಲ, ಎನ್. ಪಿ. ಉಪ್ಪಿನ, ಮಹಾಂತೇಶ ತೋರಣಗಟ್ಟಿ, ಆನಂದ ಕೊಂಡಗುರಿ, ಪ್ರವೀಣ ರೊಟ್ಟಿ, ಸಿ.ಎಂ. ಹುಬ್ಬಳ್ಳಿ, ದಯಾನಂದ ಹಂಚಿನಮನಿ, ನಾಗನಗೌಡ ಹಾದಿಮನಿ, ರಮೇಶ ತಿಗಡಿ, ಬಸನಗೌಡ ಹಾದಿಮನಿ ಹಾಗೂ ಗುರುಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭೆಯ ಸದಸ್ಯರು ಉಪಸ್ಥಿತರಿದ್ದರು.