ಬೆಳಗಾವಿ
ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಗುರುಬಸವ ಬಳಗ, ತಾಲೂಕು ಜಾಗತಿಕ ಲಿಂಗಾಯತ ಮಹಾಸಭೆ ಇವರ ಸಹಯೋಗದಲ್ಲಿ ರವಿವಾರದಂದು ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯಿತು.

ಇದು 14ನೆಯ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮವಾಗಿದ್ದು, ಶ್ರೀ ನಿಜಗುಣ ಶಿವಯೋಗಿಗಳ ಶ್ರೀ ಮಠದಲ್ಲಿ ಆಯೋಜಿಸಲಾಗಿತ್ತು.
ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು ಗುರುಬಸವ ಬಳಗದ ಸಂಚಾಲಕರಾದ ಶರಣ ಮಹಾಂತೇಶ ತೋರಣಗಟ್ಟಿ ಇವರು ನೆರವೇರಿಸಿಕೊಟ್ಟರು. ಶರಣರಾದ ಬಿ.ಜಿ. ವಾಲಿಇಟಗಿ ಹಾಗೂ ಚಂದ್ರಶೇಖರ ಹುಬ್ಬಳ್ಳಿ ಅವರು ಲಿಂಗಾಂಗ ಯೋಗದ ಬಗ್ಗೆ ಅನುಭಾವ ನೀಡಿದರು.

ಇದೇ ಸಂದರ್ಭದಲ್ಲಿ ಶರಣೆ ರಶ್ಮಿ ಬಸವರಾಜ ಇಟಗಿ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 91% ಪಲಿತಾಂಶ ಪಡೆದುಕೊಂಡಿದ್ದಕ್ಕಾಗಿ ಬಳಗದ ವತಿಯಿಂದ ಸತ್ಕರಿಸಲಾಯಿತು.
ಬಾಬುಗೌಡ ಪಾಟೀಲ, ಎನ್.ಪಿ. ಉಪ್ಪಿನ, ಮಹಾಂತೇಶ ತೋರಣಗಟ್ಟಿ, ಆನಂದ ಕೊಂಡಗುರಿ, ಪ್ರವೀಣ ರೊಟ್ಟಿ, ಸಿ.ಎಂ. ಹುಬ್ಬಳ್ಳಿ, ದಯಾನಂದ ಹಂಚಿನಮನಿ, ಅಶೋಕ ಪಾಶ್ಚಾಪುರ, ಗೌಡಪ್ಪ ಹಾದಿಮನಿ, ಶ್ರೀಕಾಂತ ಪಡಗಲ್, ಬಸನಗೌಡ ಹಾದಿಮನಿ ಹಾಗೂ ಗುರುಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭೆಯ ಸದಸ್ಯರು ಉಪಸ್ಥಿತರಿದ್ದರು.