ಇಂಡಿ
ತಾಲೂಕಿನ ರೋಡಗಿಯ ಶಿವಲಿಂಗೇಶ್ವರ ಜಾತ್ರೆ ನಿಮಿತ್ತ ಶಿವಲಿಂಗೇಶ್ವರ ವಿರಕ್ತಮಠದ ಪರಿಸರದಲ್ಲಿ ಉಚಿತ ಸಾಮೂಹಿಕ ವಿವಾಹ, ಪುರಾಣ ಮಂಗಲ ಮತ್ತು ಆಯ್ದ ವಚನಗಳಿಗೆ ಭಾವಾರ್ಥ ಬರೆಯುವ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ನಡೆಯಿತು.
ಸರಕಾರಿ ಪ್ರಥಮ ದರ್ಜೆ ಗುತ್ತಿಗೆದಾರ ಪರಮಾನಂದ-ಇಂದುಮತಿ ಅಲಗೊಂಡಾ ಪಾಟೀಲರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಳೆದ ತಿಂಗಳುಗಳ ಹಿಂದೆ ರಾಜ್ಯಮಟ್ಟದ ಆಯ್ದ ವಚನಗಳಿಗೆ ಭಾವಾರ್ಥ ಬರೆಯುವ ಸ್ಪರ್ಧೆ ತಗೆದು ಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ೧೪೦ ಜನ ಭಾಗಿಯಾಗಿದ್ದರು. ಆ ಪೈಕಿ ವಿಜೇತರಾದ ಒಟ್ಟು ೨೩ ಜನ ಸ್ಪರ್ಧಾಳುಗಳಿಗೆ ಮಾನ್ಯರು ನಗದು ಬಹುಮಾನ, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಿದರು.
ನಂತರ ೬ ಜೋಡಿಗಳ ಸಾಮೂಹಿಕ ಮದುವೆ ಸಮಾರಂಭ ನಡೆಯಿತು. ಇದೇ ಸಂದರ್ಭದಲ್ಲಿ ಶಿವಲಿಂಗೇಶ್ವರ ಮಂಗಲ ಭವನವನ್ನು ಶಾಸಕರು ಉದ್ಘಾಟಿಸಿದರು. ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ ಪಡೆದ ಸಮರ್ಥಗೌಡ ಪಾಟೀಲಗೆ ಗೌರವಿಸಲಾಯಿತು.

ಬಹುಮಾನ ಪಡೆದವರಿವರು
ಪ್ರಥಮ ಬಹುಮಾನ ೫೦ ಸಾವಿರ ರೂ. ಹಂಚಿಕೊಂಡವರು. ವಿಜಯಪುರದ ಮಹಾದೇವಿ ಪಾಟೀಲ, ವಾಯ್.ಜಿ ಬಿರಾದಾರ ಮತ್ತು ಸುಕನ್ಯಾ ಕಲ್ಲೂರಕರ, ಸುಮಾ ರಾಜೇಶ ದಾವಣಗೆರೆ.
ದ್ವಿತಿಯ ಬಹುಮಾನ ೨೫ ಸಾವಿರ ರೂ. ಹಂಚಿಕೊಂಡವರು. ಬೀದರನ ಗುರುಲಿಂಗಪ್ಪ ಟೊಣಪೆ, ವಿಜಯಪುರದ ಕವಿತಾ ತೋಟದ, ಶಿವಮೊಗ್ಗಾದ ಶ್ವೇತಾ ಸಂದೀಪ.
ತೃತೀಯ ಬಹುಮಾನ ೧೦ ಸಾವಿರ ರೂ. ಹಂಚಿಕೊಂಡವರು. ಧಾರವಾಡದ ಶಾರದಾ ಪಾಟೀಲ, ಶಿವಮೊಗ್ಗಾದ ನಾಗರಾಜ ಜಿ.ಎಮ್. ಬೆಳಗಾವಿಯ ಪರಪ್ಪ ರೊಟ್ಟಿ, ಹಾವೇರಿಯ ಶಿಲ್ಪಾ ಕೆ.ಎಮ್, ಚಾಮರಾಜನಗರದ ರಾಧಾ ನಿರಂಜನ, ವಿಜಯಪುರದ ನವ್ಯಾ ಕತ್ತಿ.
ಸಮಾಧಾನಕರ ಬಹುಮಾನ ೫ ಸಾವಿರ ರೂ. ಹಂಚಿಕೊಂಡವರು. ಬೆಂಗಳೂರಿನ ಸವಿತಾ ಬಂಡಾರಕವಠೆ, ವಿಜಯಪುರದ ಮಲ್ಲಿಕಾರ್ಜುನ ಗುಡಗುಂಟಿ, ಮಲ್ಲಿಕಾರ್ಜುನ ತಾವರಖೇಡ, ಶಾರದಾ ಕೊಪ್ಪಾ, ಸುಮಿತ್ರಾ ಗಾಜರೆ, ನಾಗರಾಜ ಬಂಡಿ, ಪಾರ್ವತಿ ಸೊನ್ನದ, ಉ.ಕನ್ನಡದ ವನಿತಾ ಹೆಗಡೆ ಮತ್ತು ಸೊಲ್ಲಾಪುರದ ಶಿವಾನಂದ ಗೋಗಾವೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇಂಡಿ ಶಾಸಕ ಯಶ್ವಂತಗೌಡ ಪಾಟೀಲ ತಾವು ಇಂಡಿಯನ್ನು ಅಭಿವೃದ್ಧಿ ದೃಷ್ಟಿಯಿಂದ ಮಾದರಿ ತಾಲೂಕು ಮಾಡುವ ಪ್ರಯತ್ನ ಮಾಡುತ್ತಿದ್ದು ಜಿಲ್ಲೆಯ ಅಭಿವೃದ್ಧಿಕಾರ್ಯಗಳು ತಾಲೂಕಿನಲ್ಲಿ ನಡೆಯುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಅಭಿನವ ಶಿವಲಿಂಗ ಶ್ರೀಗಳು ರೋಡಗಿ, ಖೇಡಗಿಯ ಶಿವಬಸವರಾಜೇಂದ್ರ ಶ್ರೀಗಳು, ಅಭಿನವ ಪುಂಡಲೀಕ ಶ್ರೀಗಳು, ಅಭಿನವ ಮುರುಘರಾಜೇಂಧ್ರ ಶ್ರೀಗಳು ಶಿರಶ್ಯಾಡ, ಆನಂದ ಶಾಸ್ತ್ರೀ, ಯಶ್ವಂತಗೌಡ ಪಾಟೀಲ, ನಿಜಾಮ ಮುಲ್ಲಾ, ನಾನಾಗೌಡ ಪಾಟೀಲ, ಪ್ರಶಾಂತ ಅಲಗೊಂಡಾ, ರಾಹುಲ ಅಲಗೊಂಡ, ಶಂಕರಗೌಡ ಬಂಡಿ, ಶಂಕರಗೌಡ ಪಾಟೀಲ ಸೇರಿದಂತೆ ಅನ್ಯರು ಪಾಲ್ಗೊಂಡಿದ್ದರು.
ಸುದ್ದಿ ಚೆನ್ನಾಗಿ ಬರೆದಿದ್ದೀರಿ. ಸಮಗ್ರ ಮಾಹಿತಿ ಅದರಲ್ಲಿ ಬಂದಿದೆ.ಅಭಿನಂದನೆಗಳು ಶಿವಾನಂದ.