ಸಾಣೇಹಳ್ಳಿ:
ಇಲ್ಲಿನ ತರಳಬಾಳು ಜಗದ್ಗುರು ಶಾಖಾಮಠದಲ್ಲಿ ನವಂಬರ್ 2 ರಿಂದ 7 ರವರೆಗೆ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಾಣೇಹಳ್ಳಿಯಲ್ಲಿ ಇದೇ ದಿನಗಳಂದು ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಈ ವರ್ಷ ಪ್ರತಿದಿನ ಬೆಳಗ್ಗೆ 6.30ಕ್ಕೆ ದೀಕ್ಷಾ ಸಂಸ್ಕಾರ ಮತ್ತು ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯುವುದು.
ಧರ್ಮಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಲು ತಮ್ಮ ಹೆಸರನ್ನು ಮೊದಲೇ ನೋಂದಾಯಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮರುಳಸಿದ್ದಯ್ಯ ಟಿ.ಎಂ. ಮೊ: 96631 77254 ಅವರನ್ನು ಸಂಪರ್ಕಿಸಬಹುದು.

