ಬಸವಗೀತಾ ಮಾತಾಜಿಯಿಂದ ಜಹಿರಾಬಾದಿನಲ್ಲಿ ‘ಬಸವಧರ್ಮ’ ಪ್ರವಚನ

ಬಸವ ಮೀಡಿಯಾ
ಬಸವ ಮೀಡಿಯಾ

ಜಹಿರಾಬಾದ್ (ತೆಲಂಗಾಣ)

ಸಂಗಾರೆಡ್ಡಿ ಜಿಲ್ಲೆಯ ಜಹಿರಾಬಾದ ನಗರದಲ್ಲಿ ಶರಣ ಮಾಸದ ಪ್ರಯುಕ್ತ ರಾಷ್ಟ್ರೀಯ ಬಸವ ದಳವು ತಿಂಗಳು ಕಾಲ “ಬಸವಧರ್ಮ” ಪ್ರವಚನವನ್ನು ಆಯೋಜಿಸಿದೆ.

ಜುಲೈ 24ರಿಂದ ಆರಂಭವಾಗುವ ಪ್ರವಚನ ದಿನಾಂಕ ಆಗಸ್ಟ್ 23ರವರೆಗೆ ಪ್ರತಿದಿನ ಸಂಜೆ 6-30 ರಿಂದ 8-30ರವರೆಗೆ ದತ್ತಗಿರಿ ಕಾಲೋನಿ, ಬಸವಮಂಟಪದಲ್ಲಿ ನಡೆಯುತ್ತದೆ.

ಬಸವಾದಿ ಶರಣರ ಬದುಕು ಬರಹಗಳ ಕುರಿತು ನಾಗನೂರ ಗುರುಬಸವ ಮಠದ ಪೂಜ್ಯ ಬಸವಗೀತಾ ತಾಯಿಯವರು ಪ್ರವಚನವನ್ನು ಮಾಡಲಿದ್ದಾರೆ.

ಸ್ಥಳೀಯ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಎಲ್ಲರನ್ನೂ ಪ್ರವಚನಕ್ಕೆ ಸ್ವಾಗತ ಕೋರಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *