ಕದಳಿ ಕಾರ್ಯಕ್ರಮದಲ್ಲಿ ಶರಣರ ಪರಿಸರ ಪ್ರಜ್ಞೆ ಮೇಲೆ ಉಪನ್ಯಾಸ
ದಾವಣಗೆರೆ
ತಾಲೂಕು ಕದಳಿ ಮಹಿಳಾ ವೇದಿಕೆಯ 168ನೇ ಕಮ್ಮಟದಲ್ಲಿ ಶರಣ ಕುರುಬ ಗೊಲ್ಲಾಳೇಶ್ವರ, ಅಂಬಿಗರ ಚೌಡಯ್ಯ ಸಂಸ್ಮರಣೆ, ಪರಿಸರ ದಿನಾಚರಣೆ ಹಾಗೂ ದತ್ತಿ ಕಾರ್ಯಕ್ರಮ ನಡೆಸಲಾಯಿತು.
ಶರಣೆ ನಿರ್ಮಲ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಶ್ಯಾಮನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು.

ಸಾಸಲು ಶ್ರೀಮತಿ ಭಾರತಿ ಹೆಚ್. ಬಸವಲಿಂಗಪ್ಪ ಹಾಗೂ ಲಿಂ. ಸಿದ್ದಮ್ಮ ಮತ್ತು ಲಿಂ. ಚನ್ನಬಸಪ್ಪ ದತ್ತಿ ಇದ್ದು, ಶರಣೆ ಶಕುಂತಲಮ್ಮ ಹೆಚ್. ಬಿ. ಕುಮಾರ್ ಮತ್ತು ಶರಣೆ ರಾಜೇಶ್ವರಿ ಮತ್ತು ಶರಣ ಎ. ಸಿ. ಜಯಣ್ಣ ಇವರು ದತ್ತಿ ದಾನಿಗಳಾಗಿದ್ದರು.
ದತ್ತಿ ಅನುಭಾವಿಗಳಾಗಿ ಆಗಮಿಸಿದ್ದ ಜಿ.ಕೆ. ಕುಲಕರ್ಣಿಯವರು, ಶರಣರ ಕಾಲದಲ್ಲಿ ‘ಪರಿಸರ ಪ್ರಜ್ಞೆ’ ಹೇಗೆ ಇತ್ತು ಎಂಬುದನ್ನು ಕೆಲವು ವಚನಗಳ ಉದಾಹರಣೆ ಕೊಟ್ಟು, ಆಗಿನ ಪರಿಸರ ಶುಧ್ಧತೆಯನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದಲ್ಲದೆ ಮಕ್ಕಳು ವಚನಗಳನ್ನು ಕಲಿತು, ಅರ್ಥೈಸಿಕೊಂಡು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಸಾಗಿಸಬೇಕು ಎಂದು ತಿಳಿ ಹೇಳಿದರು. ಹಾಗೆಯೇ ಪ್ರಾಣಿ ಪಕ್ಷಿ, ಆರೋಗ್ಯ, ಪರಿಸರ ಮಾಲಿನ್ಯದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿದರು.

ಶಾಲೆಯ ಮುಖ್ಯೋಪಧ್ಯಾಯರಾದ ಶರಣ ಬಸವರಾಜಪ್ಪನವರು, ಮಕ್ಕಳಿಗೆ ಹಿತನುಡಿಗಳನ್ನು ನುಡಿದು ಪರಿಸರ ಮತ್ತು ಓಝೋನ್ ಪದರಿನ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣೆ ನಿರ್ಮಲ ಶಿವಕುಮಾರ್ ಅವರು ಶರಣರ ಜೀವನದ ಘಟನೆಗಳನ್ನು ತಿಳಿಸಿ ಮಕ್ಕಳಿಗೆ ವಚನಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಪ್ರೇರಣೆ ನೀಡಿದರು.
ದತ್ತಿ ದಾನಿಗಳಾದ ಶರಣೆ ರಾಜೇಶ್ವರಿ ಎ.ಸಿ. ಜಯಣ್ಣನವರು ಉಪಸ್ಥಿತರಿದ್ದರು. ಕದಳಿ ಮಹಿಳಾ ವೇದಿಕೆಯ ರಾಜ್ಯ ಉಪಸಂಚಾಲಕರಾಗಿರುವ ಶರಣೆ ಪ್ರಮೀಳ ನಟರಾಜ್ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಪರಮೇಶ್ವರಪ್ಪ ವೇದಿಕೆಯ ಕಾರ್ಯ ದಕ್ಷತೆಯ ಬಗ್ಗೆ ಮಾತಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷರಾದ ಶರಣೆ ಮಮತಾ ನಾಗರಾಜ್ ರವರು ಪರಿಸರದ ಬಗ್ಗೆ ಮಾತನಾಡಿ ಮಕ್ಕಳಿಗೆ ಶಾಲೆಯ ಒಳಗೂ, ಹೊರಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ಮತ್ತು ಶಾಲೆಯ ಆವರಣದಲ್ಲಿರುವ ಗಿಡಗಳನ್ನು ಹೇಗೆ ಸಂರಕ್ಷಿಸಬೇಕು ಎನ್ನುವುದನ್ನು ತಿಳಿಸಿದರು. ಹಾಗೂ ಸಸಿಗಳನ್ನು ವಿತರಿಸಿದರು.
ಕದಳಿ ಮಹಿಳಾ ವೇದಿಕೆಯ ನಿರ್ದೇಶಕರಾದ ಶರಣೆ ಪಲ್ಲವಿ ಪಾಟೀಲ್ ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದತ್ತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಚನ ಲಿಖಿತ ಸ್ಪರ್ಧೆ ಮತ್ತು ವಚನ ದಾಸೋಹವನ್ನು ಏರ್ಪಡಿಸಲಾಗಿತ್ತು. ಶರಣೆ ಸುಮ ಗುರುಬಸವರಾಜ್ ರವರು ವಚನದಾಸೋಹದಲ್ಲಿ ವಿದ್ಯಾರ್ಥಿಗಳಿಗೆ ವಚನಗಳನ್ನು ಹೇಳಿಕೊಟ್ಟರು.
ಚಂದ್ರಿಕಾ ಮಂಜುನಾಥ್ ರವರು ಎಲ್ಲರನ್ನು ಸ್ವಾಗತಿಸಿದರು, ದತ್ತಿ ಮತ್ತು ದತ್ತಿದಾನಿಗಳ ಪರಿಚಯವನ್ನು ಲಕ್ಷ್ಮೀ ಮಲ್ಲಿಕಾರ್ಜುನ್ ಮಾಡಿದರು, ವಚನ ಸ್ಫರ್ಧೆಯ ಬಹುಮಾನಗಳ ವಿತರಣೆ ರತ್ನ ರೆಡ್ಡಿ ನಡೆಸಿಕೊಟ್ಟರು, ಕಾರ್ಯಕ್ರಮವನ್ನು ವಿಜಯಲಕ್ಷ್ಮೀ ಬಸವರಾಜ ನಿರೂಪಿಸಿದರು.