ಕಲಬುರಗಿ
ನಗರದ ಹೊರವಲಯದಲ್ಲಿರುವ ಕಪನೂರು ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ವಚನ ಮಂಟಪ ಕಟ್ಟಡ ನಿರ್ಮಾಣದ ಸ್ಥಳ ಪರಿಶೀಲನೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ನಡೆಸಿದರು.
ಈ ಸಂದರ್ಭದಲ್ಲಿ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ ಅವರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಚನ ಮಂಟಪ ಕೇವಲ ಕಲಿಕೆ ಮತ್ತು ಪ್ರವಚನದ ಸ್ಥಳವಾಗಿರದೆ, ಕರ್ನಾಟಕದ ಶ್ರೀಮಂತ ಆಧ್ಯಾತ್ಮಿಕ ಮತ್ತು ತಾತ್ವಿಕ ಪರಂಪರೆಯ ಸಂಕೇತವಾಗಿರಲಿದೆ ಎಂದು ಖರ್ಗೆ ಹೇಳಿದರು.
ಇತ್ತೀಚೆಗೆ ಉದ್ದೇಶಿತ ಕಟ್ಟಡದ ಮೂರು ವಿನ್ಯಾಸಗಳನ್ನು ಖರ್ಗೆ ಹಂಚಿಕೊಂಡಿದ್ದರು.
