ಕೇರಳದ ತ್ರಿಶೂರ್‌ನಲ್ಲಿ ಬಸವ ಜಯಂತಿ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ತ್ರಿಶೂರ್‌

ಕೇರಳ ರಾಜ್ಯದ ತ್ರಿಶೂರ್‌ನಲ್ಲಿ 893ನೇ ಬಸವ ಜಯಂತಿ ಕಾರ್ಯಕ್ರಮವನ್ನು ಭಾನುವಾರ ವೀರಶೈವ ಲಿಂಗಾಯತ ಮಹಾಸಭಾ ಕೇರಳ ಘಟಕ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಕರ್ನಾಟಕದ ಹೊರಗೂ, ಕೇರಳದಲ್ಲಿ ಬಸವ ಜಯಂತಿ ಆಚರಣೆ ಸಂತಸದ ವಿಷಯ. ಬಸವಣ್ಣನವರ ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ನಿಜ ಅರ್ಥ ಬರುತ್ತದೆ, ಎಂದು ಹೇಳಿದರು.

ಭೀಮಣ್ಣ ಖಂಡ್ರೆ ಅವರಿಗೆ ಕೇರಳ ಮಹಾಸಭಾ ಘಟಕ ನೀಡಿದ “ಬಸವರತ್ನ” ಪುರಸ್ಕಾರವನ್ನು ಈಶ್ವರ ಖಂಡ್ರೆ ಸ್ವೀಕರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *