ಕೂಡಲಸಂಗಮ
ಈ ವರ್ಷದ ಬಸವ ಜಯಂತಿಯನ್ನು ವಿಶೇಷವಾಗಿ ಆಚರಿಸಲು ಬಸವಣ್ಣನವರ ಐಕ್ಯ ಸ್ಥಳವಾದ ಕೂಡಲಸಂಗಮದಲ್ಲಿ ‘ಸರ್ವ ಧರ್ಮ ಸಂಸತ್ತು’ ಕಾರ್ಯಕ್ರಮ ನಡೆಸಲಾಗುವುದು, ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಸಮಾನತೆ, ಪ್ರಜಾಪ್ರಭುತ್ವ, ವೈಚಾರಿಕತೆ ಮುಂತಾದ ಬಸವಾದಿ ಶರಣರ ಮೌಲ್ಯಗಳನ್ನು ಸಮಾಜದಲ್ಲಿ ಬೆಳೆಸಲು ಬಸವ ಜಯಂತಿಯಂದು ‘ಸರ್ವ ಧರ್ಮ ಸಂಸತ್ತು’ ಕಾರ್ಯಕ್ರಮವನ್ನು ಸರಕಾರದ ವತಿಯಿಂದ ನಡೆಸಲು ಮುಖ್ಯ ಮಂತ್ರಿಗಳು ಸೂಚನೆ ನೀಡಿದ್ದಾರೆಂದು ಕಾಶಪ್ಪನವರ ಹೇಳಿದರು.
ತಾವು ಆಗಲೇ ಕನ್ನಡ ಸಂಸ್ಕೃತಿ ಇಲಾಖೆಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರನ್ನು ಭೇಟಿ ಮಾಡಿದ್ದೂ, ಕಾರ್ಯಕ್ರಮವನ್ನು ರೂಪಿಸಲು ಎಪ್ರಿಲ್ ೪ ರಂದು ಕೂಡಲಸಂಗಮದಲ್ಲಿಯೇ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದರು.
ಜತೆಗೆ ಈ ವರ್ಷದಿಂದ ‘ಬಸವ ವೈಭವ’ ಎಂಬ ಕಾರ್ಯಕ್ರಮವನ್ನೂ ಬಸವ ಜಯಂತಿಯ ದಿನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
“ಎರಡು ದಿನ ನಡೆಯುವ ಈ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ಕೊಡಬೇಕು. ಬಹುದಿನಗಳಿಂದ ಬಸವ ಜಯಂತಿ ಕೂಡಲಸಂಗಮದಲ್ಲಿ ನಡೆಯಬೇಕು ಎಂಬ ಬಸವ ಭಕ್ತರ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ,” ಎಂದು ಹೇಳಿದರು.
ಗುರುವಾರ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕಾರ್ಯಾಲಯದ ಸಭಾಂಗಣದಲ್ಲಿ ಜಾತ್ರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬಸವಣ್ಣನವರು ವೈಭವಕ್ಕೆ ವಿರುದ್ದವಾಗಿದ್ದರು.
ವೈಭವ ಬದಲಿಗೆ ಸುದಾರಣೆ ಜ್ಞಾಪಿಸುವ ಉತ್ತಮ ಪದ ಆಯ್ಕೆ ಮಾಡುವುದು ಸೂಕ್ತ.
ಉತ್ತಮ ಕೆಲಸ, ಅಲ್ಲಿ ವಿಚಾರ ಮಂಥನಾವಾಗಲಿ, ಸಮಾಜಕ್ಕೆ ಮಾನವೀಯತೆ, ದಯೆ , ಕಾಯಕ, ಅಸ್ಮಿತೆಯ ಅರಿವು ಕೊಡುವ ಕೆಲಸವಾಗಲಿ
ಬಸವಾದಿ ಶರಣರ ಮತ್ತು ಅನುಭವ ಮಂಟಪದ ವಿಷಯದಲ್ಲಿ ಇಲ್ಲ ಸಲ್ಲದ್ದನ್ನು ಮಾತನಾಡುವರಿಗೆ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿ
ನುಡಿ ನಡೆ………… “ನುಡಿದಂತೆ ನಡೆಯುವ”ಕಾರ್ಯಕ್ರಮ ವಾಗಲಿ.
Let it be a conference for spreading the values of Basavanna, namely Equality, Liberty and Fraternity. These are values that Dr.B.R.Ambedkar also propagated. Let us prepare a booklet on Equality, Liberty and Fraternity as propounded in vachanas by Basavanna, and other vachanakarxas.
👍It’s a good idea
ಇದೊಂದು ಅರ್ಥಪೂರ್ಣವಾದ ಕೆಲಸವಾಗಬೇಕು. ಜನಮನಗಳಲ್ಲಿ ನೆಲೆಸಿರುವಂತಾಗಬೇಕು. ವಂದನೆಗಳು.