ಲಿಂಗಾಯತ ಚಳುವಳಿ: ಬಸವ ತತ್ವದ ಬಗ್ಗೆ ಒಳ ಜಾಗೃತಿ ಹೆಚ್ಚುತ್ತಿದೆ

ಬಿ. ಚನ್ನಪ್ಪ
ಬಿ. ಚನ್ನಪ್ಪ

ಸುಲಭದಲ್ಲಿ ಮಾನ್ಯತೆ ಸಿಕ್ಕಿದ್ದರೆ ಬಸವ ಸಂಘಟನೆಗಳು ಚುರುಕಾಗುತ್ತಿರಲಿಲ್ಲ, ಜಾಗೃತಿಯೂ ಮೂಡುತ್ತಿರಲಿಲ್ಲ.

ನಂಜನಗೂಡು

2017-18ರಲ್ಲಿ ಒಂಬತ್ತು ತಿಂಗಳುಗಳ ಕಾಲ ನಡೆದ ಲಿಂಗಾಯತ ಧರ್ಮದ ಚಳುವಳಿ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿ, ರಾಷ್ಟ್ರೀಯ, ಅಂತರಾಷ್ಟೀಯ ಮಾಧ್ಯಮಗಳ ಗಮನ ಸೆಳೆದವು.

ಆದರೆ ಇತ್ತೀಚೆಗೆ ರಂಭಾಪುರಿ ಶ್ರೀಗಳು ಈಗ ಲಿಂಗಾಯತ ಧರ್ಮದ ಚಳುವಳಿ ಇತಿಹಾಸಕ್ಕೆ ಸೇರಿ ಹೋಗಿದೆ, ಅದಕೆ ಎಲ್ಲರೂ ಮೊದಲಿನಂತೆಯೇ ವೀರಶೈವ-ಲಿಂಗಾಯತ ಎಂದು ಗುರುತಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

ಲಿಂಗಾಯತ ಚಳುವಳಿ ಸುಂಟರಗಾಳಿಯಂತೆ ಬಂದು ಸುಳಿವಿಲ್ಲದಂತೆ ಮಾಯವಾಯಿತೇ? ಅಥವಾ ನಮ್ಮಲ್ಲಿ ಮಹತ್ತರ ಬದಲಾವಣೆಗಳನ್ನು ತಂದು ಲಿಂಗಾಯತ ಸಮಾಜಕ್ಕೆ ಹೊಸ ದಿಕ್ಕು, ಸ್ವರೂಪ ನೀಡಿತೆ? ಎಂಟು ವರ್ಷಗಳ ನಂತರ ಅದರ ಪ್ರಭಾವವನ್ನು ನಾವು ಇಂದು ಹೇಗೆ ಅರ್ಥೈಸಬೇಕು?

ಈ ಪ್ರಶ್ನೆಗಳ ಮೇಲೆ ನಂಜನಗೂಡು ವಿಶ್ವ ಬಸವ ಸೇನೆಯ ಬಿ ಚನ್ನಪ್ಪಣ್ಣ ಅವರು ತಮ್ಮ ಚಿಂತನೆ ಹಂಚಿಕೊಂಡಿದ್ದಾರೆ.

1) 2017-18ರ ಚಳುವಳಿ ಬಂದ ಹಾಗೆ ಮಾಯವಾಯಿತೇ? ಅಥವಾ ಏನಾದರೂ ದೀರ್ಘಕಾಲೀನ ಬದಲಾವಣೆ ತಂದಿತೆ?

2018ರಲ್ಲಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರಕಿದ್ದರೆ ಅದು ಕೇವಲ ಸವಲತ್ತುಗಳಿಗಾಗಿ ಮಾತ್ರ ಬಳಕೆಯಾಗುತ್ತಿತ್ತು. ಜನಸಾಮಾನ್ಯರಲ್ಲಿ ಈ ಪ್ರಮಾಣದ ಜಾಗೃತಿ ಮೂಡುತ್ತಿರಲಿಲ್ಲ. ಎಲ್ಲರೂ ತಮ್ಮ ಹಿಂದಿನ ಜೀವನಶೈಲಿ, ಪೂಜೆ ಪುನಸ್ಕಾರಗಳಲ್ಲಿಯೇ ಮುಳುಗಿ ಹೋಗುತ್ತಿದ್ದರು.

ಆದರೆ ಮಾನ್ಯತೆ ದೊರೆಯದ ಕಾರಣ, ಎಲ್ಲಾ ಬಸವ ಸಂಘಟನೆಗಳು ಸ್ವತಂತ್ರ ಧರ್ಮ ಬೇಡಿಕೆಗೆ ದುಡಿಯಲಾರಂಭಿಸಿದವು. ಅವುಗಳು ಇಂದು ಎಲ್ಲಾ ವೇದಿಕೆಗಳಲ್ಲಿಯೂ ಈ ವಿಷಯ ಚರ್ಚಿಸುತ್ತಿವೆ, ನಿರಂತರ ಹೋರಾಟ ನಡೆಸಿಕೊಂಡು ಬಂದಿವೆ.


ಬಸವಾದಿ ಶರಣರ ಹೆಸರಿನಲ್ಲಿ ಹೆಚ್ಚು ಹೆಚ್ಚು ಸಂಘ-ಸಂಸ್ಥೆಗಳು ಹುಟ್ಟುತ್ತಿವೆ.

ಬಸವಾದಿ ಶರಣರ ಹೆಸರಿನಲ್ಲಿ ಹೆಚ್ಚು ಹೆಚ್ಚು ಸಂಘ-ಸಂಸ್ಥೆಗಳು ಹುಟ್ಟುತ್ತಿವೆ. ಧರ್ಮ ಪ್ರಚಾರದ ಕೆಲಸವೂ ಚುರುಕಾಗಿದೆ.

ಇದರಿಂದ ಜನರಲ್ಲಿ ಬಸವ ತತ್ವದ ವಿಚಾರಧಾರೆಗಳು ಮುನ್ನೆಲೆಗೆ ಬಂದು ಒಳ ಜಾಗೃತಿ ಹೆಚ್ಚುತ್ತಿದೆ. ಈ ಚರ್ಚೆ ಕಾನೂನು ಹಾಗೂ ಐತಿಹಾಸಿಕ ದಾಖಲೆಗಳ ಮಟ್ಟದಲ್ಲಿ ನಡೆಯುತ್ತಿದೆ. ಜನಸಾಮಾನ್ಯರಲ್ಲಿ ಲಿಂಗಾಯತ ಧರ್ಮದ ವೈಶಿಷ್ಟ್ಯತೆ, ಇತಿಹಾಸ, ಸಂಪ್ರದಾಯಗಳ ಬಗ್ಗೆ ಆಸಕ್ತಿ ಮೂಡುತ್ತಿದೆ. ಎಲ್ಲರ ಮನಸ್ಸಿನಲ್ಲಿ ಬಸವಣ್ಣ ನೆಲೆಗೊಂಡಿದ್ದಾರೆ.

ಲಿಂಗಾಯತ ಧರ್ಮದ ಹೋರಾಟ ಬಂದ ಹಾಗೆ ಮಾಯವಾಗಿಲ್ಲ. ಜನರಲ್ಲಿ ಜಾಗೃತಿ ಮೂಡಿಸಲು ಸಫಲವಾಗಿದೆ. ಸಮಾಜದಲ್ಲಿ ದೊಡ್ಡ ದೀರ್ಘಕಾಲೀನ ಬದಲಾವಣೆಗಳನ್ನು ತಂದಿದೆ.

ಇದನ್ನು ಗಮನಿಸುತ್ತಿರುವ ನಮ್ಮ ವಿರೋಧಿಗಳಲ್ಲಿ ದಿಗ್ಬ್ರಮೆ ಮೂಡಿದೆ. ಅದಕ್ಕೆ ಅವರು ಲಿಂಗಾಯತ ಧರ್ಮದ ವಿಚಾರಗಳನ್ನ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ.

2) 2017-18ರ ಚಳುವಳಿ ತಂದ ದೀರ್ಘಕಾಲೀನ ಬದಲಾವಣೆಗಳೇನು?

ಇದರ ಬಗ್ಗೆ ಒಂದು ದೊಡ್ಡ ಪಟ್ಟಿಯನ್ನೇ ಮಾಡಬಹುದು. ಮುಖ್ಯವಾಗಿ, ಸಮಾಜದಲ್ಲಿ ಬಸವ ತತ್ವದ ಬಗ್ಗೆ ಒಳ ಜಾಗೃತಿ ಹೆಚ್ಚುತ್ತಿದೆ.

ಮೊದಲು ಪ್ರಮುಖ ಬಸವಾದಿ ಶರಣರ ಒಂದೆರಡು ವಚನಗಳನ್ನ ಮಾತ್ರ ಸಾರ್ವತ್ರಿಕವಾಗಿ ಹೇಳಲಾಗುತ್ತಿತ್ತು. ಇಂದು ಹಲವಾರು ಶರಣರ ವಚನಗಳು ಮುನ್ನೆಲ್ಲೆಗೆ ಬರುತ್ತಿವೆ. ವಚನಗಳಲ್ಲಿರುವ ಭಾವಾರ್ಥ, ಗೂಡಾರ್ಥಗಳೂ ಜನರಲ್ಲಿ ಚರ್ಚೆಯಾಗುತ್ತಿವೆ.

ಈಗ ಗ್ರಾಮ ಗ್ರಾಮಗಳಲ್ಲಿ, ಸಣ್ಣ ಮಕ್ಕಳಲ್ಲೂ ವಚನ ಕಲಿಕೆ ಪ್ರಾರಂಭಗೊಂಡಿದೆ.

ಎಲ್ಲಾ ವರ್ಗ, ಧರ್ಮದ ಜನರಲ್ಲಿ ಬಸವಣ್ಣನವರ ಬಗ್ಗೆ ಹಾಗೂ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಮೂಡುತ್ತಿದೆ. ಜನಸಾಮಾನ್ಯರೇ ಧರ್ಮ ಪ್ರಚಾರಕ್ಕೆ ಇಳಿದಿದ್ದಾರೆ.

ಜನಸಾಮಾನ್ಯರೇ ಧರ್ಮ ಪ್ರಚಾರಕ್ಕೆ ಇಳಿದಿದ್ದಾರೆ.

ಇಷ್ಟಲಿಂಗ ಯೋಗದ ಪ್ರಚಾರ ಮತ್ತು ಪ್ರಸಾರ ಎರಡೂ ಹೆಚ್ಚಿದೆ. ಯುವಕರು ಶಿವಯೋಗ ಕಲಿಯಲು ಮುಂದೆ ಬರುತ್ತಿದ್ದರೆ.

2017-18 ನಂತರ ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿಗಳಲ್ಲಿ ಬಸವಾದಿ ಶರಣರ ವಿಚಾರಧಾರೆಗಳನ್ನು ಮನಮನೆಯ ಕಾರ್ಯಕ್ರಮ ಅರಿವು ಮೂಡಿಸಲಾಗುತ್ತಿದೆ.

ವರ್ಷವಿಡೀ ವಿವಿಧ ಶರಣರ ಜಯಂತಿಗಳು ನಡೆಯುತ್ತಿವೆ.

ಗುರುಪ್ರವೇಶ, ವಚನ ಕಲ್ಯಾಣಗಳಂತಹ ನಿಜಾಚರಣೆ ಕಾರ್ಯಕ್ರಮಗಳು ಜನಪ್ರಿಯವಾಗುತ್ತಿವೆ.

ಕಾರ್ಯಕ್ರಮಗಳು ಸ್ವರೂಪ ಬದಲಾಗುತ್ತಿದೆ, ವಚನಗಳಿಂದ ಪ್ರಾರಂಭವಾಗುತ್ತಿವೆ. ಕಾರ್ಯಕ್ರಮಗಳಲ್ಲಿ ವಚನ ಸಂಗೀತವನ್ನು ಏರ್ಪಡಿಸಲಾಗುತ್ತಿದೆ.

ಅನೇಕ ಕಡೆ ರಸ್ತೆಗಳಿಗೆ, ಉದ್ಯಾನವನಗಳಿಗೆ ಶರಣರ ಹೆಸರು ಇಡಲಾಗುತ್ತಿದೆ.

ಮೊದಲು ಕೆಲವು ಮಠಗಳಲ್ಲಿ ಬಸವಣ್ಣನವರ ಶರಣರ ಭಾವಚಿತ್ರಗಳನ್ನೇ ಇಡುತ್ತಿರಲಿಲ್ಲ. ಆ ಪರಿಸ್ಥಿತಿ ಈಗ ಬದಲಾಗುತ್ತಿದೆ.

ಮೊದಲು ಕೆಲವು ಮಠಗಳಲ್ಲಿ ಬಸವಣ್ಣನವರ ಶರಣರ ಭಾವಚಿತ್ರಗಳನ್ನೇ ಇಡುತ್ತಿರಲಿಲ್ಲ.

ವಚನ ಕಂಠಪಾಠಗಳಂತಹ ಸ್ಪರ್ಧೆಗಳಿಗೆ ಮೊದಲಿಗಿಂತ ಹೆಚ್ಚು ಮಕ್ಕಳು, ಮಹಿಳೆಯರು ಭಾಗವಹಿಸುತ್ತಿದ್ದಾರೆ.

ಬಸವ ತತ್ವ ಅಷ್ಟಾಗಿ ಗೋಚರಿಸದಿದ್ದ ಮೈಸೂರು, ಚಾಮರಾಜನಗರಗಳಂತಹ ಜಿಲ್ಲೆಗಳಲ್ಲಿಯೂ ಈಗ ಹಲವಾರು ಸ್ವಾಮೀಜಿಗಳು ಬಸವ ತತ್ವ ಪ್ರಚಾರ ಮಾಡುತ್ತಿದ್ದಾರೆ.

ಬಸವ ತತ್ವ ಪ್ರಸಾರ ಮಾಡುವ ಮಾಧ್ಯಮಗಳು ಬೆಳೆಯುತ್ತಿವೆ.

ಸರಕಾರದ ಬೆಂಬಲ ಬೆಳೆಯುತ್ತಿದೆ. ಶರಣ ಸಮಾಜಕ್ಕೆ ಸಾಂಸ್ಥಿಕ ತಳಹದಿ ನೀಡುವ ಅನುಭವ ಮಂಟಪದ ನಿರ್ಮಾಣದ ಕೆಲಸಗಳೂ ನಡೆಯುತ್ತಿವೆ.

ಈ ಬೆಳವಣಿಗೆಗಳಿಂದ ನಮ್ಮಲ್ಲಿ ವೈದಿಕತೆಗೆ ಅಂಟಿಕೊಂಡಿರುವ ಮಠಗಳಿಗೆ ಭಕ್ತರು ಕಡಿಮೆಯಾಗುವ ಆತಂಕ ಸೃಷ್ಟಿಯಾಗುತ್ತಿದೆ. ಬಸವ ತತ್ವ ಪ್ರಚಾರವನ್ನು ತಡೆಯಲು ಇವರಿಂದ ಯಾವ ಕಾರಣಕ್ಕೂ ಸಾಧ್ಯವಾಗದು. ಅದಕ್ಕೆ ಜನರಲ್ಲಿ ಗೊಂದಲ ಸೃಷ್ಟಿ ಮಾಡಲು ಹೊರಟಿದ್ದಾರೆ.

ವೈದಿಕತೆಗೆ ಅಂಟಿಕೊಂಡಿರುವ ಮಠಗಳಿಗೆ ಭಕ್ತರು ಕಡಿಮೆಯಾಗುವ ಆತಂಕ ಸೃಷ್ಟಿಯಾಗುತ್ತಿದೆ

3) 2017-18 ಲಿಂಗಾಯತ ಧರ್ಮದ ಬೇಡಿಕೆ ಮುಂಚೆ ಹೇಗಿತ್ತು? ಈಗ ಹೇಗಿದೆ?

2017-18ರ ಮುಂಚೆ ಲಿಂಗಾಯತ ಧರ್ಮದ ಹೋರಾಟ ಕೆಲವೇ ಪ್ರಮುಖರಿಗೆ, ಸ್ವಾಮೀಜಿಗಳಿಗೆ ತಿಳಿದಿತ್ತು. ಇಂದು ಜನಸಾಮಾನ್ಯರಿಗೂ ಈ ಬೇಡಿಕೆ ಮುಟ್ಟಿದೆ. ಅರಿವು ಮೂಡುತ್ತಿದೆ, ಬೆಂಬಲ ಬೆಳೆಯುತ್ತಿದೆ.

ಬಸವ ತತ್ವದಲ್ಲಿ ಪ್ರಸ್ತುತ ಜೀವನಕ್ಕೆ ಅನುಕೂಲಕರವಾಗುವಂತಹ ಅಂಶಗಳಿವೆ. ಇದನ್ನು ಅರಿತು ವಚನಗಳನ್ನು ಅಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತವರು ವೈದಿಕತೆಯಿಂದ ದೂರವಾಗಿ ಲಿಂಗಾಯತ ಧರ್ಮದ ಹೋರಾಟಕ್ಕೆ ಬರುತ್ತಿದ್ದರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
2 Comments
  • ಶರಣರ ವಚನಗಳು ಮತ್ತು ಅವರ ಬೆಂಬಲಿಗರು, ಶರಣರ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು, ಕಟ್ಟುವುದರ ಮೂಲಕ ಸುಂದರ ಸಾಹಿತ್ಯ, ಸಮ್ಮೇಳನ ನಡೆಯುವ ಮೂಲಕ ಒಂದು ದೊಡ್ಡ ಪ್ರಮಾಣದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲ ಬಸವಪರ ಸಂಘಟನೆಗಳು ಬೀದಿಗಿಳಿದು ರಾಜ್ಯವನ್ನು ಬಸವಮಯವಹಿಸುತ್ತಿವೆ. ಶರಣರ ವಾಣಿಯೆಂತೆ, ೯೦೦ ವರ್ಷಗಳ ನಂತರ ಮತ್ತೆ ಬರುತ್ತೇವೆಂದು ಸಾರಿದ್ದಾರೆ. ಅದರ ಪ್ರಕಾರ ನಾವು ಇಷ್ಟಲಿಂಗದ ಪೂಜೆ ಸಲ್ಲಿಸಿ, ಅವರ ಆತ್ಮ ಸ್ಥೈರ್ಯ ಮತ್ತು ಅವರ ಬರುವಿಗಾಗಿ ಕಾಯುತ್ತೇವೆ. ತಮ್ಮ ವಿಚಾರ ಧಾರೆಗೆ ತುಂಬುವ ಹೃದಯದ ಧನ್ಯವಾದಗಳು. ಶರಣು ಶರಣಾರ್ಥಿ.

  • B. ಚನ್ನಪ್ಪ ನವರು 2017-18 ರ ಲಿಂಗಾಯತ ಹೋರಾಟದ ನಂತರದಲ್ಲಿ ಆದ ಬದಲಾವಣೆಗಳನ್ನು ಸರಿಯಾಗಿ ಗುರುತಿಸಿದ್ದಾರೆ. ಹುಟ್ಟು – ಸಾವು ಗಳ ಮಧ್ಯದಲ್ಲಿ ಬರುವ ಕ್ರಿಯೆಗಳನ್ನು ಮಾಡಲು ನಾವು ಅಂದರೆ ಜಾ. ಲಿಂ. ಮ. ದವರು ಪ್ರತಿಯೊಂದು ಗ್ರಾಮಗಳಲ್ಲಿ ಬಸವ ತತ್ವ ಕ್ರಿಯಾಮೂರ್ತಿಗಳನ್ನು ತಯಾರು ಮಾಡಿದಲ್ಲಿ ಲಿಂಗಾಯತ ವು ತುಂಬಾ ವೇಗವಾಗಿ ಬೆಳೆಯುತ್ತದೆ. ಅಥವಾ ಈ ಪ್ರಕ್ರಿಯೆ ವೇಗ ಪಡೆದಲ್ಲಿ ಜಾತಿ ಜಂಗಮರು ಬಸವ ತತ್ವದ ಕಡೆಗೆ ಖಂಡಿತ ಬರುತ್ತಾರೆ.

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು