ಬೀದರ
ಸಾಮಾಜಿಕ ಹೋರಾಟಗಾರ, ಲಿಂಗಾಯತ ನಾಯಕ ಶ್ರೀಕಾಂತಸ್ವಾಮಿ ಅವರ ಮೇಲೆ ಬ್ರಾಹ್ಮಣ ಸಮುದಾಯದ ಕೆಲವರು ಸುಳ್ಳು ಆಪಾದನೆ ಮಾಡಿ ಮಾನಹಾನಿ ಮಾಡಿರುವುದನ್ನು ಬಸವ ಸಂಘಟನೆಗಳು ಖಂಡಿಸಿವೆ.
ಇಂದು ಮಾಧ್ಯಮಗಳಿಗೆ ಕಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಶ್ರೀಕಾಂತಸ್ವಾಮಿ ಬ್ರಾಹ್ಮಣರ ವಿರೋಧಿ ಅಲ್ಲ. ಅವರು ಬಸವ ಭಕ್ತರಾಗಿದ್ದು, ವಚನ ಸಾಹಿತ್ಯ ಹಾಗೂ ಭಾರತದ ಸಂವಿಧಾನವನ್ನು ಗೌರವಿಸುವವರಾಗಿದ್ದಾರೆ. ಬಸವಣ್ಣನವರ ವಿಚಾರ ಧಾರೆಯಂತೆ ಇನ್ನೊಬ್ಬರನ್ನು ಕೀಳಾಗಿ ಕಾಣುವ ಮನೋಭಾವನೆಯವರಲ್ಲಾ.
ಅಕ್ಟೊಬರ್ 17ರಂದು ಸಚಿವ ಪ್ರಿಯಾಂಕ ಖರ್ಗೆ ಅವರ ಪರವಾಗಿ ನಡೆದ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ವೇಳೆ ಶ್ರೀಕಾಂತಸ್ವಾಮಿ ಆರ್ ಎಸ್ ಎಸ್ ಬಡಗಿ-ದಂಡ ಹಿಡಿದು ಪಥಸಂಚಲನ ಮಾಡುತ್ತ ಜನರನ್ನು ಹೆದರಿಸುತ್ತಿದ್ದಾರೆ. ಹಾಗೂ ಆರ್ ಎಸ್ ಎಸ್ ದಲ್ಲಿರುವ ಬ್ರಾಹ್ಮಣರು ಹೊರಗಿನ ದೇಶದಿಂದ ವಲಸೆ ಬಂದವರು, ಭಾರತ ದೇಶದ ದ್ವಜ, ರಾಷ್ಟ್ರಗೀತೆಗೆ ಅವರು ಗೌರವ ಕೊಟ್ಟಿಲ್ಲ, ಎಂದು ಹೇಳಿದ್ದರು.
ಈಗ ಬೀದರ ಬ್ರಾಹ್ಮಣ ಸಂಘಟನೆಗಳ ಹೆಸರಿನಲ್ಲಿ ಕೆಲವರು ಶ್ರೀಕಾಂತಸ್ವಾಮಿ ಬ್ರಾಹ್ಮಣ ಸಮುದಾಯದವರ ಮಾನ ಹಾನಿ ಮಾಡಿದ್ದಾರೆ ಎಂದು ಸುಳ್ಳು ಆಪಾದನೆ ಮಾಡಿದ್ದಾರೇ.
ಶ್ರೀಕಾಂತಸ್ವಾಮಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ದಿಲ್ಲಿಯಲ್ಲಿ ಲಿಂಗಾಯತ ರ್ಯಾಲಿಗಳನ್ನು ಮಾಡಿ ಲಿಂಗಾಯತ ಸಮಾಜದ ಗೌರವ ವ್ಯಕ್ತಿ ಆಗಿದ್ದಾರೆ.
ಶ್ರೀಕಾಂತಸ್ವಾಮಿ ಧರ್ಮ ಜಾತಿ ಭೇದ ಮಾಡದೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ, ಸಾಮಾಜಿಕ ಕಾರ್ಯಗಳು ಮಾಡುತ್ತ ಜನಾನುರಾಗಿ ಆಗಿದ್ದಾರೆ. ಜಿಲ್ಲೆಯ ಎಲ್ಲಾ ಸಮುದಾಯದ ಜನರ ಕಣ್ಮಣಿ ಆಗಿದ್ದಾರೆ. ಕೊವಿಡ್ ವಿಪ್ಪತ್ತಿನಲ್ಲಿ ಹಳೆ ನಗರದಲ್ಲಿ ಕಷ್ಟದಲ್ಲಿ ಇದ್ದ ಹಿಂದೂ ಬ್ರಾಹ್ಮಣ ಮುಸ್ಲಿಂ ದಲಿತ ಹಿಂದುಳಿದವರ ಯೋಗಕ್ಷೇಮ ನೋಡಿಕೊಳ್ಳಲು ಹಗಲಿರುಳು ಶ್ರಮಿಸಿದ್ದಾರೆ, ಜೀವದ ಹಂಗು ಇಲ್ಲದೆ ಸಾವಿರಾರು ಜೀವ ಉಳಿಸಿದ್ದಾರೆ. ಬೀದರ ಜಿಲ್ಲೆಯ ಆಪತ್ಭಾಂದವ, ಸಾಮಾಜಿಕ ಹೋರಾಟಗಾರ, ಅಭಿವೃದ್ಧಿ ಹರಿಕಾರ, ದಿನಾಲೂ ನೂರಾರು ಜನರಿಗೆ ಸಹಾಯ ಮಾಡುತ್ತಾರೆ, ಇದು ಎಲ್ಲರಿಗೂ ಗೊತ್ತಿದ್ದ ವಿಷಯ.
ವೈಚಾರಿಕ ಪ್ರಗತಿಪರ ಹೋರಾಟಗಾರರು ಆಗಿದ್ದು, ಬ್ರಾಹ್ಮಣ ಸಮಾಜದಲ್ಲಿಯೂ ಅವರ ಕಾರ್ಯಕ್ರಮಗಳಲ್ಲಿ ಭಾಗವತ, ಕೃಷ್ಣಾಷ್ಟಮಿ ಮತ್ತಿತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆಂಬಲ ನೀಡುತ್ತಾರೆ, ನರಸಿಂಹ ಜೀರಾದಲ್ಲಿ ಜಿಲ್ಲಾಡಳಿತ ಮಳಗಿಗಳು ಹರಾಜು ಮಾಡುತ್ತಿರುವಾಗ ಮಧ್ಯಸ್ತಿಕೆ ವಹಿಸಿ ಪೂಜಾರಿಗಳ ಪರವಾಗಿ ಹೋರಾಟ ಮಾಡಿದ್ದಾರೆ.
ಇಂದಿಗೂ ಬ್ರಾಹ್ಮಣ ಸಮಾಜ ಅವರ ಕಾರ್ಯಗಳು ಮರೆಯುವಂತಿಲ್ಲ. ಬ್ರಾಹ್ಮಣ ಸಮಾಜದಲ್ಲಿ ಬೆಳೆಯುತ್ತಿರುವ ಅವರ ಒಡನಾಟ ಪ್ರತಿಷ್ಠೆ, ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯುತ್ತಿರುವ ಅವರ ನಾಯಕತ್ವ ಕೆಲವರಿಗೆ ಬ್ರಾಹ್ಮಣರಿಗೆ ಸಹಿಸಲು ಆಗುತ್ತಿಲ್ಲ.
ಇದೆಲ್ಲ ರಾಜಕೀಯ ಷಢ್ಯಂತ್ರ ಮತ್ತು ದ್ವೇಷದ ಭಾವನೆಯಿಂದ ಬ್ರಾಹ್ಮಣ ಸಮುದಾಯದಲ್ಲಿ ಶ್ರೀಕಾಂತಸ್ವಾಮಿ ಗೌರವ ಕಡಿಮೆ ಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನ ಮಾಡುತ್ತಿದ್ದಾರೆ. ತಾವು ರಾಜಕೀಯದಲ್ಲಿ ಬೆಳೆಯಲು ಲಿಂಗಾಯತ ಧರ್ಮದ ನಾಯಕರನ್ನು ಗುರಿ ಮಾಡಿದರೆ ಪ್ರಸಿದ್ಧ ಆಗಬಹುದು ಎಂದು ಹಗಲು ಕನಸ್ಸು ಈ ಹೋರಾಟಗಾರರು ಕಾಣುತ್ತಿದ್ದಾರೆ.
ಶ್ರೀಕಾಂತಸ್ವಾಮಿಯವರ ಕುಟುಂಬ ನೂರಾರು ವರ್ಷಗಳಿಂದ ಜನಸೇವೆ ಮಾಡುತ್ತಾ ಬಂದಿದೆ, ಅವರ ತಂದೆ ಲಿಂಗೈಕ್ಯ ವೀರಯ್ಯಸ್ವಾಮಿ ಮತ್ತು ಮಾವ ಲಿಂಗೈಕ್ಯ ಶಂಕರಪ್ಪ ದೇವರಶೆ ಸ್ವತಂತ್ರ ಸೇನಾನಿ ಆಗಿದ್ದು, ದೇಶದ ಮತ್ತು ರಾಜ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಪತ್ನಿ ಶ್ರೀಮತಿ ರಾಜಶ್ರೀಸ್ವಾಮಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಗಿ ಅಪಾರ ಸೇವೆ ಮಾಡಿದ್ದಾರೆ, ಅವರು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪಕ್ಷದ ಕೆಲಸ ಮಾಡಿ ಕಾಂಗ್ರೆಸ್ ನಾಯಕರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಇಂತಹ ಮನೆತನ ಮತ್ತು ಶ್ರೀಕಾಂತ ಸ್ವಾಮಿಯವರಿಗೆ ಮಸಿ ಬಳಿಯುವ ಕೆಲಸ ಕೆಲವು ಬ್ರಾಹ್ಮಣ ಸಮುದಾಯದ ಮುಖಂಡರು ಮಾಡುತ್ತಿದ್ದಾರೆ. ಆರ್ ಎಸ್ ಎಸ್ ಮುಖಂಡರು ಶ್ರೀಕಾಂತಸ್ವಾಮಿ ವಿರೋಧ ಮಾಡಬೇಕಿತ್ತು, ಆದರೆ ಕಾಂಗ್ರೆಸ್ ಪಕ್ಷದ ಬ್ರಾಹ್ಮಣ ಸಮುದಾಯದ ಮುಖಂಡರನ್ನು ಬಳಸಿಕೊಂಡು ಸಮುದಾಯದಲ್ಲಿ ಜಗಳ ಹಚ್ಚುವ ಕಾರ್ಯ ಮಾಡುತ್ತಿರುವುದು ಖಂಡನೀಯ.
ಬ್ರಾಹ್ಮಣ ಸಮಾಜ ಮತ್ತು ಅನ್ಯ ಸಮುದಾಯಗಳ ಮಧ್ಯೆ ಕಾದಾಟ ಆಗಿ ಹಾನಿ ಆದರೆ ಆರ್ ಎಸ್ ಎಸ್ ನೇರವಾಗಿ ಜವಾಬ್ದಾರಾಗುತ್ತಾರೆ. ಹೀಗೆ ಮುಂದುವರೆದರೆ ಇವರ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ. ಶ್ರೀಕಾಂತಸ್ವಾಮಿ ಅವರ ವಿರುದ್ಧ ಮಾಡಿದ್ದ ಆಪಾದನೆ, ಅವರು ವಾಪಸ್ ತಗೋಬೇಕು.
ನಾವೆಲ್ಲ ಸರ್ವ ಜಾತಿ ಹಾಗೂ ಧರ್ಮದವರು ಕೂಡಿ ಬಾಳೋಣ ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡೋಣ ಎಂದು ಬೀದರ ನಗರದ ಬಾಬುರಾವ ಹೊನ್ನಾ ವಕೀಲರು, ವಿಠಲ್ ದಾಸ ಪ್ಯಾಗೆ ನಿವೃತ್ತ ಪ್ರಾಚಾರ್ಯರು, ನಿಜಾಮುದ್ದೀನ ನಿವೃತ್ತ ಪ್ರಾಚಾರ್ಯರು, ಓಂಪ್ರಕಾಶ ರೊಟ್ಟೆ ಅಧ್ಯಕ್ಷರು, ವಿಶ್ವಗುರು ಬಸವಧರ್ಮ ಕೇಂದ್ರ, ಮಚ್ಚೇಂದ್ರ ವಾಘಮಾರೆ ಸಾಮಾಜಿಕ ಕಾರ್ಯಕರ್ತ ಇವರು ತಿಳಿಸಿದ್ದಾರೆ.
