ಬೆಳಗಾವಿಯಲ್ಲಿ ಲಿಂಗಾಯತ ನೂರು ಕಾಯಕ ಪಂಗಡಗಳ ಒಕ್ಕೂಟದ ಉದ್ಘಾಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಅಖಿಲ ಲಿಂಗಾಯತ ನೂರು ಕಾಯಕ ಪಂಗಡಗಳ ಒಕ್ಕೂಟದ ರಾಜ್ಯ ಮತ್ತು ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಬೆಳಗಾವಿಯ ಕನ್ನಡ ಭವನದಲ್ಲಿ ಬುಧವಾರ ನಡೆಯಿತು.

ಬೆಳಗಾವಿ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿ, ಯಮಕನಮರಡಿಯ ಪೂಜ್ಯ ಸಿದ್ಧಬಸವ ಸ್ವಾಮೀಜಿ ಮತ್ತು ಗಣ್ಯರಿಂದ ಧರ್ಮಗುರು, ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ
ಪುಷ್ಪಾರ್ಪಣೆ ಮಾಡಿ, ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶರಣ ಮುತ್ತೆಪ್ಪ ಗೋಡ್ಯಾಳ ಶರಣೆ ಮಹಾನಂದ ಪರುಶೆಟ್ಟಿ ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣ ಮಾಡಿದರು.

ಸಮಾಜದ ಎಲ್ಲಾ ಕಾಯಕ ವರ್ಗದ ಜನತೆ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಒಕ್ಕೂಟ ಗಟ್ಟಿಯಾಗಲಿ ಎಂದು ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿ ಸಂಘಟನೆಗೆ ಶುಭಹಾರೈಸಿದರು.

ರಾಜ್ಯ ಗೌರವಾಧ್ಯಕ್ಷ ಅರವಿಂದ ಪರವಶೆಟ್ಟಿ ಇಷ್ಟಲಿಂಗದ ಮಹತ್ವ ತಿಳಿಸಿಕೊಟ್ಟರು. ಸಂಸ್ಥಾಪಕ ರಾಜ್ಯಾಧ್ಯಕ್ಷ ಮಲ್ಲಪ್ಪ (ಪ್ರೇಮ್) ಚೌಗಲಾ, ಪ್ರಧಾನ ಕಾರ್ಯದರ್ಶಿ ಕೆಂಪಣ್ಣ ಎಕ್ಸಂಬಿ, ಖಜಾಂಚಿ ಪ್ರಸಾದ ಹಿರೇಮಠ ಸೇರಿದಂತೆ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಹಿಸಿ ಯ.ರು. ಪಾಟೀಲ ಮಾತನಾಡಿದರು.

ಶ್ರೀಕಾಂತ ಶಾನವಾಡ ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ಫ್ರೇಮ್ ಚೌಗಲ ವಂದಿಸಿದರು. ಪದಾಧಿಕಾರಿಗಳಾದ ಆರ್.ಪಿ. ಪಾಟೀಲ, ಸುಜಿತ್ ಮುಳಗುಂದ, ಬಸವರಾಜ ರಾಯವ್ವಗೋಳ, ಸತೀಶ ಚೌಗಲ ಸೇರಿದಂತೆ ಕಾಯಕಜೀವಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KW7PgYimGT7HL73bAEKzSR

Share This Article
1 Comment
  • ಈ ನೂರು ಕಾಯಕ ಒಕ್ಕೂಟ ಕಟ್ಟುವ ಉದ್ದೇಶ ಏನು?
    ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯನ್ನು ಕೊಡಲೊ?
    ಲಿಂಗಾಯತ ಧರ್ಮದಲ್ಲಿ ಒಕ್ಕಟ್ಟು ಇಲ್ಲ ಅನ್ನುವುದನ್ನು ತೋರಿಸಿ ಕೊಡಲೊ?
    ನೂರಾರು ಸಂಘಟನೆ ಕಟ್ಟಿ, ಲಿಂಗಾಯತ ಒಂದು ಧರ್ಮ, ಅನ್ನುವ ಹೋರಾಟ ದಲ್ಲಿ ಭಿನ್ನ ರಾಗ ಹಾಡುವುದು ಅನ್ನುವುದು ಆದರೆ, ಸಂಘಟನೆಯ ಉಪಯೋಗ ಇಲ್ಲ

Leave a Reply

Your email address will not be published. Required fields are marked *