ಬೆಳಗಾವಿ
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ವಾರದ ಸಾಮೂಹಿಕ ಪ್ರಾಥ೯ನೆ, ವಚನ ವಿಶ್ಲೇಷಣೆ, ಯೋಗ ಮತ್ತು ಆರೋಗ್ಯ ಕುರಿತು ರವಿವಾರ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಿದ್ದಪ್ಪ ಸಾರಾಪುರೆ ಉಪನ್ಯಾಸ ನೀಡುತ್ತ, ಒಂದು ಜೀವಿಯ ದೇಹ ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು.
ಯೋಗವು ಮನುಷ್ಯನ ದೈಹಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೆ ಪೂರಕ. ಸರಳ ಮೊತ್ತವೂ ಹೌದು, ಯೋಗವು ಆರೋಗ್ಯಕರ ಜೀವನ ಶೈಲಿಯ ಕಲೆ ಮತ್ತು ವಿಜ್ಞಾನವಾಗಿದೆ. ಇದು ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದೆ. ಆಧ್ಯಾತ್ಮಿಕ ಶಿಸ್ತಾಗಿದೆ. ಮನಸ್ಸು ಮತ್ತು ದೇಹದ ನಡುವೆ ಆದರಿಸಿದ ಯೋಗ, ಜೂನ 21 ರಂದು ಅಂತರಾಷ್ಟ್ರೀಯ ಯೋಗ ದಿನವೆಂದು ಆಚರಿಸುತ್ತಾರೆ ಎಂದು ಸಾರಾಪುರೆ ತಿಳಿಸಿದರು. ಮಕ್ಕಳಿಗೆ ಯೋಗ ಮಾಡಿಸಿದ ಅವರು, ಯೋಗ ಅನುಲೋಮ ಖಾಲಿ ಹೊಟ್ಟೆಯಲ್ಲಿ ಮಾಡಬೇಕೆಂದರು.

ಪ್ರಾರಂಭದಲ್ಲಿ ಬಿ.ಪಿ. ಜೇವಣಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಆನಂದ ಕರಕಿ, ದಾಕ್ಷಾಯಿಣಿ ಪೂಜೇರಿ, ವಿ ಕೆ ಪಾಟೀಲ, ಬಸವರಾಜ ಬಿಜ್ಜರಗಿ, ಜಯಶ್ರೀ ಚಾವಲಗಿ, ಬಿ. ಪಿ. ಜವಣಿ, ಜ್ಯೋತಿ ನಾಯಕ ವಚನ ವಿಶ್ಲೇಷಣೆ ಮಾಡಿದರು.
ನಗರದಲ್ಲಿ ನಡೆದ ಬಸವ ಜಯಂತ್ಯುತ್ಸವದಲ್ಲಿ ಸಂಘಟನೆಯ ಸದಸ್ಯರು ಬಂದು ಯಶಸ್ವಿಗೊಳಿಸಿದ್ದಕ್ಕಾಗಿ ಅಭಿನಂದನೆ ಹೇಳಲಾಯಿತು. ಶೇಖರ ವಾಲಿಇಟಗಿ, ದೊಡ್ಡಗೌಡ ಪಾಟೀಲ, ಮಹಾಂತೇಶ ಮೆಣಸಿನಕಾಯಿ, ತಿಗಡಿ ದಂಪತಿಗಳು, ಕೆಂಪಣ್ಣಾ ರಾಮಾಪೂರೆ, ಅನೀಲ ರಘಶೆಟ್ಟಿ, ಮಹಾಂತೇಶ ತೋರಣಗಟ್ಟಿ, ಬಸವರಾಜ ಪೂಜೇರಿ, ಶಿವಾನಂದ ನಾಯಕ, ಶರಣ ಶರಣೆಯರು ಉಪಸ್ಥಿತರಿದ್ದರು.
ಆನಂದ ಕರಕಿ ಸ್ವಾಗತಿಸಿ ನಿರೂಪಿಸಿದರು. ಲಿಂಗಾಯತ ಸಂಘಟನೆ ಪ್ರಸಾದ ಸೇವೆ ಏಪ೯ಡಿಸಿತ್ತು.